ಆ್ಯಪ್ನಗರ

ಅಭಿಮಾನಿಗಳಿಗೆ ಧೋನಿ ಜೆರ್ಸಿ ತೋರಿಸಿದ್ದೇಕೆ?

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ. ಈ ನಡುವೆ ಅಭಿಮಾನಿಗಳಿಗೆ ಮಹೇಂದ್ರ ಸಿಂಗ್ ಧೋನಿ ಜೆರ್ಸಿಯನ್ನು ಕೋಚ್ ರವಿಶಾಸ್ತ್ರಿ ಪ್ರದರ್ಶಿಸಿರುವ ಘಟನೆ ನಡೆದಿದೆ.

Vijaya Karnataka Web 14 Jun 2019, 3:21 pm
ನಾಟಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತ್ತು. ಪರಿಣಾಮ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಿಕೊಳ್ಳಲಾಗಿದೆ.
Vijaya Karnataka Web ravi-shastri


ಭಾರತೀಯ ಅಭಿಮಾನಿಗಳಂತೂ ಪಂದ್ಯ ಇನ್ನೇನು ಆರಂಭವಾಗಲಿದೆ ಎಂಬ ನಿರೀಕ್ಷೆಯೊಂದಿಗೆ ತುದಿಗಾಲಲ್ಲಿ ನಿಂತಿದ್ದರು. ಆದರೆ ಸತತವಾಗಿ ಸುರಿದ ಮಳೆಯು ಅಭಿಮಾನಿಗಳ ಕಾಯುವಿಕೆಗೆ ತಣ್ಣೀರು ಸುರಿದಿತ್ತು.

ಸರಿ ಸುಮಾರು ಆರು ವರೆ ತಾಸು ಸ್ಟೇಡಿಯಂನಲ್ಲೇ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯುಂಟಾಗಿದೆ. ಈ ಸಂದರ್ಭದಲ್ಲಿ ವಿಶೇಷವಾದ ಘಟನೆಯೊಂದು ನಡೆದಿತ್ತು.


ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ 'ಧೋನಿ ಧೋನಿ' ಎಂದು ಕೂಗಾಡಲು ಆರಂಭಿಸಿದ್ದರು. ಇದನ್ನು ಕೇಳಿಸಿಕೊಂಡ ಕೋಚ್ ರವಿಶಾಸ್ತ್ರಿ ಅನ್ಯ ದಾರಿಯಿಲ್ಲದೆ ಗ್ಯಾಲರಿಯಲ್ಲಿ ನಿಂತುಕೊಂಡು ಧೋನಿ ಜೆರ್ಸಿಯನ್ನು ಅಭಿಮಾನಿಗಳಿಗೆ ಪ್ರದರ್ಶಿಸಿದರು.

ಈ ಸಮಯದಲ್ಲಿ ಧೋನಿ ಎಲ್ಲಿದ್ದರು ಎಂಬುದು ತಿಳಿದು ಬಂದಿಲ್ಲ. ಆದರೆ ಸಹ ಆಟಗಾರರು ಅಲ್ಲೇ ಗ್ಯಾಲರಿ ಸಮೀಪದಲ್ಲಿ ನಿಂತಿದ್ದರು.

ಒಟ್ಟಿನಲ್ಲಿ ಈ ಘಟನೆಯು ಅಭಿಮಾನಿಗಳಲ್ಲೂ ಸ್ವಲ್ಪ ಮಟ್ಟಿನ ನಿರಾಳತೆಯನ್ನು ತಂದಿರುವುದಂತೂ ಸುಳ್ಳಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌