ಆ್ಯಪ್ನಗರ

ವಿಂಡೀಸ್ ಪ್ರವಾಸದಿಂದ ಧೋನಿಗೆ ಬ್ರೇಕ್; ವಿಕೆಟ್ ಕೀಪಿಂಗ್‌ಗೆ ಮೊದಲ ಆಯ್ಕೆಯಲ್ಲ!

ಏಕದಿನ ವಿಶ್ವಕಪ್ ಬಳಿಕ 37ರ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಏನಾಗಲಿದೆ ಎಂಬುದು ಬಹಳಷ್ಟುಕುತೂಹಲ ಮೂಡಿಸಿದೆ. ಸದ್ಯ ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ ಎಂಬುದು ತಿಳಿದು ಬಂದಿದೆ.

Vijaya Karnataka Web 17 Jul 2019, 12:20 pm
ಮುಂಬಯಿ: ಸಾಕಷ್ಟು ಊಹಾಪೋಹಗಳ ಬಳಿಕ ಭಾರತದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ ಎಂಬುದು ತಿಳಿದು ಬಂದಿದೆ.

ಸ್ವತ: ಮಹೇಂದ್ರ ಸಿಂಗ್ ಧೋನಿ ಅವರೇ ತಮ್ಮ ಅಲಭ್ಯತೆಯನ್ನು ಬಿಸಿಸಿಐಗೆ ತಿಳಿಸಿದ್ದಾರೆ. ಅಷ್ಟೇ ಯಾಕೆ ಮುಂಬರುವ ಸರಣಿಗಳಲ್ಲಿ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆಯಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೂಲಕ ತಂಡದ ಸುಗಮ ಪರಿವರ್ತನೆಗೆ ನೆರವಾಗಲಿದ್ದಾರೆ.

ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ರಿಷಬ್ ಪಂತ್ ತಂಡದ ಜತೆಗಿರಲಿದ್ದಾರೆ. ಹಾಗೆಯೇ ಭವಿಷ್ಯದಲ್ಲೂ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಮೊದಲ ಆಯ್ಕೆಯಾಗಲಿದ್ದಾರೆ.

ಭವಿಷ್ಯದ ಟೂರ್ನಿಗಳಲ್ಲಿ ಬಹುಶ: ಧೋನಿ 15ರ ಬಳಗದ ತಂಡದಲ್ಲಿರಬಹುದು. ಆದರೆ ಆಡುವ ಬಳಗದ ಆಯ್ಕೆಯಲ್ಲಿ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ. ಈ ಮೂಲಕ ಸುಗಮ ಪರಿವರ್ತನೆಗೆ ಅವಕಾಶವೊದಗಿಸಲಿದ್ದಾರೆ.

ಏತನ್ಮಧ್ಯೆ ಗುರುವಾರ ಸಭೆ ಸೇರಲಿರುವ ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹಾಗೂ ಭವಿಷ್ಯದ ಬಗ್ಗೆ ಸ್ಪಷ್ಟ ಸೂಚನೆ ಹೊರಬರುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌