ಆ್ಯಪ್ನಗರ

ಧೋನಿ ಔಟಾಗಿದ್ದು ನೋ ಬಾಲ್‌ಗೆ? ಕೆಟ್ಟ ತೀರ್ಪಿನಿಂದ ಭಾರತಕ್ಕೆ ವಿಶ್ವಕಪ್ ನಷ್ಟ!

ಏಕದಿನ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೋ ಬಾಲ್‌ಗೆ ಔಟಾಗಿದ್ದರು ಎಂಬ ವದಂತಿ ಟ್ವಿಟರ್‌ನಲ್ಲಿ ಹರಡುತ್ತಿದೆ. ಧೋನಿ ರನೌಟ್ ಆಗಿರುವುದಕ್ಕಿಂತಲೂ ಹಿಂದಿನ ಎಸೆತ ನೋ ಬಾಲ್ ಆಗಿತ್ತು ಎಂಬ ವಾದ ಕೇಳಿ ಬಂದಿದೆ.

Vijaya Karnataka Web 10 Jul 2019, 10:34 pm
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ ವಿಶ್ವಕಪ್ ಕನಸು ಭಗ್ನಗೊಂಡಿದೆ.
Vijaya Karnataka Web ms-dhoni-run-out-02


ಈ ನಡುವೆ ಟ್ವಿಟರ್‌ನಲ್ಲಿ ಅಭಿಮಾನಿಗಳ ಹರಡುತ್ತಿರುವ ಟ್ವೀಟ್‌ಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಪಂದ್ಯದ ನಿರ್ಣಾಯಕ ಹಂತದಲ್ಲಿ 48.3ನೇ ಓವರ್ ಎಸೆದ ಲೂಕಿ ಫೆರ್ಗ್ಯೂಸನ್ ದಾಳಿಯಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್‌ಗೆ ಬಲಿಯಾಗಿದ್ದರು.

ಆದರೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಮಾಡುತ್ತಿರುವ ವಾದಗಳ ಪ್ರಕಾರ ಧೋನಿ ರನೌಟ್‌ಗಿಂತಲೂ ಹಿಂದಿನ ಎಸೆತವು ನೋಬಾಲ್ ಆಗಿತ್ತು. ಇದಕ್ಕೆ ಸ್ಪಷ್ಟ ಪುರಾವೆಯನ್ನು ನೀಡಿದ್ದಾರೆ. ಐಸಿಸಿ ನಿಮಯಗಳ ಪ್ರಕಾರ ಮೂರನೇ ಪವರ್‌ಪ್ಲೇನಲ್ಲಿ ಅಂದರೆ 40ರಿಂದ 50 ಓವರ್‌ಗಳ ಮಧ್ಯೆ ಗರಿಷ್ಠ ಐವರು ಫೀಲ್ಡರ್‌ಗಳಿಗೆ ಮಾತ್ರ 30 ಯಾರ್ಡ್ ಸರ್ಕಲ್‌ನಿಂದ ಹೊರಗಡೆ ಕ್ಷೇತ್ರರಕ್ಷಣೆ ಮಾಡುವ ಅವಕಾಶವಿರುತ್ತದೆ.

ಆದರೆ ಫೆರ್ಗ್ಯೂಸನ್ ಎಸೆದ 48.2ನೇ ಎಸೆತದಲ್ಲಿ ಕಿವೀಸ್ ಆರು ಫೀಲ್ಡರ್‌ಗಳನ್ನು ಬೌಂಡರಿ ಗೆರೆ ಬಳಿ ನಿಲ್ಲಿಸಿತ್ತು. ಆದರೆ ಅಂಪೈರ್ ನೋ ಬಾಲ್ ನೀಡಿರಲಿಲ್ಲ. ಆದಾದ ಬಳಿಕದ ಎಸೆತದಲ್ಲಿ ಧೋನಿ ರನೌಟ್ ಆಗಿದ್ದರು. ಇದರಿಂದ ಭಾರತ ಕನಸು ನೂಚ್ಚುನೂರಾಗಿತ್ತು.

ಹಾಗೊಂದು ವೇಳೆ ಅಂಪೈರ್‌ಗಳು ನೋ ಬಾಲ್ ನೀಡಿದ್ದಲ್ಲಿ ಧೋನಿ ಗೇಮ್ ಪ್ಲ್ಯಾನ್ ಬೇರೆಯೇ ಆಗಿರುತ್ತಿತ್ತು. ಅಲ್ಲದೆ ರನೌಟ್ ಆದ ಎಸೆತವನ್ನು ಸಿಕ್ಸರ್‌ಗಟ್ಟಲು ಪ್ರಯತ್ನಿಸುತ್ತಿದ್ದರು. ಇದರಿಂದಾಗಿ ಭಾರತಕ್ಕೆ ಗೆಲುವು ದಾಖಲಾಗಬಹುದಿತ್ತು ಎಂಬ ವಾದಗಳು ಕೇಳಿಬಂದಿದೆ. ಐಸಿಸಿ ನಿಮಯ ಪ್ರಕಾರ ಫ್ರೀ ಹಿಟ್‌ನಲ್ಲೂ ರನೌಟ್ ಆದರೆ ಬ್ಯಾಟ್ಸ್‌ಮನ್ ಪೆವಿಲಿಯನ್‌ಗೆ ನಡೆಯಬೇಕು ಎಂಬುದಿಲ್ಲಿ ಗಮನಾರ್ಹವೆನಿಸುತ್ತದೆ.

ಪ್ರಸ್ತುತ ಐಸಿಸಿ ಹಾಗೂ ಅಂಪೈರ್‌ಗಳ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ನಿಜಾಂಶ ಕುರಿತಂತೆ ಐಸಿಸಿ ಅಧಿಕೃತವಾಗಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌