ಆ್ಯಪ್ನಗರ

ವರುಣನ ಅವಕೃಪೆ; ಬಾಂಗ್ಲಾ-ಲಂಕಾ ಪಂದ್ಯ ರದ್ದು

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡವು ಶ್ರೀಲಂಕಾ ನಡುವಣ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಅಲ್ಲದೆ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಿಕೊಳ್ಳಲಾಗಿದೆ.

Vijaya Karnataka Web 11 Jun 2019, 6:46 pm
ಬ್ರಿಸ್ಟಲ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಣ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ.
Vijaya Karnataka Web ban-vs-sl


ಇದರಂತೆ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಿಕೊಳ್ಳಲಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಟಾಸ್ ಕೂಡಾ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು.

ಇದರೊಂದಿಗೆ ಆಡಿರುವ 4 ಪಂದ್ಯಗಳ್ಲಲಿ ಅಷ್ಟೈ ಅಂಕವನ್ನು ಸಂಪಾದಿಸಿರುವ ಲಂಕಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಲಂಕನ್ನರಿಗೆ ಎರಡನೇ ಬಾರಿಗೆ ಮಳೆ ಅಡ್ಡಿಪಡಿಸಿದೆ.

ಅತ್ತ ಬಾಂಗ್ಲಾದೇಶ ಅಷ್ಟೇ ಪಂದ್ಯಗಳಲ್ಲಿ ಮೂರು ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಬಲಾಬಲ...
ವಿಶ್ವಕಪ್‌ ಅಭಿಯಾನದಲ್ಲಿ ಗೆಲುವು -ಸೋಲಿನ ಮಿಶ್ರಫಲ ಅನುಭವಿಸಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮಂಗಳವಾರ ಪರಸ್ಪರ ಮುಖಾಮುಖಿಯಾಗುತ್ತಿವೆ. ಸದ್ಯ ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿವೆ. ಶ್ರೀಲಂಕಾ ಮೂರು ಅಂಕ ಕಲೆಹಾಕಿದ್ದರೆ, ಬಾಂಗ್ಲಾ ಖಾತೆಯಲ್ಲಿ ಎರಡು ಅಂಕಗಳಿವೆ.

ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತಿರುವ ಶ್ರೀಲಂಕಾ, ನಂತರ ಅಫಘಾನಿಸ್ಥಾನದ ವಿರುದ್ಧ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಗೆದ್ದು ಖಾತೆ ತೆರೆದಿದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯಾದ ಪರಿಣಾಮ ಅಂಕ ಹಂಚಿಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು. ಅತ್ತ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಉತ್ತಮ ಅಭಿಯಾನ ಆರಂಭಿಸಿದ ಬಾಂಗ್ಲಾ ತಂಡ ಆ ನಂತರದ ಎರಡು ಪಂದ್ಯಗಳಲ್ಲಿ ಪರಾಭವಗೊಂಡಿದೆ. ಬಾಂಗ್ಲಾ ತಂಡಕ್ಕೆ ಶಕಿಬ್‌ ಅಲ್‌ ಹಸನ್‌ ಶ್ರೀರಕ್ಷೆ ಇದ್ದರೆ, ಲಂಕೆಗೆ ಕುಸಾಲ್‌ ಮೆಂಡಿಸ್‌ ಬೆನ್ನೆಲುಬು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌