ಆ್ಯಪ್ನಗರ

ಧೋನಿ ಉದ್ದೇಶಪೂರ್ವಕವಾಗಿಯೇ ಭಾರತವನ್ನು ಸೋಲಿಸಿದ್ದಾರೆ: ಯೋಗರಾಜ್ ಆರೋಪ

ಮಗದೊಬ್ಬ ಭಾರತೀಯ ವಿಶ್ವಕಪ್ ಟ್ರೋಫಿ ಎತ್ತುವುದನ್ನು ಬಯಸದ ಮಹೇಂದ್ರ ಸಿಂಗ್ ಧೋನಿ ಉದ್ದೇಶಪೂರ್ವಕವಾಗಿಯೇ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ತಂಡವನ್ನು ಸೋಲಿಸಿದ್ದಾರೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ.

Vijaya Karnataka Web 17 Jul 2019, 5:26 pm
ಹೊಸದಿಲ್ಲಿ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಮಗದೊಮ್ಮೆ ಗಂಭೀರ ಆರೋಪ ಮಾಡಿರುವ ಯುವರಾಜ್ ಸಿಂಗ್ ಅಪ್ಪ ಯೋಗರಾಜ್ ಸಿಂಗ್, ಏಕದಿನ ವಿಶ್ವಕಪ್ ಸೋಲಿಗೆ ಧೋನಿಯೇ ಕಾರಣ ಎಂದಿದ್ದಾರೆ.
Vijaya Karnataka Web ms-dhoni-run-out


ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪರಾಭವಗೊಂಡಿರುವ ಭಾರತ ವಿಶ್ವಕಪ್‌ನಿಂದಲೇ ಹೊರನಡೆದಿತ್ತು. ಕೊನೆಯ ಹಂತದಲ್ಲಿ ಧೋನಿ ಹಾಗೂ ರವೀಂದ್ರ ಜಡೇಜಾ ಫೈಟ್ ಬ್ಯಾಕ್ ಫಿಫ್ಟಿ ಬಾರಿಸಿದರೂ ಭಾರತಕ್ಕೆ ಗೆಲುವು ದಕ್ಕಲಿಲ್ಲ. ಅಲ್ಲದೆ ಕೇವಲ 18 ರನ್ ಅಂತರದಲ್ಲಿಸೋಲನುಭವಿಸಿತ್ತು.

ಸೆಮಿಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಉದ್ದೇಶಪೂರ್ವಕವಾಗಿ ಭಾರತವನ್ನು ಸೋಲಿಸಿದ್ದಾರೆ. ಯಾಕೆಂದರೆ ಮಗದೊಬ್ಬ ಭಾರತೀಯ ವಿಶ್ವಕಪ್ ಟ್ರೋಫಿ ಎತ್ತುವುದನ್ನು ಧೋನಿ ಬಯಸುವುದಿಲ್ಲ ಎಂದು ಟೀಕಿಸಿದ್ದಾರೆ.

ಧೋನಿ ನಿಧಾನಗತಿಯ ಆಟವನ್ನು ಆಡಿದರು. ಅಲ್ಲದೆ ದೊಡ್ಡ ಶಾಟ್ ಆಡುವಂತೆ ಜಡೇಜಾರನ್ನು ಪ್ರೇರೆಪಿಸುತ್ತಿದ್ದರು. ಇಷ್ಟು ಕ್ರಿಕೆಟ್ ಆಡಿ ಹೇಗೆ ಆಡಬೇಕೆಂಬುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌