ಆ್ಯಪ್ನಗರ

ಪಾಕ್‌ಗೆ ಚಹಾ ಕುಡಿದ ಕಪ್‌ ಮಾತ್ರವೇ ಸಿಗೋದು: ಜಾಹೀರಾತಲ್ಲೇ ಪ್ರತ್ಯುತ್ತರ! (ನೋಡಿ ಜಾಹೀರಾತು!)

ಪಾಕಿಸ್ತಾನದ ವಾಹಿನಿಗಳು ಅಭಿನಂದನ್‌ ವರ್ಧಮಾನ್‌ ಅವರಲ್ಲಿ ಕಪ್‌ ಕಹಾ ಲೇಕೇ ಜಾ ರಹೇ ಹೋ ಎಂದು ಕೇಳುವ ಜಾಹೀರಾತು ಪ್ರಸಾರ ಮಾಡಿದ್ದವು. ಈ ಜಾಹೀರಾತಿಗೆ ಇದೀಗ ಭಾರತದ ಯೂಟ್ಯೂಬ್‌ ಚಾನಲ್‌ 'ವಿ ಸೆವೆನ್‌ ಪಿಕ್ಚರ್ಸ್‌' ಒಂದು ತಕ್ಕ ಉತ್ತರ ನೀಡಿದೆ. ಅದೂ ಸಹ ಅಭಿನಂದನ್‌ ಅವರ ಹೆಸರು ಬರುವಂತೆಯೇ ಜಾಹೀರಾತು ಮಾಡಲಾಗಿದೆ!

Times Now 15 Jun 2019, 5:39 pm
ಹೊಸದಿಲ್ಲಿ: ಭಾರತದ ವಾಯುಸೇನೆಯ ಹೀರೋ ಎಂದೇ ಪರಿಗಣಿಸಲಾಗುತ್ತಿರುವ ವಿಂಗ್‌ ಕಮಾಂಡರ್ ಅಭಿನಂದನ್‌ ವರ್ಧಮಾನ್‌ ಅವರನ್ನು ಅಣುಕಿಸುವ ಜಾಹೀರಾತಿಗೆ ಇದೀಗ ಪ್ರತ್ಯುತ್ತರ ಸಿಕ್ಕಿದೆ.
Vijaya Karnataka Web 1560580057-Abhinandan_Ad_0


ಏನಿದು ಅಂತೀರಾ.. ವಿಶ್ವಕಪ್‌ನ ಪಂದ್ಯಗಳ ಬಗ್ಗೆ ವಿವಿಧ ರೀತಿಯ ಜಾಹೀರಾತುಗಳು ಸಾಕಷ್ಟು ಸುದ್ದಿ ಮಾಡಿದ್ದವು. ಅದರಲ್ಲಿ ಪಾಕಿಸ್ತಾನದ ವಾಹಿನಿಗಳು ಅಭಿನಂದನ್‌ ವರ್ಧಮಾನ್‌ ಅವರಲ್ಲಿ ಕಪ್‌ ಕಹಾ ಲೇಕೇ ಜಾ ರಹೇ ಹೋ ಎಂದು ಕೇಳುವ ಜಾಹೀರಾತು ಪ್ರಸಾರ ಮಾಡಿದ್ದವು. ಈ ಜಾಹೀರಾತಿಗೆ ಇದೀಗ ಭಾರತದ ಯೂಟ್ಯೂಬ್‌ ಚಾನಲ್‌ 'ವಿ ಸೆವೆನ್‌ ಪಿಕ್ಚರ್ಸ್‌' ಒಂದು ತಕ್ಕ ಉತ್ತರ ನೀಡಿದೆ. ಅದೂ ಸಹ ಅಭಿನಂದನ್‌ ಅವರ ಹೆಸರು ಬರುವಂತೆಯೇ ಜಾಹೀರಾತು ಮಾಡಲಾಗಿದೆ!

ಏನಿದೆ ಹೊಸ ಜಾಹೀರಾತಿನಲ್ಲಿ?
ಭಾರತ ತಂಡದ ಅಭಿಮಾನಿಯೊಬ್ಬ ಸೆಲೂನ್‌ನಲ್ಲಿ ಕುಳಿತು ಇಂಗ್ಲೆಂಡ್‌ ವಿರುದ್ಧ ಯುವರಾಜ್ ಸಿಂಗ್‌ ಸಿಡಿಸಿದ ಆರು ಸಿಕ್ಸ್‌ಗಳ ವೀಡಿಯೋ ಟಿವಿಯಲ್ಲಿ ನೋಡುತ್ತಿರುತ್ತಾನೆ. ಆ ವೇಳೆ ಸೆಲೂನ್‌ಗೆ ಬಂದ ಪಾಕ್‌ ತಂಡದ ಆಟಗಾರ, ಭಾರತೀಯ ಅಭಿಮಾನಿಗೆ ಉಡುಗೊರೆ ನೀಡುತ್ತಾನೆ. ಇದರಲ್ಲಿ ಕರವಸ್ತ್ರ ಇರುತ್ತದೆ. ಈ ಬಗ್ಗೆ ಕಾರಣ ಕೇಳಿದ್ದಕ್ಕೆ, ವಿಶ್ವಕಪ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಸೋತ ಬಳಿಕ ಮುಖ ಮುಚ್ಚಿಕೊಳ್ಳಲು ಎಂದು ಗೇಲಿ ಮಾಡುತ್ತಾನೆ.

ಈ ಬಳಿಕ ಸೆಲೂನ್‌ನಲ್ಲಿ ಶೇವ್‌ ಮಾಡುವಂತೆ ಹೇಳುತ್ತಾನೆ. ಕ್ಷೌರಿಕ ಪಾಕ್ ಅಭಿಮಾನಿಗೆ ಅಭಿನಂದನ್‌ ಅವರ ಶೈಲಿಯ ಮೀಸೆ ಇಡುತ್ತಾನೆ.
ಇದನ್ನು ಕಂಡು ಗಾಬರಿಗೊಂಡಾಗ, ಭಾರತದ ಅಭಿಮಾನಿ ತನಗೆ ಉಡಯಗೊರೆಯಾಗಿ ನೀಡಿದ ಕರವಸ್ತ್ರವನ್ನು ಮತ್ತೆ ಆತನಿಗೇ ನೀಡಿ, ಮುಖ ಸ್ನೇಹಿತರ ಎದುರು ಮುಖ ಮುಚ್ಚಿಕೊಳ್ಳಲು ಇದು ಒಳ್ಳೆಯದು ಎನ್ನುತ್ತಾನೆ. ಅಷ್ಟೇ ಅಲ್ಲ, ಅಭಿನಂದನ್‌ ಕುಡಿದ ಚಹಾ ಕಪ್‌ ಮಾತ್ರವೇ ನಿಮಗೆ ಸಿಗುವುದು ಎಂದು ಪ್ರತ್ಯುತ್ತರ ನೀಡುತ್ತಾನೆ.


ಪಾಕಿಸ್ತಾನ ತಯಾರಿಸಿದ ಜಾಹೀರಾತಿನಲ್ಲಿ ಸೆರೆಸಿಕ್ಕ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಚಹಾ ನೀಡಿ, ವಿಚಾರಣೆ ನಡೆಸುವ ದೃಶ್ಯವಿದ್ದು, ಕ್ರಿಕೆಟ್‌ ಟೀಂನ ಬಗ್ಗೆ ಪ್ರಶ್ನೆಗಳನ್ನು ಕೇಳುವಂತೆ ಬದಲಾಯಿಸಲಾಗಿತ್ತು.

ಪುಲ್ವಾಮಾ ದಾಳಿ ಬಳಿಕ ಭಾರತೀಯ ವಾಯುಪಡೆ ನಡೆಸಿದ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಪಾಕ್‌ ಯುದ್ಧ ವಿಮಾನಗಳು ಭಾರತದ ವಾಯುಗಡಿ ಉಲ್ಲಂಘಿಸಿದ್ದವು. ಈ ವೇಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕ್‌ ಯುದ್ಧವಿಮಾನವೊಂದನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರಿದ್ದ ಮಿಗ್‌ -21 ಪತನಗೊಂಡು ಪಾಕಿಸ್ತಾನಕ್ಕೆ ಸೇನೆಗೆ ಸೆರೆ ಸಿಕ್ಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌