ಆ್ಯಪ್ನಗರ

ಗಾಯಾಳು ಧವನ್ ಸ್ಥಾನಕ್ಕೆ ಪಂತ್ ಅಥವಾ ಅಯ್ಯರ್‌ಗೆ ಬುಲಾವ್?

ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಅನುಭವಿ ಎಡಗೈ ಆಕ್ರಮಣಕಾರಿ ಓಪನರ್ ಶಿಖರ್ ಧವನ್ ಎಡಗೈಗೆ ಗಾಯಮಾಡಿಕೊಂಡಿದ್ದು, ಮೂರು ವಾರಗಳಷ್ಟು ಕಾಲ ವಿಶ್ರಾಂತಿಯನ್ನು ಸೂಚಿಸಲಾಗಿದೆ.

Vijaya Karnataka Web 11 Jun 2019, 2:38 pm
ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭಾರಿ ಆಘಾತಕ್ಕೊಳಗಾಗಿದ್ದು, ಇನ್ ಫಾರ್ಮ್ ಎಡಗೈ ಅನುಭವಿ ಓಪನರ್ ಶಿಖರ್ ಧವನ್ ಗಾಯದಿಂದಾಗಿ ಮೂರು ವಾರಗಳಷ್ಟು ಕಾಲ ತಂಡದಿಂದ ಹೊರಗುಳಿಯುವಂತಾಗಿದೆ.
Vijaya Karnataka Web shikhar-dhawan-injury


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಬ್ಬರಳಿಗೆ ಗಾಯಮಾಡಿಕೊಂಡಿರುವ ಧವನ್‌ಗೆ ಮೂರು ವಾರಗಳಷ್ಟು ಕಾಲ ವಿಶ್ರಾಂತಿ ಸೂಚಿಸಲಾಗಿದೆ.

ಆಸೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ಸ್ ಶತಕ ಬಾರಿಸಿರುವ ಧವನ್ 109 ಎಸೆತಗಳಲ್ಲಿ 117 ರನ್ ಗಳಿಸಿದ್ದರು.

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಬಿಸಿಸಿಐ ಧವನ್ ಬದಲಿ ಆಟಗಾರನನನ್ನು ಹುಡುಕಾಟದಲ್ಲಿದೆ. ಉದಯೋನ್ಮುಖ ಆಟಗಾರರಾದ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್‌ಗೆ ಬುಲಾವ್ ನೀಡುವ ಸಾಧ್ಯತೆಯಿದೆ.

ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಧವನ್ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಬಳಿಕ ಬಿಸಿಸಿಐ ನಿರ್ಧಾರವನ್ನು ಪ್ರಕಟಿಸಲಿದೆ.

ಒಟ್ಟಿನಲ್ಲಿ ಧವನ್ ಅಲಭ್ಯತೆಯು ಟೀಮ್ ಇಂಡಿಯಾಗೆ ಭಾರಿ ಹೊಡೆತ ನೀಡುವಂತಾಗಿದೆ. ಧವನ್ ಅಲಭ್ಯತೆಯಲ್ಲಿ ರೋಹಿತ್ ಶರ್ಮಾ ಜತೆ ಕರ್ನಾಟಕದ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವೆನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌