ಆ್ಯಪ್ನಗರ

ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ

ವೆಸ್ಟ್‌ ಇಂಡೀಸ್‌ ಬೌಲಿಂಗ್‌ ಮುಂದೆ ಪಾಕ್‌ ಆಟಗಾರರು ಸಂಪೂರ್ಣ ಶರಣಾಗಿರುವುದನ್ನು ನೋಡಿದರೆ, ವಿಶ್ವಕಪ್‌ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ಮುಂಬರುವ ಪಂದ್ಯಗಳಲ್ಲಿ ಸರ್ಫರಾಜ್‌ ಅಹ್ಮದ್‌ ಬಳಗ ಪರಾಕ್ರಮ ತೋರಲೇ ಬೇಕಾಗುತ್ತದೆ.

TIMESOFINDIA.COM 3 Jun 2019, 2:56 pm
ಮುಂಬಯಿ: ಸೋಮವಾರದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಪಾಕಿಸ್ತಾನ ಗೆಲ್ಲಲೇಬೇಕಿದೆ. ಅಂತಹ ಅನಿವಾರ್ಯತೆ ಪಾಕಿಸ್ತಾನಕ್ಕೆ ಎದುರಾಗಿದೆ ಎಂದು ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ.
Vijaya Karnataka Web pak


ವಿಶ್ವಕಪ್‌ಗೂ ಮೊದಲು ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಇಂಗ್ಲೆಂಡ್‌ 4-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿತ್ತು. ಅದಾದ ಬಳಿಕ ವೆಸ್ಟ್‌ ಇಂಡೀಸ್‌ ಬೌಲಿಂಗ್‌ ಮುಂದೆ ಪಾಕ್‌ ಆಟಗಾರರು ಸಂಪೂರ್ಣ ಶರಣಾಗಿರುವುದನ್ನು ನೋಡಿದರೆ, ವಿಶ್ವಕಪ್‌ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ಮುಂಬರುವ ಪಂದ್ಯಗಳಲ್ಲಿ ಸರ್ಫರಾಜ್‌ ಅಹ್ಮದ್‌ ಬಳಗ ಪರಾಕ್ರಮ ತೋರಲೇ ಬೇಕಾಗುತ್ತದೆ.

ನಿರಂತರ 11 ಸೋಲುಗಳಿಂದ ಪಾಕ್‌ ಆಟಗಾರರು ಕಂಗೆಟ್ಟಿದ್ದರೆ, ಸತತ ಗೆಲುವುಗಳ ಮೂಲಕ ಇಂಗ್ಲೆಂಡ್‌ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಫೀನಿಕ್ಸ್‌ನಂತೆ ಚೇತರಿಸಿಕೊಂಡಿರುವ ತಂಡವೊಂದು ಕ್ರಿಕೆಟ್‌ನಲ್ಲಿದ್ದರೆ ಅದು ಪಾಕಿಸ್ತಾನ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಮೊನ್ನೆ ವೆಸ್ಟ್‌ ಇಂಡೀಸ್‌ ವಿರುದ್ಧ ಸೋತ ಟ್ರೆಂಟ್‌ ಬ್ರಿಡ್ಜ್‌ ಪಿಚ್‌ನಲ್ಲೇ ಇಂದು ಇಂಗ್ಲೆಂಡ್‌ ವಿರುದ್ಧ ಆಡುವಾಗ ಪಾಕ್‌ ತಂಡ ಹಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಬೌನ್ಸ್‌ ಹಾಗೂ ಶಾರ್ಟ್‌ ಪಿಚ್‌ ಎಸೆತಗಳನ್ನು ಎದುರಿಸುವುದನ್ನು ಕಲಿತುಕೊಳ್ಳಬೇಕಾಗುತ್ತದೆ. ಅದಕ್ಕಿಂತ ಮಿಗಿಲಾಗಿ ತಂಡದ ಅಭಿಮಾನಿಗಳಿಗೆ ಸಮಾಧಾನ ಹೇಳುವುದು ಅವರ ಕರ್ತವ್ಯ.

ಇಂಗ್ಲೆಂಡ್‌ ತಂಡ ವಿಶ್ವಕಪ್‌ ಎತ್ತುವ ಕ್ಷಣವನ್ನು ಎದುರು ನೋಡುತ್ತಿದ್ದರೆ, ಪಾಕಿಸ್ತಾನ ಸುಧಾರಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಹರ್ಷ ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌