ಆ್ಯಪ್ನಗರ

ಫೈನಲ್‌ನಲ್ಲಿ ಪ್ರಮಾದವೆಸಗಿದ ಅಂಪೈರ್; ಐಸಿಸಿ ವಿರುದ್ಧ ಆಕ್ರೋಶ

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಅಂಪೈರ್ ಕೆಟ್ಟ ತೀರ್ಪು ಹಾಗೂ ಐಸಿಸಿ ನಿಯಮಗಳ ಬಗ್ಗೆ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ.

Vijaya Karnataka Web 15 Jul 2019, 6:34 pm
ಲಂಡನ್: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇನ್ನೇನು ನ್ಯೂಜಿಲೆಂಡ್ ಪ್ರಶಸ್ತಿ ಮುಡಿಗೇರಿಸಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 15 ರನ್‌ಗಳ ಅವಶ್ಯಕತೆಯಿತ್ತು.
Vijaya Karnataka Web ben-stokes-08


ಆದರೆ ಅಕ್ಷರಶ: ನ್ಯೂಜಿಲೆಂಡ್ ಪಾಲಿಗೆ ಅದೃಷ್ಟ ಕೈಕೊಟ್ಟಿತ್ತು. ಪರಿಣಾಮ 49.4ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಎರಡು ರನ್ ಕದಿಯಲೆತ್ನಿಸುವ ವೇಳೆಯಲ್ಲಿ ಕ್ರೀಸ್‌ಗೆ ಡೈವ್ ಹೊಡೆದ ಅದೇ ಸಂದರ್ಭದಲ್ಲಿ ಫೀಲ್ಡರ್ ಎಸೆದ ಥ್ರೋ ನೇರವಾಗಿ ಬ್ಯಾಟ್‌ಗೆ ಬಡಿದು ಬೌಂಡರಿ ಗೆರೆಯನ್ನು ಸೇರಿಯೇ ಬಿಟ್ಟಿತು.

ಪರಿಣಾಮ ಎರಡು ರನ್ ಗಳಿಸುವ ಸಂದರ್ಭದಲ್ಲಿ ಮತ್ತಷ್ಟು ನಾಲ್ಕು ಸೇರಿದಂತೆ ಒಟ್ಟು ಆರು ರನ್‌ಗಳನ್ನು ಪಡೆದಿತು. ಇದರಿಂದಾಗಿ ಪಂದ್ಯವನ್ನು ರೋಚಕ ಟೈನಲ್ಲಿ ಅಂತ್ಯಗೊಳಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಬಳಿಕ ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಆದಾಗ ಅತಿ ಹೆಚ್ಚು ಬೌಂಡರಿ ಗಳಿಕೆಯ(ಬೌಂಡರಿ ಹಾಗೂ ಸಿಕ್ಸರ್) ಆಧಾರದಲ್ಲಿ ಇಂಗ್ಲೆಂಡ್ ಕಿರೀಟವನ್ನು ಮುತ್ತಿಕ್ಕಿತ್ತು.

ಪಂದ್ಯದಲ್ಲಿ ಕೆಟ್ಟ ತೀರ್ಪುಗಳ ಮೂಲಕ ಟೀಕೆಗೊಳಗಾಗಿರುವ ಅಂಪೈರ್‌ಗಳು ಈ ನಿರ್ಣಾಯಕ ಹಂತದಲ್ಲಿ ಐದು ರನ್ ಬದಲು ಆರು ರನ್ ನೀಡಿರುವುದು ಟೀಕೆಗೆ ಗುರಿಯಾಗಿದೆ. ಮಾಜಿ ಅಂಪೈರ್ ಸೈಮನ್ ಟಫೆಲ್ ಸಹ ಇದನ್ನೇ ಬೊಟ್ಟು ಮಾಡಿದ್ದಾರೆ. ಇದೊಂದು ಸ್ಪಷ್ಟ ಮಿಸ್ಟೇಕ್ ಆಗಿದ್ದು, ಅಂಪೈರ್ ನಿರ್ಣಾಯಕದಲ್ಲಿ ತಪ್ಪಾಗಿದೆ ಎಂದಿದ್ದಾರೆ. ಹಾಗಿದ್ದರೂ ಅಂಪೈರ್ ಬೆಂಬಲಕ್ಕೆ ನಿಂತಿರುವ ಸಂದರ್ಭದಲ್ಲಿ ಸೈಮನ್, ಇಂತಹ ಸಂದರ್ಭದಲ್ಲಿ ನಿರ್ಣಯ ನೀಡುವುದು ಕಷ್ಟಕರವೆನಿಸುತ್ತದೆ ಎಂದಿದ್ದಾರೆ.

ಏತನ್ಮಧ್ಯೆ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಎಂದು ಘೋಷಿಸಿರುವುದಕ್ಕೆ ಅಭಿಮಾನಿಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಜೆರ್ಸಿ ನಂಬರ್‌ಗಳನ್ನು ಒಟ್ಟು ಸೇರಿಸಿ ವಿಜೇತರನ್ನು ಘೋಷಿಸಿ ಎಂದು ಜರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌