ಆ್ಯಪ್ನಗರ

ಶಿಖರ್ ಮೇಲೆ ಒಂದು ವಾರದ ನಿಗಾ ವಹಿಸಲಿರುವ ಟೀಮ್ ಇಂಡಿಯಾ

ಹೆಬ್ಬರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಇಂಗ್ಲೆಂಡ್‌ನಲ್ಲೇ ಉಳಿದುಕೊಳ್ಳಲಿದ್ದು, ಒಂದು ವಾರದ ವರೆಗೆ ನಿಗಾ ವಹಿಸಲು ಬಿಸಿಸಿಐ ವೈದ್ಯಕೀಯ ತಂಡವು ನಿರ್ಧರಿಸಿದೆ. ತದಾ ಬಳಿಕವಷ್ಟೇ ವಿಶ್ವಕಪ್‌ನ ಉಳಿದಿರುವ ಪಂದ್ಯಗಳಿಗೆ ಲಭ್ಯವಾಗುವರೇ ಎಂಬುದು ತಿಳಿದು ಬರಲಿದೆ.

Vijaya Karnataka Web 11 Jun 2019, 9:17 pm
ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯದ ಸಮಸ್ಯೆಗೊಳಗಾಗಿರುವ ಶಿಖರ್ ಧವನ್ ಮೇಲೆ ಒಂದು ವಾರದ ನಿಗಾ ವಹಿಸಲು ಟೀಮ್ ಇಂಡಿಯಾ ವ್ಯಪಸ್ಥಾಪಕ ಮಂಡಳಿ ನಿರ್ಧರಿಸಿದೆ.
Vijaya Karnataka Web shikhar-dhawan-injury-01


ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ದಾಳಿಯು ಧವನ್ ಎಡಗೈಯ ಹೆಬ್ಬರಳಿಗೆ ಬಡಿದಿತ್ತು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ ಧವನ್ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾಗೆ ಗೆಲುವು ಒದಗಿಸಿಕೊಡಲು ನೆರವಾಗಿದ್ದರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಧವನ್ ಹೆಬ್ಬರಳಿಗೆ ಗಾಯವಾಗಿದ್ದು, ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ವರೆಗೆ ಸೂಕ್ಷ್ಮ ನಿಗಾ ವಹಿಸಲಿದೆ. ಹಾಗಾಗಿ ತಂಡದ ಜತೆಗೆ ಉಳಿದುಕೊಳ್ಳಲು ಸೂಚಿಸಲಾಗಿದೆ.

ಹಾಗೊಂದು ವೇಳೆ ಒಂದು ವಾರದೊಳಗೆ ಪೂರ್ಣವಾಗಿ ಗುಣಮುಖರಾಗದಿದ್ದಲ್ಲಿ ತವರಿಗೆ ಮರಳಲಿದ್ದಾರೆ. ತದಾ ಬಳಿಕವಷ್ಟೇ ಬದಲಿ ಆಟಗಾರ ಇಂಗ್ಲೆಂಡ್ ಪ್ರಯಾಣ ಬೆಳೆಸಲಿದ್ದಾರೆ. ಧವನ್ ಗುಣಮುಖರಾಗದಿದ್ದಲ್ಲಿ ರಿಷಬ್ ಪಂತ್ ಆಯ್ಕೆಯಾಗುವುದು ಖಚಿತವೆನಿಸಿದೆ.

ಸದ್ಯ ಒಂದು ವಾರದೊಳಗೆ ಧವನ್ ಸಂಪೂರ್ಣ ಗುಣಮುಖರಾಗುವ ಭರವಸೆಯನ್ನು ಟೀಮ್ ಇಂಡಿಯಾ ಹೊಂದಿದೆ. ಹಾಗಿದ್ದರೂ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌