ಆ್ಯಪ್ನಗರ

ಪಿಚ್ ನಿಮ್ಮನ್ನು ಮಿಸ್ ಮಾಡಲಿದೆ: ಧವನ್‌ಗೆ ಪ್ರಧಾನಿ ಮೋದಿ ಸಂದೇಶ

ನಿಸ್ಸಂಶವಾಗಿಯೂ ಪಿಚ್ ನಿಮ್ಮನ್ನು ಮಿಸ್ ಮಾಡಲಿದೆ. ಆದಷ್ಟು ಬೇಗ ಗುಣಮುಖರಾಗಿ ಮೈದಾನಕ್ಕಿಳಿದು ದೇಶಕ್ಕಾಗಿ ಮತ್ತಷ್ಟು ಗೆಲುವುಗಳನ್ನು ಕೊಡುಗೆಯಾಗ ನೀಡಿ ಎಂದು ಗಾಯದಿಂದಾಗಿಿ ವಿಶ್ವಕಪ್‌ನಿಂದ ನಿರ್ಗಮಿಸಿರುವ ಶಿಖರ್ ಧವನ್‌ಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ.

Vijaya Karnataka Web 20 Jun 2019, 8:06 pm
ಹೊಸದಿಲ್ಲಿ: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗಾಯದ ಸಮಸ್ಯೆಗೊಳಗಾಗಿರುವ ಶಿಖರ್ ಧವನ್ ಸೇವೆಯನ್ನು ಟೀಮ್ ಇಂಡಿಯಾ ಕಳೆದುಕೊಳ್ಳುವಂತಾಗಿದೆ.
Vijaya Karnataka Web shikhar-dhawan-04


ಧವನ್ ಅಲಭ್ಯತೆಯು ಟೀಮ್ ಇಂಡಿಯಾಗೆ ದೊಡ್ಡ ಹೊಡೆತವನ್ನುಂಟು ಮಾಡಿದೆ. ಆದರೆ ಬಲಿಷ್ಠ ಮೀಸಲು ಪಡೆಯನ್ನು ಹೊಂದಿರುವ ಭಾರತ ತಂಡವು ಮುಂದಿನ ಪಂದ್ಯದಲ್ಲಿ ಧವನ್ ಕೊರತೆಯನ್ನು ನೀಗಿಸಬೇಕಿದೆ.

ಗಾಯಮುಕ್ತರಾಗದ ಹಿನ್ನಲೆಯಲ್ಲಿ ವಿಶ್ವಕಪ್‌ಗೆ ಅಲಭ್ಯವಾಗಿರುವ ಧವನ್ ಅಭಿಮಾನಿಗಳಿಗಾಗಿ ಸಂದೇಶ ಹಂಚಿದ್ದರು. ತದಾ ಬೆನ್ನಲ್ಲೇ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಸೆಲೆಬ್ರಿಟಗಳು ಧವನ್‌ಗೆ ಮತ್ತಷ್ಟು ಪ್ರಬಲವಾಗಿ ಹಿಂತಿರುಗಿ ಬರುವಂತೆ ಹಾರೈಸಿದ್ದರು.

ಇದೀಗ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡುವ ಮೂಲಕ ಧವನ್ ಮನೋಬಲವನ್ನು ವೃದ್ಧಿಸುವ ಪ್ರಯತ್ನ ಮಾಡಿದ್ದಾರೆ.

ಪಿಚ್ ನಿಮ್ಮನ್ನು ಮಿಸ್ ಮಾಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದಷ್ಟು ಬೇಗ ಗುಣಮುಖರಾಗಿ ಮೈದಾನಕ್ಕಿಳಿದು ದೇಶಕ್ಕಾಗಿ ಮತ್ತಷ್ಟು ಗೆಲುವುಗಳನ್ನು ಕೊಡುಗೆಯಾಗಿ ನೀಡಿ ಎಂದು ಸಂದೇಶ ಹಂಚಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಧವನ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ನೋವಿನ ನಡುವೆಯೂ ಮ್ಯಾಚ್ ವಿನ್ನಿಂಗ್ಸ್ ಶತಕ ಬಾರಿಸಿದ ಧವನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌