ಆ್ಯಪ್ನಗರ

ಧವನ್ ವಿಶ್ವಕಪ್ ಹೋರಾಟ ಇನ್ನೂ ಮುಗಿದಿಲ್ಲ!

ಏಕದಿನ ವಿಶ್ವಕಪ್ ವೇಳೆ ಗಾಯದ ಸಮಸ್ಯೆಗೆ ಸಿಲುಕಿರುವ ಟೀಮ್ ಇಂಡಿಯಾ ಎಡಗೈ ಆಕ್ರಮಣಕಾರಿ ಓಪನರ್ ಶಿಖರ್ ಧವನ್ ಸ್ಫೂರ್ತಿದಾಯಕ ಸಂದೇಶವನ್ನು ಹಂಚಿದ್ದಾರೆ. ಈ ಮೂಲಕ ತಮ್ಮ ವಿಶ್ವಕಪ್ ಹೋರಾಟ ಮುಗಿದಿಲ್ಲ ಎಂಬುದನ್ನು ಸಾರಿದ್ದಾರೆ.

Vijaya Karnataka Web 12 Jun 2019, 2:57 pm
ನಾಟಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್ ವೇಳೆಯಲ್ಲಿ ಗಾಯಗೊಂಡಿರುವ ಶಿಖರ್ ಧವನ್ ಕನಿಷ್ಠ ಮೂರು ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ.
Vijaya Karnataka Web shikhar-dhawan


ಆಸ್ಟ್ರೇಲಿಯಾ ವಿರುದ್ದ ಕಳೆದ ಭಾನುವಾರ ನಡೆದ ಪಂದ್ಯದ ವೇಳೆ ಧವನ್ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರು. ಅಲ್ಲಿಂದ ಬಳಿಕ ನೋವಿನ ಬಳಿಕವೂ ಅದ್ಭುತ ಇನ್ನಿಂಗ್ಸ್ ಕಟ್ಟಿದ ಧವನ್ ಶತಕದ ಮೂಲಕ ಉತ್ತರಿಸಿದ್ದರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಈ ನಡುವೆ ತಮ್ಮ ಅಧಕೃತ ಟ್ವಿಟರ್ ಖಾತೆಯಲ್ಲಿ ಧವನ್ ಸ್ಫೂರ್ತಿದಾಯಕ ಸಂದೇಶವನ್ನು ಹಂಚಿದ್ದಾರೆ. ಹೆಸರಾಂತ ಉರ್ದು ಕವಿ ರಾಹತ್ ಇಂದೋರಿ ಅವರ ಕವನವನ್ನು ಧವನ್ ಉಲ್ಲೇಖಿಸಿದ್ದಾರೆ.

ಗಾಯಗೊಂಡರೂ ಬೇಗನೇ ಗುಣಮುಕ್ತರಾಗಿ ಮತ್ತಷ್ಟು ಧೈರ್ಯವಂತರಾಗಿ ಆಡುವುದಾಗಿ ಧವನ್ ಸಂದೇಶ ನೀಡಿದ್ದಾರೆ. ಇದು ಅಭಿಮಾನಿಗಳಲ್ಲೂ ಹೆಚ್ಚಿನ ನಿರಾಳತೆಯನ್ನುಂಟು ಮಾಡಿದೆ.

ಏತನ್ಮಧ್ಯೆ ಧವನ್ ಮೇಲೆ ಒಂದು ವಾರದ ನಿಗಾ ವಹಿಸಲು ಬಿಸಿಸಿಐ ವೈದ್ಯಕೀಯ ತಂಡವು ನಿರ್ಧರಿಸಿದೆ. ತದಾ ಬಳಿಕವಷ್ಟೇ ವಿಶ್ವಕಪ್‌ನಲ್ಲಿ ಉಳಿದಿರುವ ಪಂದ್ಯಗಳಿಗೆ ಲಭ್ಯವಾಗುವರೇ ಎಂಬುದು ತಿಳಿದು ಬರಲಿದೆ.

ಭಾರತ ತನ್ನ ಮೂರನೇ ಪಂದ್ಯದಲ್ಲಿ ಗುರುವಾರದಂದು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌