ಆ್ಯಪ್ನಗರ

ದ.ಆಫ್ರಿಕಾ ವಿರುದ್ಧ ವರ್ಕೌಟ್ ಆಯ್ತು ಕೊಹ್ಲಿ ಮಾಸ್ಟರ್ ಮೈಂಡ್!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಅತಿ ಹೆಚ್ಚು ಅವಲಂಬಿಸುತ್ತಾರೆಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೀಗ ಕೊಹ್ಲಿ ತಮ್ಮ ನಾಯಕತ್ವದಿಂದಲೇ ಉತ್ತರ ನೀಡಿದ್ದಾರೆ.

Vijaya Karnataka Web 6 Jun 2019, 5:14 pm
ಸೌತಾಂಪ್ಟನ್: ವಿರಾಟ್ ಕೊಹ್ಲಿ ನಾಯಕತ್ವ ಸ್ವೀಕರಿಸಿದ ಸಯಮದಿಂದಲೇ ಆತನ ಕಪ್ತಾನಗಿರಿಯನ್ನು ವಿಮರ್ಶಕರು ಟೀಕಿಸುತ್ತಿದ್ದಾರೆ. ಅಭಿಮಾನಿಗಳು ಕೂಡಾ ಇದರಿಂದ ಹೊರತಾಗಿಲ್ಲ.
Vijaya Karnataka Web virat-kohli-03


ಆದರೆ ತಮ್ಮ ಆಕ್ರಮಣಕಾರಿ ನಾಯಕತ್ವ ಕೌಶಲ್ಯದೊಂದಿಗೆ ಕೊಹ್ಲಿ ಇವೆಲ್ಲಕ್ಕೂ ಉತ್ತರ ನೀಡಿದ್ದಾರೆ. ಏಕದಿನ ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.

ಇಲ್ಲಿ ಕೊಹ್ಲಿ ತೋರಿದ ನಾಯಕತ್ವ ಕೌಶಲ್ಯ ಹಾಗೂ ತ್ವರಿತ ಹಾಗೂ ನಿಖರ ನಿರ್ಣಯಗಳು ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಆಕ್ರಮಣಕಾರಿ ಫೀಲ್ಡಿಂಗ್ ಸೆಟ್ ಮಾಡಲಾಯಿತು. ಪರಿಣಾಮ ಹಾಶೀಮ್ ಆಮ್ಲಾ ಬಲೆಗೆ ಬಿದ್ದರು.

ಬಳಿಕ ಕ್ವಿಂಟನ್ ಡಿ ಕಾಕ್‌ರನ್ನು ಮಾಸ್ಟರ್ ಪ್ಲ್ಯಾನ್ ರೂಪಿಸುವ ಮೂಲಕ ಹೊರದಬ್ಬಲಾಯಿತು. ಸ್ವತ: ನಾಯಕ ಕೊಹ್ಲಿ ಅವರೇ ಥರ್ಡ್ ಸ್ಲಿಪ್‌ನಲ್ಲಿ ನಿಲ್ಲುವ ಮೂಲಕ ರಣತಂತ್ರ ರೂಪಿಸಲಾಯಿತು. ಡಿ ಕಾಕ್ ಡ್ರೈವ್ ಮಾಡುವಂತೆ ಪ್ರೇರೆಪಿಸುವ ರೀತಿಯಲ್ಲಿ ಆಫ್ ಸೈಡ್‌ನಿಂದ ಫೀಲ್ಡರನ್ನು ತೆರವುಗೊಳಿಸಿ ಹೆಚ್ಚಿನ ಜಾಗ ಬಿಟ್ಟುಕೊಟ್ಟರು. ಇದಕ್ಕೆ ತಕ್ಕಂತೆ ದಾಳಿ ನಡೆಸಿದ ಬುಮ್ರಾ, ಡಿ ಕಾಕ್‌ರನ್ನು ಬಲೆಗೆ ಬೀಳಿಸಿದರು.

ತದಾ ಬಳಿಕ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಅವರಿಗೂ ಉತ್ತೇಜನ ತುಂಬಿದ ಕೊಹ್ಲಿ ಆಕ್ರಮಣಕಾರಿ ಫೀಲ್ಡಿಂಗ್ ಮುನ್ನಡೆಸಿದರು. ಈ ಮೂಲಕ ಹರಿಣಗಳ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು.

ಈ ಮೊದಲು ರಿಸ್ಟ್ ಸ್ಪಿನ್ ದಾಳಿಯ ವಿರುದ್ಧ ದಕ್ಷಿಣ ಆಫ್ರಿಕಾದ ಕಳಪೆ ಸಾಧನೆಯನ್ನು ಅರಿತ ಕೊಹ್ಲಿ, ಇನ್ ಫಾರ್ಮ್ ಆಟಗಾರರಾದ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾರನ್ನು ಹೊರಗಿರಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಅಂತಿಮವಾಗಿ ತನ್ನೆಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ತಗತಗೊಳಿಸುವ ಮೂಲಕ ವಿಜಯದ ರೂವಾರಿಯೆನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌