ಆ್ಯಪ್ನಗರ

ವಿಶ್ವಕಪ್ ಸೋಲಿನ ಬಳಿಕ ಭಾರತೀಯ ಆಟಗಾರರ ಪ್ರತಿಕ್ರಿಯೆ ಏನಾಗಿತ್ತು?

ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿರುವ ಟೀಮ್ ಇಂಡಿಯಾ ನಿರ್ಗಮನದ ಹಾದಿ ಹಿಡಿದಿದೆ. ಇದರಂತೆ ತಂಡದ ಸದಸ್ಯರು ಟ್ವಿಟರ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

Vijaya Karnataka Web 12 Jul 2019, 8:05 pm
ಮ್ಯಾಂಚೆಸ್ಟರ್: ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಅಚ್ಚರಿಯ ಸೋಲು ಅನುಭವಿಸಿರುವ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಟೀಮ್ ಇಂಡಿಯಾ ಕೂಟದಿಂದಲೇ ಹೊರನಡೆದಿದೆ.
Vijaya Karnataka Web team-india


ಮಳೆಯಿಂದಾಗಿ ಮೀಸಲು ದಿನದಕ್ಕೆ ಮುಂದೂಡಲ್ಪಟ್ಟ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ ಅಂತರದ ಸೋಲಿಗೆ ಶರಣಾಗಿತ್ತು. 240 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಹೊರತಾಗಿಯೂ ಇನ್ಯಾವ ಬ್ಯಾಟ್ಸ್‌ಮನ್ ಹೋರಾಟ ಮನೋಭಾವವನ್ನು ತೋರಲೇ ಇಲ್ಲ.

ಇದರೊಂದಿಗೆ ಅಸಂಖ್ಯಾತ ಅಭಿಮಾನಿಗಳ ಕನಸು ಭಗ್ನಗೊಂಡಿದೆ. ಅತ್ತ ಕ್ರಿಕೆಟಿಗರು ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ. ಭಾರತ ಮಗದೊಂದು ವಿಶ್ವಕಪ್‌ಗಾಗಿ ನಾಲ್ಕು ವರ್ಷಗಳಷ್ಟು ಕಾಯಬೇಕಿದೆ.

1983ರಲ್ಲಿ ಕಪಿಲ್ ದೇವ್ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ದೇಶಕ್ಕಾಗಿ ಏಕದಿನ ವಿಶ್ವಕಪ್‌ಗಳನ್ನು ಗೆದ್ದಿದ್ದರು. ಆದರೆ ವಿರಾಟ್ ಕೊಹ್ಲಿ ಅದೇ ಸಾಧನೆ ಪುನರಾವರ್ತಿಸಲು ವಿಫಲವಾಗಿದ್ದಾರೆ.

ವಿಶ್ವಕಪ್ ‌ಸೋಲಿನ ಬಳಿಕ ಭಾರತೀಯ ಆಟಗಾರರ ಪ್ರತಿಕ್ರಿಯೆ ಏನಾಗಿತ್ತು ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಕೆಎಲ್ ರಾಹುಲ್
ರಿಷಬ್ ಪಂತ್
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ

ಯುಜ್ವೇಂದ್ರ ಚಹಲ್
ಕುಲ್‌ದೀಪ್ ಯಾದವ್

ಮೊಹಮ್ಮದ್ ಶಮಿ
ಜಸ್ಪ್ರೀತ್ ಬುಮ್ರಾ
ಮಯಾಂಕ್ ಅಗರ್ವಾಲ್
ಶಿಖರ್ ಧವನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌