ಆ್ಯಪ್ನಗರ

ಧವನ್ ಹೊರಬಿದ್ದಿಲ್ಲ; ಮತ್ಯಾಕೆ ಪಂತ್ ಇಂಗ್ಲೆಂಡ್ ಪ್ರಯಾಣ?

ಏಕದಿನ ವಿಶ್ವಕಪ್ ವೇಳೆಯಲ್ಲಿ ಶಿಖರ್ ಧವನ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಅವರ ಸ್ಥಾನವನ್ನು ತುಂಬಿಕೊಳ್ಳುವ ಹಿನ್ನಲೆಯಲ್ಲಿ ಮೀಸಲು ಆಟಗಾರ ರಿಷಬ್ ಪಂತ್‌ರನ್ನು ಇಂಗ್ಲೆಂಡ್‌ಗೆ ರವಾನಿಸಲಾಗಿದೆ.

Vijaya Karnataka Web 12 Jun 2019, 5:21 pm
ಲಂಡನ್: ಪ್ರಸ್ತುತ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್ ವೇಳೆ ಗಾಯದ ಸಮಸ್ಯೆಗೊಳಗಾಗಿರುವ ಟೀಮ್ ಇಂಡಿಯಾ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್‌ ಕನಿಷ್ಠ ಮೂರು ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವೆನಿಸಿದೆ.
Vijaya Karnataka Web dhawan-pant


ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ವೇಳೆ ಧವನ್ ಹೆಬ್ಬರಳಿಗೆ ಗಾಯ ಮಾಡಿದ್ದರು. ಅಲ್ಲಿಂದ ಬಳಿಕ ನೋವಿನ ನಡುವೆಯೂ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿದ ಧವನ್ ಅಮೋಘ ಶತಕ ಬಾರಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಧವನ್‌ ಅವರ ಹೆಬ್ಬೆರಳಿನ ಮೂಳೆಯಲ್ಲಿ ಬಿರುಕು ಬಿಟ್ಟಿರುವುದು ಮಂಗಳವಾರ ಸ್ಕ್ಯಾ‌ನಿಂಗ್‌ನಲ್ಲಿ ದೃಢಪಟ್ಟಿದೆ. ಹಾಗಾಗಿ ಒಂದು ವಾರ ನಿಗಾ ವಹಿಸಲು ಬಿಸಿಸಿಐ ವೈದ್ಯಕೀಯ ತಂಡ ನಿರ್ಧರಿಸಿದೆ.

ಸದ್ಯಕ್ಕೆ ಧವನ್ ಬದಲಿ ಆಟಗಾರರನ್ನು ಘೋಷಿಸಿಲ್ಲ. ಆದರೂ ಧವನ್ ಸ್ಥಾನ ತುಂಬಿಕೊಳ್ಳಲು ಉದಯೋನ್ಮುಖ ರಿಷಬ್ ಪಂತ್‌ರನ್ನು ಇಂಗ್ಲೆಂಡ್ ಪ್ರಯಾಣ ಬೆಳೆಸುವಂತೆ ಸೂಚಿಸಲಾಗಿದೆ.

ಸಾಧ್ಯವಾದಷ್ಟು ಬೇಗ ಅಂದರೆ ಗುರುವಾರದರಂದು ಪಂತ್ ಇಂಗ್ಲೆಂಡ್ ತಲುಪುವ ನಿರೀಕ್ಷೆಯಿದೆ. ಹಾಗೊಂದು ವೇಳೆ ಧವನ್ ಗುಣಮುಖರಾಗದಿದ್ದಲ್ಲಿ ತಕ್ಷಣ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಪಂತ್‌ಗೆ ಕರೆ ನೀಡಲಾಗಿದೆ. ತದಾ ಬಳಿಕವಷ್ಟೇ ಐಸಿಸಿಗೆ ಅಧಿಕೃತ ಮನವಿಯನ್ನು ಮಾಡಲಿದೆ.

ಗುರುವಾರದಂದು ನ್ಯೂಜಿಲೆಂಡ್ ಹಾಗೂ ಭಾನುವಾರದಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯಗಳನ್ನು ಧವನ್ ಮಿಸ್ ಮಾಡಿಕೊಳ್ಳಲಿದ್ದಾರೆ. ಇದರಿಂದಾಗಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಸಹ ತೀವ್ರ ಕುತೂಹಲ ಮೂಡಿಸಿದೆ.

ದಿಲ್ಲಿ ಡ್ಯಾಷಿಂಗ್‌ ಕ್ರಿಕೆಟರ್‌ ಪಂತ್‌ ಟೀಮ್‌ ಇಂಡಿಯಾದ ಮೀಸಲು ಆಟಗಾರನಾಗಿದ್ದಾರೆ. ವಿಶ್ವಕಪ್‌ಗೆ 15 ಸದಸ್ಯರ ತಂಡ ಆಯ್ಕೆ ಮಾಡಿಕೊಳ್ಳುವ ವೇಳೆ ಅನುಭವಿ ವಿಕೆಟ್‌ಕೀಪರ್‌ ದಿನೇಶ್‌ ಕಾರ್ತಿಕ್‌ ವಿರುದ್ಧದ ಸ್ಪರ್ಧೆಯಲ್ಲಿ ಪಂತ್‌ ಸೋತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌