ಆ್ಯಪ್ನಗರ

ಭಾರತ vs ಬಾಂಗ್ಲಾ: ವಿಶ್ವಾಸವೇ ಗೆಲುವು

ಭಾನುವಾರದ ಇಂಗ್ಲೆಂಡ್ ಮತ್ತು ಭಾರತ ನಡುವಣ ಪಂದ್ಯದಲ್ಲಿ ಸೋಲನುಭವಿಸಿರುವ ಟೀಂ ಇಂಡಿಯಾ, ಮಂಗಳವಾರ ಬಾಂಗ್ಲಾವನ್ನು ಎದುರಿಸುತ್ತಿದೆ.

Agencies 1 Jul 2019, 9:06 pm
ಲಂಡನ್: ಟೀಂ ಇಂಡಿಯಾ ಭಾನುವಾರದ ಪಂದ್ಯವನ್ನು ಅತಿಯಾದ ಆತ್ಮವಿಶ್ವಾಸದಿಂದ ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಮಂಗಳವಾರ ಬಾಂಗ್ಲಾವನ್ನು ಭಾರತ ಎದುರಿಸುತ್ತಿದ್ದು, ಅಲ್ಲಿ ವಿಶ್ವಾಸವೇ ಮುಖ್ಯವಾಗಿರಲಿದೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ.
Vijaya Karnataka Web India Team


ಭಾರತದ ವಿರುದ್ಧ ಆಡುವ ತಂಡಗಳು ಇದುವರೆಗೆ ಸಾಕಷ್ಟು ಎಚ್ಚರಿಕೆಯಿಂದ ಇರುತ್ತಿದ್ದವು. ಆದರೆ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯನ್ನು ಬಿಟ್ಟರೆ ಮಿಕ್ಕವರ ಬ್ಯಾಟಿಂಗ್‌ನಲ್ಲಿ ಶಕ್ತಿ ಕಡಿಮೆ ಎನ್ನುವುದು ಈಗ ಗೊತ್ತಾಗಿದೆ.

ಕ್ರೀಡೆಯಲ್ಲಿ ವಿಶ್ವಾಸವೇ ಗೆಲುವಿನ ಮೊದಲ ಮೆಟ್ಟಿಲು. ತನ್ನ ತಂಡದ ಆಟಗಾರರ ವಿಶ್ವಾಸ ಹಾಗೂ ಎದುರಾಳಿಗಿರುವ ಸಾಮರ್ಥ್ಯ‌ದ ಅರಿವು ಜಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗೆಂದು ಎದುರಾಳಿಗಳು ನೊಂದವರು ಮಾತ್ರವಲ್ಲ, ಆತಂಕಿತರೂ ಆಗಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಬಾಂಗ್ಲಾದೇಶ ಸೆಮಿಫೈನಲ್ಸ್‌ ತಲುಪಲು ತನ್ನ ಪಾಲಿಗೆ ಬಾಕಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯಿಸಬೇಕು. ಹೀಗಾಗಿ ಆ ತಂಡ ಭಯದಲ್ಲಿ ಆಡುವುದೇ ಅಥವಾ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದೇ ಎಂಬುದು ಇಂದಿನ ಪಂದ್ಯದ ಆಸಕ್ತಿದಾಯಕ ಸಂಗತಿ.

ಬಾಂಗ್ಲಾದೇಶ ತಂಡ ಭಾರತದಷ್ಟೇ ಸ್ಪಿನ್‌ಗೆ ಆದ್ಯತೆ ನೀಡುತ್ತದೆ. ಜತೆಗೆ ಸಪಾಟು ಪಿಚ್‌ನಲ್ಲಿ ಹೆಚ್ಚಿನ ರನ್‌ ಹೊಳೆ ಹರಿಯುವ ಸಾಧ್ಯತೆಯೂ ಇದೆ ಎಂದು ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌