ಆ್ಯಪ್ನಗರ

ವಿಶ್ವಕಪ್‌ನಿಂದ ಹೊರಗಟ್ಟಿದರೂ ಭಾರತಕ್ಕಾಗಿ ಚಿಯರ್ ಹಾಡಿದ ಪಂತ್

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಶುಭ ಹಾರೈಸಿರುವ ಉದಯೋನ್ಮುಖ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಟ್ರೋಫಿ ಗೆದ್ದು ಬರುವಂತೆ ಮನವಿ ಮಾಡಿದ್ದಾರೆ.

Vijaya Karnataka Web 28 May 2019, 9:47 pm
ಹೊಸದಿಲ್ಲಿ: ಐಸಿಸಿ 2019 ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದಿಂದ ಉದಯೋನ್ಮುಖ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ರನ್ನು ಹೊರಗಟ್ಟಲಾಗಿದೆ. ಹಾಗಿದ್ದರೂ ಭಾರತದ ಗೆಲುವಿಗಾಗಿ ಚಿಯರ್ ಹಾಡಲು ಪಂತ್ ಮರೆಯಲಿಲ್ಲ.
Vijaya Karnataka Web rishabh-pant


ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮುಖಾಂತರ ಟೀಮ್ ಇಂಡಿಯಾಗೆ ಶುಭಾಶಗಳನ್ನು ತಿಳಿಸಿರುವ ಪಂತ್, ವಿಶ್ವಕಪ್ ಗೆದ್ದು ಬರುವಂತೆ ಶುಭ ಹಾರೈಸಿದ್ದಾರೆ.

ಪಂತ್ ಸ್ಥಾನದಲ್ಲಿ ಅನುಭವಿ ದಿನೇಶ್ ಕಾರ್ತಿಕ್‌ರನ್ನು ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ಆಯ್ಕೆ ಸಮಿತಿಯು ಪ್ರಮುಖವಾಗಿಯೂ ಕಾರ್ತಿಕ್ ಅನುಭವ ಸಂಪತ್ತನ್ನು ಪರಿಗಣಿಸಿತ್ತು. ಹಾಗೊಂದು ವೇಳೆ ಮಹೇಂದ್ರ ಸಿಂಗ್ ಧೋನಿ ಅಲಭ್ಯವಾದರೆ ದಿನೇಶ್ ಕಾರ್ತಿಕ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಲು ಸಮರ್ಥರು ಎಂಬ ಅವಲೋಕನವನ್ನು ಮಾಡಿತ್ತು. ಇದು ಪಂತ್‌ ಹಿನ್ನಡೆಗೆ ಕಾರಣವಾಯಿತು.

ಅತ್ತ ಐಪಿಎಲ್ 12ನೇ ಆವೃತ್ತಿಯಲ್ಲೂ ಅಮೋಘ ಇನ್ನಿಂಗ್ಸ್ ಮೂಲಕ ಪಂತ್ ದಿಟ್ಟ ಪ್ರತ್ಯುತ್ತರವನ್ನು ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ 16 ಪಂದ್ಯಗಳಲ್ಲಿ 488 ರನ್ ಕಲೆ ಹಾಕಿದ್ದರು. ಈ ಮೂಲಕ ಡೆಲ್ಲಿ ತಂಡವು ಪ್ಲೇ-ಆಫ್ ಹಂತವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು.

ಅಂದ ಹಾಗೆ ಏಕದಿನ ವಿಶ್ವಕಪ್‌ಗೆ ಮೇ 30ರಂದು ಚಾಲನೆ ದೊರಕಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಜೂನ್ 5ರಂದು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌