ಆ್ಯಪ್ನಗರ

ವಿಶ್ವಕಪ್‌ನಲ್ಲಿ ವೇಗಿಗಳ ಪಾತ್ರ ನಿರ್ಣಾಯಕ: ಭುವಿ

ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ತಮ್ಮ ಜವಾಬ್ದಾರಿ ಅತ್ಯಂತ ನಿರ್ಣಾಯಕವೆನಿಸಲಿದೆ ಎಂದು ಟೀಮ್ ಇಂಡಿಯಾ ಬಲಗೈ ವೇಗಿ ಭುವನೇಶ್ವರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 30 May 2019, 5:10 pm
ಕಾರ್ಡಿಫ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ತಾವು ಸೇರಿದಂತೆ ವೇಗದ ಪಡೆಯ ಪಾತ್ರವೂ ಅತ್ಯಂತ ನಿರ್ಣಾಯಕವೆನಿಸಲಿದೆ ಭಾರತೀಯ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web bhuvi-01


ಭುವನೇಶ್ವರ್ ಕುಮಾರ್ ಸೇರಿದಂತೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ತ್ರಿವಳಿ ವೇಗದ ಅಸ್ತ್ರವಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿನ ಶ್ರೇಷ್ಠ ಪ್ರದರ್ಶನವು ವಿಶ್ವಕಪ್‌ನಲ್ಲೂ ನಿರೀಕ್ಷೆ ಮಾಡಲಾಗುತ್ತಿದೆ.

ಅದೇ ಹೊತ್ತಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವಿದ್ದು, ತಂಡವು ಏನನ್ನು ನಿರೀಕ್ಷೆ ಮಾಡುತ್ತಿದೆ ಎಂಬುದು ತಿಳಿದಿದೆ ಎಂದು ಭುವಿ ಸೇರಿಸಿದರು.

ಇಂಗ್ಲೆಂಡ್ ಹವಾಮಾನವು ವೇಗಿಗಳಿಗೆ ನೆರವು ಮಾಡಲಿದೆ ಎಂಬುದು ತಿಳಿದಿದೆ. ನಮ್ಮ ಶಮಿ, ಬುಮ್ರಾ ಜತೆಗೆ ನನ್ನ ಪಾತ್ರವೂ ನಿರ್ಣಾಯಕ. ನಮಗೆಲ್ಲರಿಗೂ ನಮ್ಮ ಶಕ್ತಿಯ ಬಗ್ಗೆ ಅರಿವಿದೆ. ತಂಡಕ್ಕಾಗಿ ಉತ್ತಮ ಕೊಡುಗೆಯನ್ನು ಮಾಡಲು ಬಯಸುತ್ತಿದ್ದೇವೆ ಎಂದರು.

ನಮ್ಮ ಅನುಭವ ಸಂಪತ್ತು ತಂಡಕ್ಕೆ ನೆರವಾಗುವ ನಂಬಿಕೆಯಿದೆ. ಹೌದು, ವಿಶ್ವಕಪ್ ದೊಡ್ಡ ವೇದಿಕೆಯಾಗಿದ್ದು, ಒತ್ತಡವು ಇದ್ದೇ ಇರುತ್ತದೆ ಎಂದರು.

ಅದೇ ಹೊತ್ತಿಗೆ ಬ್ಯಾಟಿಂಗ್‌ನಲ್ಲೂ ಗಮನಾರ್ಹ ಕೊಡುಗೆ ನೀಡುವ ಬಗ್ಗೆ ಭುವಿ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌‌ನಲ್ಲೂ ನ್ನ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ನಿರ್ಣಾಯಕ ಹಂತದಲ್ಲಿ ಕೊಡುಗೆ ನೀಡವು ಭರವಸೆಯಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌