ಆ್ಯಪ್ನಗರ

ಅಂಕ ಹಂಚಿಕೆಯಿಂದ ಬಲಿಷ್ಠ ತಂಡಗಳಿಗೆ ನಷ್ಟ: ಸುನಿಲ್‌ ಗವಾಸ್ಕರ್‌

ಇಂಗ್ಲೆಂಡ್‌ನಲ್ಲಿ ಹವಾಗುಣ ಕಾಟ ಕೊಡುತ್ತಿದೆ. ಪಂದ್ಯ ರದ್ದಾಗಿ ಅಂಕ ಹಂಚಿಕೊಳ್ಳುವುದರಿಂದ ದುರ್ಬಲ ತಂಡಗಳಿಗೇನೋ ಲಾಭವೇ. ಟಾಪ್‌-4 ಮೇಲೆ ಕಣ್ಣಿಟ್ಟಿರುವ ತಂಡಗಳಿಗೆ ನಷ್ಟ.

Agencies 13 Jun 2019, 5:23 pm
ಮುಂಬಯಿ: ಮಳೆಯಿಂದಾಗಿ ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳು ರದ್ದಾಗುತ್ತಿರುವುದರಿಂದ ಇತ್ತಂಡಗಳಿಗೂ ಅಂಕ ಹಂಚಿಕೆ ಮಾಡಲಾಗುತ್ತಿದ್ದು, ಅದರಿಂದ ಬಲಿಷ್ಠ ತಂಡಗಳಿಗೆ ತೊಂದರೆಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಹೇಳಿದ್ದಾರೆ.
Vijaya Karnataka Web ICC1


ಇಂಗ್ಲೆಂಡ್‌ನಲ್ಲಿ ಹವಾಗುಣ ಕಾಟ ಕೊಡುತ್ತಿದೆ. ಪಂದ್ಯ ರದ್ದಾಗಿ ಅಂಕ ಹಂಚಿಕೊಳ್ಳುವುದರಿಂದ ದುರ್ಬಲ ತಂಡಗಳಿಗೇನೋ ಲಾಭವೇ. ಟಾಪ್‌-4 ಮೇಲೆ ಕಣ್ಣಿಟ್ಟಿರುವ ತಂಡಗಳಿಗೆ ನಷ್ಟ. ಭಾರತ-ನ್ಯೂಜಿಲೆಂಡ್‌ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಭಯವಿದೆ.

ಭಾರತ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಸೋತಿತ್ತಾದರೂ, ಆ ಬಳಿಕ ಕೊಹ್ಲಿ ಪಡೆ ಅದ್ಭುತ ಲಹರಿಯಲ್ಲಿದೆ. ಧವನ್‌ ಗಾಯಗೊಂಡಿರುವುದು ಭಾರತಕ್ಕೆ ದೊಡ್ಡ ಹೊಡೆತ. ಅವರ ಜಾಗದಲ್ಲಿ ರಾಹುಲ್‌ ಆಡುವುದರಿಂದ 4ನೇ ಕ್ರಮಾಂಕ ತೆರವುಗೊಳ್ಳಲಿದೆ. ಆ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಆಡಬಹುದು.

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ಆಡಿರುವ ಅವರಿಗೆ ಕಿವೀಸ್‌ ದಾಳಿಯ ಪರಿಚಯವಾಗಿರುತ್ತದೆ. ಆ ಸಂಗತಿ ಅವರ ಆಯ್ಕೆಗೆ ನೆರವಾಗಬಹುದು. ಇನ್ನು, ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಜಾಗದಲ್ಲಿ ವೇಗಿ ಮೊಹಮ್ಮದ್‌ ಶಮಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಇಂತಹ ಬದಲಾವಣೆಗಳೇನಿದ್ದರೂ ಹವಾಗುಣವನ್ನು ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌