ಆ್ಯಪ್ನಗರ

ಬುಮ್ರಾ ನಗುವಿನ ಹಿಂದಿದೆ ಗಾಢವಾದ ರಹಸ್ಯ!

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಪರಿಣಾಮಕಾರಿ ಪ್ರದರ್ಶನ ನೀಡುವ ಇರಾದೆಯಲ್ಲಿದ್ದಾರೆ. ಹಾಗಾಗಿ ಅಭ್ಯಾಸ ಅವಧಿಯಲ್ಲಿ ಯಾವುದೇ ರಾಜಿಗೂ ತಯಾರಾಗದೆ ಕಠಿಣ ತರಬೇತೆಯನ್ನು ನಡೆಸುತ್ತಿದ್ದಾರೆ.

Vijaya Karnataka Web 21 Jun 2019, 4:40 pm
ಸೌತಾಂಪ್ಟನ್: ಸಮಕಾಲೀನ ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಬೌಲರ್ ಆಗಿರುವ ಭಾರತದ ಬಲಗೈ ವೇಗಿ ಜಸ್ಪ್ರೀತ್ ಬಮ್ರಾ ತಮ್ಮ ಘಾತಕ ದಾಳಿಯಿಂದಲೇ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.
Vijaya Karnataka Web jasprit-bumrah-01


ಪ್ರಾಕ್ಟಿಸ್ ಮೇಕ್ಸ್ ಮ್ಯಾನ್ ಫರ್ಫೆಟ್ ಎಂಬಂತೆ ಬುಮ್ರಾ ಅಭ್ಯಾಸ ಅವಧಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ತಮ್ಮ ಮುಂದೆ ಯಾವ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ಗಮನಿಸುವುದಿಲ್ಲ.

ಗುರುವಾರದ ಅಭ್ಯಾಸ ಅವಧಿಯಲ್ಲಿ ವಿಜಯ್ ಶಂಕರ್ ಗಾಯಗೊಳ್ಳಲು ಇದೇ ಕಾರಣವಾಗಿತ್ತು. ಬುಮ್ರಾ ಹಾಕಿದ ಯಾರ್ಕರ್ ದಾಳಿಯು ಶಂಕರ್ ಕಾಲ್ಬೆರಳಿಗೆ ಚಚ್ಚಿತ್ತು.

ಈ ಮೊದಲು ವಿಶ್ವಕಪ್ ಆರಂಭಕ್ಕೂ ಮೊದಲೇ ಬುಮ್ರಾ ಅರ್ಪಣಾ ಮನೋಭಾವದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ವಿವರಣೆ ನೀಡಿದ್ದರು. ನೆಟ್ಸ್‌ನಲ್ಲೂ ಎದುರಿಸುವಾಗಲೂ ಬುಮ್ರಾ ವಿರುದ್ಧ ಅತ್ಯಂತ ಕ್ರಿಕೆಟಿಂಗ್ ಕೌಶಲ್ಯವನ್ನು ಹೊಂದಿರಬೇಕು. ಯಾಕೆಂದರೆ ಮ್ಯಾಚ್ ಪರಿಸ್ಥಿತಿಗೆ ಹೊಂದಿಕೊಂಡು ನೆಟ್ಸ್‌ನಲ್ಲಿ ದಾಳಿ ನಡೆಸುತ್ತಾರೆ. ಅಲ್ಲದೆ ಯಾವುದೇ ರಾಜಿಗೆ ತಯಾರಾಗುವುದಿಲ್ಲ. ತಮ್ಮ ಮುಂದೆ ಯಾರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೇರ್ ಮಾಡುತ್ತಿಲ್ಲ. ಬದಲಾಗಿ ತಮ್ಮ ರಣತಂತ್ರವನ್ನು ಕಾರ್ತಗತಗೊಳಿಸಲು ಪ್ರಯತ್ನಿಸುತ್ತಾರೆ ಎಂದಿದ್ದರು.

ಈ ಬಗ್ಗೆ ಹೇಳಿಕೆ ನೀಡಿರುವ ಬುಮ್ರಾ, ಬ್ಯಾಟ್ಸ್‌ಮನ್‌ಗಳನ್ನು ಗಾಯ ಮಾಡುವುದು ನಮ್ಮ ಇರಾದೆಯಲ್ಲ. ಆದರೆ ಕೆಲವೊಮ್ಮೆ ಹಾಗೇ ಸಂಭವಿಸುತ್ತದೆ. ಇದು ದುರದೃಷ್ಟಕರ. ಸದ್ಯ ಶಂಕರ್ ಆರಾಮವಾಗಿದ್ದಾರೆ ಎಂದಿದ್ದರು.

ಒಟ್ಟಾರೆಯಾಗಿ ಬುಮ್ರಾ ನಗುವಿನ ಹಿಂದೆ ಮಾರಕ ಪ್ರತಿಸ್ಪರ್ಧಿ ಅಡಗಿದ್ದಾನೆ ಎಂಬುದು ಇದರಿಂದಲೇ ತಿಳಿದು ಬರುತ್ತದೆ. ಇದುವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ ಯಶಸ್ಸಿಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌