ಆ್ಯಪ್ನಗರ

ಗೆಲ್ಲುವ ಅವಕಾಶ ನಮಗೇ ಜಾಸ್ತಿ: ಕಪಿಲ್‌ ದೇವ್‌

ಆಟಗಾರರು ಕೂಡ ತಂಡಕ್ಕೆ ತಮ್ಮ ಅಗತ್ಯವನ್ನು ಮನಗಾಣಬೇಕು. ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಸೆಮಿ ಫೈನಲ್‌ ತನಕ ಬರುವ ನೆಚ್ಚಿನ ತಂಡಗಳು ಎನ್ನುವುದನ್ನು ನಾನು ಹೇಳಬಲ್ಲೆ ಎಂದು ಕಪಿಲ್ ಹೇಳಿದ್ದಾರೆ.

Agencies 30 May 2019, 10:40 am
ಮುಂಬಯಿ: ವಿಶ್ವಕಪ್ ಗೆಲ್ಲುವ ಅವಕಾಶ ಭಾರತಕ್ಕೆ ಜಾಸ್ತಿ ಎಂದು ದೇಶದ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಹೇಳಿದ್ದಾರೆ.
Vijaya Karnataka Web Team India


ಭಾರತ ತಂಡದ ಫಿಟ್ನೆಸ್‌ ಅತ್ಯುಷ್ಕೃಷ್ಟ ಮಟ್ಟದಲ್ಲಿದ್ದು, 15 ಆಟಗಾರರು ಟೂರ್ನಿಯುದ್ದಕ್ಕೂ ಲಭ್ಯಲಿರುತ್ತಾರೆ. ಗಾಯ, ಅನಾರೋಗ್ಯ ಅವರನ್ನು ಕಾಡುವ ಸಾಧ್ಯತೆ ಕಡಿಮೆ. ಪರಿಸ್ಥಿತಿಗೆ ಪೂರಕವಾಗಿ ಒಂದು ತಂಡವಾಗಿ ಆಡಿದರೆ ಕಪ್‌ ಗೆಲ್ಲುವ ಅವಕಾಶ ಭಾರತಕ್ಕೆ ಹೆಚ್ಚಿದೆ.

ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಅವರ ನೈಜ ಆಟ ಬಂದರೆ ಗೆಲುವು ಸುಲಭ. ಕುಲ್ದೀಪ್‌ ಹಾಗೂ ಚಹಲ್‌ ಅನನುಭವಿಗಳು ಎನ್ನುವ ಮಾತಿಗೆ ನನ್ನ ಬಳಿ ಉತ್ತರವಿದೆ. ಮಣಿಗಂಟಿನ ಈ ಸ್ಪಿನ್ನರ್‌ಗಳಿಗೆ ಇಂಗ್ಲೆಂಡ್‌ ಪಿಚ್‌ ಬಗ್ಗೆ ಗೊತ್ತಿಲ್ಲದೇ ಇರಬಹುದು. ಆದರೆ, ಕ್ರಿಕೆಟ್‌ನಲ್ಲಿ ಎರಡು ವರ್ಷದ ಅನುಭವವಿದೆ.

ಆರಂಭಿಕರಾದ ರೋಹಿತ್‌ ಹಾಗೂ ಶಿಖರ್‌ ಧವನ್‌ ಸಾಮರ್ಥ್ಯ‌ ಬಗ್ಗೆ ಹೇಳಬೇಕಾಗಿಲ್ಲ. ವಿರಾಟ್‌ ಕೊಯ್ಲಿ ಎಲ್ಲದಕ್ಕೂ ಬೆನ್ನೆಲುಬು ಆಗಲಿದ್ದಾರೆ. ಯಾರು ಎಲ್ಲಿ ಆಡಬೇಕು ಎನ್ನುವುದನ್ನು ಆ ಸಂದರ್ಭದಲ್ಲಿ ನಿರ್ಧರಿಸಬೇಕು. ಆಟಗಾರರು ಕೂಡ ತಂಡಕ್ಕೆ ತಮ್ಮ ಅಗತ್ಯವನ್ನು ಮನಗಾಣಬೇಕು. ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಸೆಮಿ ಫೈನಲ್‌ ತನಕ ಬರುವ ನೆಚ್ಚಿನ ತಂಡಗಳು ಎನ್ನುವುದನ್ನು ನಾನು ಹೇಳಬಲ್ಲೆ ಎಂದು ಕಪಿಲ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌