ಆ್ಯಪ್ನಗರ

ವಿಶ್ವಕಪ್ ಕೈ ಜಾರಿದರೂ ಮಂದಹಾಸ ಬೀರಿದ ವಿಲಿಯಮ್ಸನ್ ನೈಜ ಚಾಂಪಿಯನ್!

ಏಕದಿನ ವಿಶ್ವಕಪ್ ಟೂರ್ನಿಯುದ್ಧಕ್ಕೂ ಒಂದೇ ಒಂದು ವಿವಾದದಲ್ಲಿ ಭಾಗಿಯಾಗದೇ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ ರೀತಿಗೆ ನಾಯಕ ಕೇನ್ ವಿಲಿಯಮ್ಸನ್ ಅತಿ ಹೆಚ್ಚು ಶ್ಲಾಘನೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಕ್ರಿಕೆಟ್‌ನ ನೈಜ ರಾಯಭಾರಿ ಎನಸಿಕೊಂಡಿದ್ದಾರೆ.

Vijaya Karnataka Web 15 Jul 2019, 3:12 pm
ಲಂಡನ್: ಕಣ್ಮುಂದೆಯೇ ವಿಶ್ವಕಪ್ ಕೈ ಜಾರಿ ಹೋದರೂ ತಮ್ಮ ಭಾವನೆಗಳನ್ನೆಲ್ಲ ತಡೆದುಕೊಂಡಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಆಧುನಿಕ ಕ್ರಿಕೆಟ್‌ನ ನೈಜ ಚಾಂಪಿಯನ್ ಎನಿಸಿಕೊಂಡಿದ್ದಾರೆ.
Vijaya Karnataka Web kane-williamson


ಎಂಟು ವರ್ಷಗಳ ಹಿಂದೆ ಭಾರತ ವಿಶ್ವಕಪ್ ಗೆದ್ದಾಗ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ ಮಂದಹಾಸ ಬೀರುತ್ತಿದ್ದರು. ಇದಕ್ಕೆ ಸಮಾನವಾಗಿ ವಿಲಿಯಮ್ಸನ್ ಅತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.

ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ರೋಚಕ ಪಂದವನ್ನಾಗಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ 2019 ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಪರಿಗಣಿಸಲಾಗಿದೆ. ಎರಡೆರಡು ಬಾರಿಗೆ ಟೈ ಫಲಿತಾಂಶ ಕಂಡ ಪಂದ್ಯದಲ್ಲಿ ಹೆಚ್ಚು ಬೌಂಡರಿ ಗಳಿಸಿದ (ಬೌಂಡರಿ ಹಾಗೂ ಸಿಕ್ಸರ್) ಆಧಾರದಲ್ಲಿ ಇಂಗ್ಲೆಂಡ್ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಅಂತಿಮ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಬ್ಯಾಟ್‌ಗೆ ತಗುಲಿ ಚೆಂಡು ಬೌಂಡರಿ ಸೇರಿದಾಗಲೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಯಾವುದೇ ವಾಗ್ವಾದಕ್ಕಿಳಿಯಲಿಲ್ಲ. ಈ ಮೂಲಕ ಐಸಿಸಿ ನಿಮಯಕ್ಕೆ ತಲೆಬಾಗಿದರು.

ಬಳಿಕ ಟೈ ಫಲಿತಾಂಶ ಕಂಡಾಗಲೂ ಇಂಗ್ಲೆಂಡ್ ವಿಜೇತರೆಂದು ಘೋಷಿಸಿದಾಗ ಸಭ್ಯತನೆಯನ್ನು ಮೆರೆಯುವ ಮೂಲಕ ಎದುರಾಳಿ ತಂಡವನ್ನು ಶ್ಲಾಘಿಸಿದರು. ಈ ಮೂಲಕ ಆಧುನಿಕ ಕ್ರಿಕೆಟ್‌ನ ನೈಜ ರಾಯಭಾರಿ ಎನಿಸಿಕೊಂಡಿದ್ದಾರೆ.

ಟೂರ್ನಿಯುದ್ಧಕ್ಕೂ ಸಭ್ಯತೆಯನ್ನು ಮೆರೆದಿರುವ ವಿಲಿಯಮ್ಸನ್ ಒಟ್ಟು 578 ರನ್ ಕಲೆ ಹಾಕುವ ಮೂಲಕ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌