ಆ್ಯಪ್ನಗರ

ಕೊನೆಗೂ ಶಂಕರ್‌ಗೆ ಕೊಕ್; ಪಂತ್‌ಗೆ ಚೊಚ್ಚಲ ವಿಶ್ವಕಪ್ ಪಂದ್ಯ

ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಿಂದ ಆಲ್‌ರೌಂಡರ್ ರಿಷಬ್ ಪಂತ್‌ರನ್ನು ಕೈಬಿಡಲಾಗಿದೆ. ಇದೀಗ ಶಂಕರ್ ಸ್ಥಾನಕ್ಕೆ ಉದಯೋನ್ಮುಖ ರಿಷಬ್ ಪಂತ್‌ರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ವಿಶ್ವಕಪ್ ಕನಸು ನನಸಾಗಿದೆ.

Vijaya Karnataka Web 30 Jun 2019, 2:49 pm
ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ ತರಲಾಗಿದೆ.
Vijaya Karnataka Web rishabh-pant


ಆಲ್‌ರೌಂಡರ್ ವಿಜಯ್ ಶಂಕರ್ ಸ್ಥಾನಕ್ಕೆ ಉದಯೋನ್ಮುಖ ರಿಷಬ್ ಪಂತ್‌ರನ್ನು ಸೇರಿಕೊಳ್ಳಲಾಗಿದೆ. ಇದರೊಂದಿಗೆ ಪಂತ್‌ಗೆ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡುವ ಅದೃಷ್ಟ ಒಲಿದು ಬಂದಿದೆ.

ಸರಾಸರಿ ಪ್ರದರ್ಶನವನ್ನೇ ನೀಡುತ್ತಾ ಬಂದಿರುವ ಶಂಕರ್‌ರನ್ನು ಕೈಬಿಡಲು ಸಾಕಷ್ಟು ಒತ್ತಡಗಳು ಕೇಳಿಬಂದಿದ್ದವು. ಈ ನಡುವೆ ಸುದ್ದಿಗೋಷ್ಠಿಯಲ್ಲಿ ತ್ರಿ ಡೈಮನ್ಷನಲ್ ಪ್ಲೇಯರ್ ಶಂಕರ್‌ರನ್ನು ನಾಯಕ ವಿರಾಟ್ ಕೊಹ್ಲಿ ಬೆಂಬಲಿಸಿದ್ದರು.

ಇದೀಗ ಮಹತ್ವದ ದಲಾವಣೆ ತರಲಾಗಿದೆ. ಈ ಬಗ್ಗೆ ಟಾಸ್ ವೇಳೆ ಹೇಳಿಕೆ ನೀಡಿರುವ ಕೊಹ್ಲಿ, ಚೊಕ್ಕದಾದ ಬೌಂಡರಿ ಪ್ರಯೋಜನವನ್ನು ಪಂತ್ ಪಡೆಯಬಹುದಾಗಿದೆ ಎಂದಿದ್ದಾರೆ.

ಈ ಹಿಂದೆ ವಿಶ್ವಕಪ್‌ಗಾಗಿನ ನೈಜ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ವಿಫಲವಾಗಿದ್ದರು. ಆದರೆ ವಿಶ್ವಕಪ್ ಮಧ್ಯೆ ಶಿಖರ್ ಧವನ್ ಗಾಯಗೊಂಡಿದ್ದರಿಂದ ಪಂತ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ವಿಶ್ವಕಪ್ ಕನಸು ನನಸಾಗಿದೆ.

ಅತ್ತ ಅನುಭವಿ ದಿನೇಶ್ ಕಾರ್ತಿಕ್ ತಂಡದಲ್ಲಿದ್ದರೂ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಇನ್ನೊಂದೆಡೆ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌