ಆ್ಯಪ್ನಗರ

Ind Vs Pak: ಬಾಬರ್ ಔಟ್ ಮಾಡಿದ್ದು 'ಡ್ರೀಮ್ ಡೆಲಿವರಿ' ಎಂದ ಯಾದವ್

ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್ ಅಜಂ ಔಟ್ ಮಾಡಿದ್ದೇ ಈ ಟೂರ್ನಮೆಂಟಿನ ನನ್ನ ಅತ್ಯುತ್ತಮ ಎಸೆತವಾಗಿದೆ. ಏಷ್ಯಾ ಕಪ್‌ನಲ್ಲೂ ಅವರನ್ನು ಔಟ್ ಮಾಡಿದ್ದೆ ಎಂದು ಕುಲದೀಪ್ ಯಾದವ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

TIMESOFINDIA.COM 17 Jun 2019, 1:47 pm
ಮ್ಯಾಂಚೆಸ್ಟರ್: 89 ರನ್ನುಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದು, ಐಸಿಸಿ ವಿಶ್ವಕಪ್ ಕೂಟದಲ್ಲಿ ಬದ್ಧ ಪ್ರತಿಸ್ಫರ್ಧಿ ವಿರುದ್ಧ ತನ್ನ ಅಜೇಯ ಸಾಧನೆಯನ್ನು ಕಾಯ್ದುಕೊಂಡಿರುವ ಟೀಂ ಇಂಡಿಯಾ ಹೊಸ ಹುರುಪಿನಲ್ಲಿದೆ. ಈ ಆಟದ ಪ್ರಮುಖ ತಿರುವಿನ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್, ಪಾಕ್ ಆಟಗಾರ ಬಾಬರ್ ಅಜಂ ಅವರನ್ನು ತನ್ನ ಮ್ಯಾಜಿಕಲ್ ಎಸೆತದ ಮೂಲಕ ಔಟ್ ಮಾಡಿರುವ ರೀತಿಯಂತೂ ಯಾವುದೇ ಸ್ಪಿನ್ನರ್‌ನ ಕನಸು ನನಸಾಗುವ ಕ್ಷಣಗಳಲ್ಲೊಂದು ಎಂದು ಪ್ರತಿಕ್ರಿಯಿಸಿದ್ದಾರೆ.
Vijaya Karnataka Web india vs pakistan bowled out babar is a dream delivery of a spinner says kuldeep yadav
Ind Vs Pak: ಬಾಬರ್ ಔಟ್ ಮಾಡಿದ್ದು 'ಡ್ರೀಮ್ ಡೆಲಿವರಿ' ಎಂದ ಯಾದವ್


ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ ಪಾಕಿಸ್ತಾನ ಎದುರು 89 ರನ್ ಅಂತರದಲ್ಲಿ ಭಾರತ ಗೆಲುವುಸಾಧಿಸಿದ ಪಂದ್ಯದಲ್ಲಿ ಎಡಗೈ ಸ್ಪಿನ್ ಬೌಲರ್ ಯಾದವ್ 32 ರನ್ನುಗಳಿಗೆ 2 ಅಮೂಲ್ಯ ವಿಕೆಟ್ ಕಿತ್ತು ಮಿಂಚಿದ್ದರು.

ಭಾರತದ ಗುರಿಯನ್ನು ಬೆಂಬತ್ತುತ್ತಿದ್ದ ಪಾಕಿಸ್ತಾನದ ಪರವಾಗಿ ಎರಡನೇ ವಿಕೆಟ್‌ಗೆ ಫಖರ್ ಜಮಾನ್ ಅವರೊಂದಿಗೆ ಬಾಬರ್ ಅಜಂ ಉತ್ತಮ ಜತೆಯಾಟ ನೀಡುತ್ತಿದ್ದರು. ಅವರು 48 ರನ್ ಮಾಡಿದ್ದಾಗ ಯಾದವ್ ಬೌಲಿಂಗಿನಲ್ಲಿ ಬ್ಯಾಟ್ ಮತ್ತು ಪ್ಯಾಡ್ ಮೂಲಕ ಚೆಂಡು ಹಾದು ಹೋಗಿ ವಿಕೆಟ್‌ಗೆ ಬಡಿದು ಬೌಲ್ಡ್ ಔಟ್ ಆಗಿದ್ದರು. ಇಲ್ಲಿಗೆ ಫಖರ್ ಜಮಾನ್ (62) ಅವರೊಂದಿಗಿನ 104 ರನ್ನುಗಳ ಜತೆಯಾಟ ಕೊನೆಗೊಂಡಿತ್ತು.

ಭಾರತ, ಪಾಕ್ ಕ್ರಿಕೆಟ್: ವೈವಿಧ್ಯಮಯ ಟ್ರೋಲ್, ಮೀಮ್ಸ್

ಬಾಬರ್ ಔಟ್ ಮಾಡಿದ್ದೇ ಈ ಟೂರ್ನಮೆಂಟಿನ ನನ್ನ ಅತ್ಯುತ್ತಮ ಎಸೆತವಾಗಿದೆ. ಏಷ್ಯಾ ಕಪ್‌ನಲ್ಲೂ ಅವರನ್ನು ಔಟ್ ಮಾಡಿದ್ದೆ ಎಂದು ಯಾದವ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮಳೆಯಿಂದಾಗಿ ಆಟ ನಿಂತಾಗ ನಾನು ಹೋಗಿ ಮತ್ತೊಮ್ಮೆ ಆ ಎಸೆತವನ್ನು ವೀಕ್ಷಿಸಿದೆ. ಅದ್ಭುತವಾದ ಟರ್ನ್ ಇದರಲ್ಲಿತ್ತು. ಯಾವುದೇ ಸ್ಪಿನ್ನರ್‌ಗೆ ಅತ್ಯಂತ ಇಷ್ಟವಾಗಬಹುದಾದ ಡೆಲಿವರಿ ಇದು ಎಂದವರು ಹೇಳಿದರು.

'ಪ್ರತಿಯೊಬ್ಬರೂ ಕನಸು ಕಾಣಬಲ್ಲ ಡೆಲಿವರಿ ಇದು. ಬ್ಯಾಟ್ಸ್‌ಮನ್‌ನನ್ನು ವಂಚಿಸಿ, ಆತ ತಪ್ಪೆಸಗುವಂತೆ ಪ್ರಚೋದಿಸಬಹುದಾದ ಎಸೆತ. ಪರ್ಫೆಕ್ಟ್ ಎಸೆತವಿದು' ಎಂದಿದ್ದಾರೆ ಯಾದವ್.

ಪ್ರಧಾನಿ, ಕ್ರಿಕೆಟ್ ತಜ್ಞ ಇಮ್ರಾನ್ ಖಾನ್ ಮಾತಿಗೆ ಬೆಲೆ ನೀಡದ ಪಾಕ್ ಕ್ಯಾಪ್ಟನ್

ಮುಂದಿನ ಓವರಿನಲ್ಲಿಯೇ ಯಾದವ್ ಅವರು ಫಖರ್ ಅವರನ್ನೂ ಪೆವಿಲಿಯನ್‌ಗಟ್ಟಿದ್ದರು. ಎಡಗೈ ಬ್ಯಾಟ್ಸ್‌ಮನ್ ಫಖರ್ ಅವರು ಯಾದವ್ ಎಸೆತದಲ್ಲಿ ಶಾರ್ಟ್ ಫೈನ್ ಲೆಗ್ ಕ್ಷೇತ್ರದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಬೇಕಾಯಿತು.

ಮಳೆಯಿಂದಾಗಿ 40 ಓವರುಗಳಲ್ಲಿ 302 ರನ್ ಪರಿಷ್ಕೃತ ಗುರಿ ನೀಡಲಾಗಿತ್ತು. ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯ ಅವರೂ ತಲಾ 2 ವಿಕೆಟ್ ಪಡೆದುಕೊಂಡರು. ಪಾಕಿಸ್ತಾನ ನಿಗದಿತ ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ದಾಖಲಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತ್ತು.

ಬಾಬರ್ ಮತ್ತು ಫಖರ್ ಇಬ್ಬರೂ ಉತ್ತಮವಾಗಿ ಸ್ಪಿನ್ ಎದುರಿಸುತ್ತಾರೆ. ಆಕ್ರಮಣಕಾರಿಯಾಗಿಯೇ ಆಡುತ್ತಿದ್ದರು. ಈ ಹಂತದಲ್ಲಿ ಜತೆಯಾಟ ಭೇದಿಸುವುದು ಅಗತ್ಯವಿತ್ತು ಎಂದಿದ್ದಾರೆ ಯಾದವ್.

ವಿಶ್ವಕಪ್ ಸಮಗ್ರ ಮಾಹಿತಿಗಾಗಿ ಇಲ್ಲಿದೆ World Cup 2019 ವಿಶೇಷ ಪುಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌