ಆ್ಯಪ್ನಗರ

ಟೀಂ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಫ್ಯಾನ್ಸ್

ಒಂದೆಡೆ ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಲಾಗದೇ ಸೋಲನುಭವಿಸಿದ ಸಂಕಟ ಟೀಂ ಇಂಡಿಯಾದ್ದಾಗಿದ್ದರೆ, ಮತ್ತೊಂದೆಡೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದೀರಿ ಎಂದು ದೇಶದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ.

TNN & Agencies 1 Jul 2019, 9:42 pm
ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಭಾರತ ತಂಡದ ನಿಧಾನ ಗತಿಯ ಆಟ ವ್ಯಾಪಕ ಟೀಕೆಗೊಳಗಾಗಿದೆ. ರನ್‌ ಚೇಸಿಂಗ್‌ ವೇಳೆ ಭಾರತೀಯರು ನೈಜ ಆಟ ಪ್ರದರ್ಶಿಸಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರರು ಆರೋಪಿಸಿದರೆ, ಅಂತಿಮ ಓವರ್‌ಗಳಲ್ಲಿ ಧೋನಿ ಹಾಗೂ ಕೇದಾರ್‌ ಜಾಧವ್‌ ನಿಧಾನ ಗತಿಯ ಆಟವಾಡಿದ್ದನ್ನು ಭಾರತ ತಂಡದ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
Vijaya Karnataka Web IND ENG


ನಿಧಾನ ಬ್ಯಾಟಿಂಗ್‌
ಧೋನಿ ಹಾಗೂ ಕೇದಾರ್‌ ಜಾಧವ್‌ ಜೋಡಿ ಕೊನೆಯ 5 ಓವರ್‌ಗಳಲ್ಲಿ 39 ರನ್‌ ಪೇರಿಸಿರುವ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಐದು ವಿಕೆಟ್‌ಗಳು ಉಳಿದಿರುವಾಗ ನಿಧಾನ ಆಟಕ್ಕೆ ಮೊರೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಧೋನಿ ತಪ್ಪಲ್ಲ
ಪಂದ್ಯದ 11ನೇ ಓವರ್‌ನಲ್ಲಿ ಇಂಗ್ಲೆಂಡ್‌ ತಂಡದ ಜೇಸನ್‌ ರಾಯ್‌ ಗ್ಲವ್ಸ್‌ಗೆ ಚೆಂಡು ಸವರಿ ಹೋಗಿ ಧೋನಿ ಕೈ ಸೇರಿದ್ದರೂ, ಅವರಾರ‍ಯಕೆ ಡಿಆರ್‌ಎಸ್‌ ಮೊರೆ ಹೋಗಿಲ್ಲ ಎಂದು ಭಾರತದ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಪಂದ್ಯೋತ್ತರದ ಪತ್ರಿಕಾ ಗೋಷ್ಠಿಯಲ್ಲಿ ಇದಕ್ಕೆ ಉತ್ತರ ನೀಡಿದ ಟೀಮ್‌ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ ಡಿಆರ್‌ಎಸ್‌ ಮೊರೆ ಹೋಗುವುದು ಧೋನಿಯೊಬ್ಬರ ಕೆಲಸವಲ್ಲ. ಇಂಥ ಸಂದರ್ಭದಲ್ಲಿ ಚೆಂಡು ಬಡಿದಿರುವುದು ಕೆಲವರಿಗೆ ಗೊತ್ತಾದರೆ, ಕೆಲವರಿಗೆ ಗೊತ್ತಾಗಿರುವುದಿಲ್ಲ. ನಾಯಕ ಒತ್ತಡದಲ್ಲಿರುವ ಕಾರಣ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಯಿತು ಎಂದು ಹೇಳಿದ್ದಾರೆ.

ಬೆಸ್ಟ್ ಪಂದ್ಯದಲ್ಲಿ ಭಾರತ ಆಡಲೇ ಇಲ್ಲ: ಪಾಕ್‌ ಕ್ರಿಕೆಟ್ ಫ್ಯಾನ್ಸ್ ಅಳಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌