ಆ್ಯಪ್ನಗರ

ಭಾನುವಾರ ಮಳೆ ಕೃಪೆ ತೋರಲಿ: ವಿವಿಎಸ್‌ ಲಕ್ಷ್ಮಣ್‌

ಕ್ರಿಕೆಟ್‌ ಕಣ್ತುಂಬಿಕೊಳ್ಳಲೆಂದು ಸಾಕಷ್ಟು ಹಣ ಖರ್ಚು ಮಾಡಿಕೊಂಡು ವಿಶ್ವದ ಮೂಲೆ ಮೂಲೆಯಿಂದ ಇಂಗ್ಲೆಂಡ್‌ಗೆ ಪ್ರಯಾಣ ಮಾಡಿ, ಇಡೀ ದಿನ ಮಳೆಯ ಅವತಾರಗಳನ್ನು ನೋಡಿ ಬರುವಂತಾದರೆ... ಬಹುಶಃ ಅದಕ್ಕಿಂತ ದೊಡ್ಡ ನಿರಾಸೆ ಮತ್ತೊಂದಿಲ್ಲ.

Agencies 15 Jun 2019, 10:11 am
ಮುಂಬಯಿ: ಭಾನುವಾರದ ಭಾರತ ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ಹೈವೊಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿರುವ ಈ ಪಂದ್ಯಕ್ಕೆ ಮಳೆ ಕೃಪೆ ತೋರಿದರೆ ಸಾಕು ಎಂದು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.
Vijaya Karnataka Web cricket


ಕ್ರಿಕೆಟ್‌ ಕಣ್ತುಂಬಿಕೊಳ್ಳಲೆಂದು ಸಾಕಷ್ಟು ಹಣ ಖರ್ಚು ಮಾಡಿಕೊಂಡು ವಿಶ್ವದ ಮೂಲೆ ಮೂಲೆಯಿಂದ ಇಂಗ್ಲೆಂಡ್‌ಗೆ ಪ್ರಯಾಣ ಮಾಡಿ, ಇಡೀ ದಿನ ಮಳೆಯ ಅವತಾರಗಳನ್ನು ನೋಡಿ ಬರುವಂತಾದರೆ... ಬಹುಶಃ ಅದಕ್ಕಿಂತ ದೊಡ್ಡ ನಿರಾಸೆ ಮತ್ತೊಂದಿಲ್ಲ.

ವಿಶ್ವಕಪ್‌ ಅಂದರೆ ಕ್ರಿಕೆಟ್‌ನ ಒಲಿಂಪಿಕ್‌. ಇಂಥ ಟೂರ್ನಿಯ ಪ್ರತಿ ಪಂದ್ಯವೂ ಅಪರಂಜಿಯೇ. ಹೀಗಾಗಿ ಆಯೋಜಕರು ಮಳೆ ಬಂದಾಗ ಮೈದಾನ ತೇವವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು. ಅಲ್ಲದೆ, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸುವ ಏರ್ಪಾಟು ಮಾಡಿಕೊಳ್ಳಬೇಕಿತ್ತು. ಶ್ರೀಲಂಕಾದ ಮೈದಾನದಲ್ಲಿ ಹಾಗೂ ಕೋಲ್ಕೊತಾದ ಈಡನ್‌ ಗಾರ್ಡನ್ಸ್‌ನಲ್ಲಿ ಇಂಥ ವ್ಯವಸ್ಥೆಯಿದೆ.

ಭಾರತ-ಪಾಕಿಸ್ತಾನ ಪಂದ್ಯ ಭಾನುವಾರ ನಡೆಯಲಿದೆ. ಇಡೀ ಟೂರ್ನಿಯಲ್ಲಿ ಈ ಪಂದ್ಯ ಆಕರ್ಷಣೆಯ ಕೇಂದ್ರಬಿಂದು. ಅಂದು ಮಳೆ ಬಾರದೆ ಸಂಪೂರ್ಣ ಪಂದ್ಯ ನಡೆಯುವಂತಾಗಲಿ. ಭಾನುವಾರದ ಪಂದ್ಯದ ಬಗ್ಗೆ ಇತ್ತಂಡಗಳ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಅವೆಲ್ಲವೂ ಈಡೇರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌