ಆ್ಯಪ್ನಗರ

ರೋಹಿತ್ ಔಟ್; ಟ್ವಿಟರ್‌ನಲ್ಲಿ ಆಕ್ರೋಶ ತೋಡಿಕೊಂಡ ಫ್ಯಾನ್ಸ್

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅನುಭವಿ ಓಪನರ್ ರೋಹಿತ್ ಶರ್ಮಾ ವಿವಾದಾತ್ಮಕ ಡಿಆರ್‌ಎಸ್ ತೀರ್ಪಿಗೆ ಬಲಿಯಾಗಿದ್ದರು. ಇದೀಗ ಟ್ವಿಟರ್‌ನಲ್ಲಿ ಥರ್ಡ್ ಅಂಪೈರ್ ವಿರುದ್ದ ಅಭಿಮಾನಿಗಳು ಆಕ್ರೋಶವನ್ನು ತೋಡಿಕೊಂಡಿದ್ದಾರೆ.

Vijaya Karnataka Web 27 Jun 2019, 5:20 pm
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿವಾದಾತ್ಮಕ ಡಿಆರ್‌ಎಸ್ ನಿರ್ಣಯಕ್ಕೆ ಬಲಿಯಾಗಿದ್ದಾರೆ.
Vijaya Karnataka Web rohit-sharma-drs-01


ರೋಹಿತ್ ಔಟ್ ಅಥವಾ ನಾಟೌಟ್ ಎಂಬದು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಥರ್ಡ್ ಅಂಪೈರ್ ವಿರುದ್ಧ ಆಕ್ರೋಶವನ್ನು ತೋಡಿಕೊಂಡಿದ್ದಾರೆ.

ವಿಂಡೀಸ್ ವೇಗಿ ಕೆಮರ್ ರೂಚ್ ಎಸೆದ ಭಾರತದ ಇನ್ನಿಂಗ್ಸ್‌ನ ಆರನೇ ಓವರ್‌ನ ಅಂತಿಮ ಎಸೆತದಲ್ಲಿ ಘಟನೆ ನಡೆದಿತ್ತು. ರೋಹಿತ್ ಬ್ಯಾಟ್ ಹಾಗೂ ಪ್ಯಾಡ್ ಮಧ್ಯೆ ಚೆಂಡು ವಿಕೆಟ್ ಕೀಪರ್ ಶಾಯ್ ಹೋಪ್ ಕೈಸೇರಿತ್ತು.

ಬಳಿಕ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಡಿಆರ್‌ಎಸ್ ಮನವಿ ಮೊರೆ ಹೋಗಲು ನಿರ್ಧರಿಸಿದ್ದರು. ಬಳಿಕ ರಿಪ್ಲೇ ಪರಿಶೀಲಿಸಿದ ಥರ್ಡ್ ಅಂಪೈರ್ ಔಟ್ ತೀರ್ಪನ್ನು ನೀಡಿದ್ದರು. ಆದರೆ ಬ್ಯಾಟ್ ಹಾಗೂ ಚೆಂಡು ನಡುವೆ ಸ್ಪಷ್ಟ ಅಂತರವಿರುವುದು ಗೋಚರಿಸಿತ್ತು. ಹಾಗಾಗಿ ಅಂಪೈರ್ ತೀರ್ಪು ಸರಿಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಬಳಿಕ ಕೇದಾರ್ ಜಾಧವ್ ಸಹ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌