ಆ್ಯಪ್ನಗರ

ಭಾರತವನ್ನು ಮತ್ತೆ ಕಾಡುತ್ತಿರುವ ನಂ.4 ಪೆಡಂಭೂತ

ಏಕದಿನ ವಿಶ್ವಕಪ್ ಮಧ್ಯಂತರ ಅವಧಿಯನ್ನು ತಲುಪಿರುವಂತೆಯೇ ಟೀಮ್ ಇಂಡಿಯಾದಲ್ಲಿ ಮಗದೊಮ್ಮೆ ನಂ. 4 ಸಮಸ್ಯೆ ಹುಟ್ಟಿಕೊಂಡಿದೆ. ಅಲ್ಲದೆ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಗೊಂದಲಕ್ಕೀಡು ಮಾಡಿದೆ.

Vijaya Karnataka Web 25 Jun 2019, 4:49 pm
ಮ್ಯಾಂಚೆಸ್ಟರ್: ಐಸಿಸ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಮಗದೊಮ್ಮೆ ಸಮಸ್ಯೆಯು ಹುಟ್ಟಿಕೊಂಡಿದೆ.
Vijaya Karnataka Web dhoni-kohli


ವಿಶ್ವಕಪ್‌ಗೂ ಆರಂಭಕ್ಕೂ ಮೊದಲು ಎರಡು ವರ್ಷಗಳ ಸಮಸ್ಯೆಗೆ ಉತ್ತರವಾಗಿ ಕೆಎಲ್ ರಾಹುಲ್ ಗುರುತಿಸಿಕೊಂಡಿದ್ದರು. ಆದರೆ ವಿಶ್ವಕಪ್ ಮಧ್ಯಂತರ ವೇಳೆಯಲ್ಲಿ ಶಿಖರ್ ಧವನ್ ಗಾಯದಿಂದಾಗಿ ಸಂಪೂರ್ಣ ಟೂರ್ನಿಗೆ ಅಲಭ್ಯವಾಗಿರುವ ಹಿನ್ನಲೆಯಲ್ಲಿ ರಾಹುಲ್ ಆರಂಭಿಕನಾಗಿ ಬಡ್ತಿ ಪಡೆದಿದ್ದಾರೆ.

ಹಾಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಯಾವ ಬ್ಯಾಟ್ಸ್‌ಮನ್ ಸೂಕ್ತ ಎಂಬುದು ಗೊಂದಲಕ್ಕೀಡು ಮಾಡಿದೆ. ವಿಜಯ್ ಶಂಕರ್‌ ಮೇಲೆ ನಾಯಕ ವಿರಾಟ್ ಕೊಹ್ಲಿ ಹೆಚ್ಚಿನ ಒಲವು ತೋರಿದ್ದಾರೆ.

ಆದರೆ ಬೇಕಾದಷ್ಟು ಅನುಭವ ಸಂಪತ್ತನ್ನು ಹೊಂದಿರದ ಶಂಕರ್, ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡುವಲ್ಲಿ ಎಡವಿದ್ದಾರೆ. ಹಾಗಾಗಿ ಕೆಳ ಕ್ರಮಾಂಕದಲ್ಲಿ ಆಡುತ್ತಿರುವ ಕೇದಾರ್ ಜಾಧವ್‌ಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟವಾಡಿದಾಗ ಯಾವುದೇ ಸಮಸ್ಯೆಗಳು ಸೃಷ್ಟಿಯಾಗುತ್ತಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಕ್ರೀಸಿಗಿಳಿದು ತಮ್ಮ ನೈಜ ಆಟ ಆಡಬಹುದಾಗಿದೆ. ಆದರೆ ಆರಂಭದಲ್ಲೇ ವಿಕೆಟುಗಳು ಪತನಗೊಂಡಾಗ ಪರಿಸ್ಥಿತಿಯನ್ನು ನಿಭಾಯಿಸುವವರು ಯಾರು ಎಂಬುದು ಚರ್ಚೆಯ ವಿಷವಾಗಿದೆ.

ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಸಮಸ್ಯೆ ವ್ಯಕ್ತವಾಗಿತ್ತು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ನೈಜ ಪರೀಕ್ಷೆ ಎದುರಾಗಿತ್ತು. ಒಟ್ಟಾರೆಯಾಗಿ ಭಾರತಕ್ಕಿದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌