ಆ್ಯಪ್ನಗರ

ನನ್ನ ಕೊನೆಯ ಉಸಿರಿನ ವರೆಗೂ ಶ್ರೇಷ್ಠ ಪ್ರದರ್ಶನವನ್ನೇ ನೀಡುತ್ತೇನೆ: ಜಡೇಜಾ ಭರವಸೆ

ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿರೋಚಿತ ಹೋರಾಟ ನೀಡಿರುವ ರವೀಂದ್ರ ಜಡೇಜಾ, ಟೀಮ್ ಇಂಡಿಯಾ ನೈಜ ತ್ರಿಡಿ ಪ್ಲೇಯರ್ ಎಂದೆನಿಸಿಕೊಂಡಿದ್ದಾರೆ. ಆದರೂ 18 ರನ್ ಅಂತರದ ಸೋಲಿನಿಂದಾಗಿ ವಿಶ್ವಕಪ್ ಕನಸು ಭಗ್ನಗೊಂಡಿದೆ.

Vijaya Karnataka Web 12 Jul 2019, 3:53 pm
ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆದ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 18 ರನ್ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ ಕೂಟದಿಂದಲೇ ಹೊರಬಿದ್ದಿದೆ.
Vijaya Karnataka Web ravindra-jadeja-02


ಒಂದು ಹಂತದಲ್ಲಿ ಭಾರತ ಹೀನಾಯ ಸೋಲಿಗೊಳಗಾಗುವ ಭೀತಿಯಿತ್ತು. ಆದರೆ ಏಳನೇ ವಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ಜತೆಗೆ ಶತಕದ ಜತೆಯಾಟದಲ್ಲಿ ಭಾಗಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.

ಅಲ್ಲದೆ ಕೊನೆಯ ಹಂತದ ವರೆಗೂ ಹೋರಾಟವನ್ನು ಪ್ರದರ್ಶಿಸಿದರು. 77 ರನ್‌ಗಳ ವಿರೋಚಿತ ಹೋರಾಟ ನೀಡಿದ ಜಡೇಜಾ ಇನ್ನೇನು ಪಂದ್ಯ ಗೆಲ್ಲಿಸಲಿದ್ದಾರೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಈ ಮೂಲಕ ಸಂಜಯ್ ಮಂಜ್ಲೆಕರ್ ಸೇರಿದಂತೆ ತಮ್ಮೆಲ್ಲ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಇದೀಗ ಪ್ರತಿಕ್ರಿಯೆ ನೀಡಿರು ಜಡೇಜಾ ತಮ್ಮ ಕೊನೆಯ ಉಸಿರಿನ ವರೆಗೂ ಶ್ರೇಷ್ಠ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.

ಪ್ರತಿಯೊಂದು ಪತನದ ಬಳಿಕವೂ ಎಂದಿಗೂ ಬಿಟ್ಟುಕೊಡದೆ ಎದ್ದೇಳುವಂತೆ ಕ್ರೀಡೆಯು ನನಗೆ ಕಲಿಸಿಕೊಟ್ಟಿದೆ. ನನ್ನ ಸ್ಪೂರ್ತಿಗೆ ಕಾರಣವಾದ ಅಭಿಮಾನಿಗಳಿಗ ಎಷ್ಟೇ ಧನ್ಯವಾದಗಳನ್ನು ಸಲ್ಲಿಸಿದರೂ ಸಾಕಾಗಲಾರದು. ಎಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. ಹೀಗೆ ಹುರಿದುಂಬಿಸುತ್ತಲೇ ಇರಿ, ನನ್ನ ಕೊನೆಯ ಉಸಿರಿನ ವರೆಗೂ ಶ್ರೇಷ್ಠ ಪ್ರದರ್ಶನವನ್ನು ನೀಡಲಿದ್ದೇನೆ. ಲವ್ ಯೂ ಆಲ್ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌