ಆ್ಯಪ್ನಗರ

ವಿಶ್ವಕಪ್ ಸೋಲಿನ ಬಳಿಕ ಭಾವನಾತ್ಮಕ ಸಂದೇಶ ಹಂಚಿದ ಕ್ಯಾಪ್ಟನ್ ಕೊಹ್ಲಿ

ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಮುಖ ಕಾಣದೆ ಭಾರತದ ಅಭಿಯಾನ ಕೊನೆಗೊಂಡಿರುವಂತೆಯೇ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಜತೆಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತ ಸೋಲಿಗೆ ಶರಣಾಗಿತ್ತು.

Vijaya Karnataka Web 11 Jul 2019, 2:47 pm
ಮ್ಯಾಂಚೆಸ್ಟರ್: ಭಾರತದ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಇನ್ನು ಏನೇ ಇದ್ದರೂ ಮಗದೊಂದು ಏಕದಿನ ವಿಶ್ವಕಪ್‌ಗಾಗಿ ನಾಲ್ಕು ವರ್ಷಗಳಷ್ಟು ಕಾಯಬೇಕಿದೆ.
Vijaya Karnataka Web virat-kohli-12


ನ್ಯೂಜಿಲೆಂಡ್ ವಿರುದ್ಧ 18 ರನ್ ಅಂತರದ ಪರಾಭವಕ್ಕೆ ಶರಣಾಗಿರುವ ಟೀಮ್ ಇಂಡಿಯಾ ಸೆಮಿಫೈನಲ್ ಹಂತದಿಂದಲೇ ಹೊರನಡೆದಿದೆ. ಇದರಂತೆ ಅಭಿಮಾನಿಗಳು ಅತೀವ ನಿರಾಸೆಗೊಳಗಾಗಿದ್ದಾರೆ.

ಏತನ್ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳ ಜತೆಗೆ ಭಾವನಾತ್ಮಕ ಸಂದೇಶವನ್ನು ಹಂಚಿದ್ದಾರೆ.

"ಮೊದಲನೆಯದಾಗಿ ತಂಡವನ್ನು ಬೆಂಬಲಿಸಲು ಭಾರಿ ಸಂಖ್ಯೆಯಲ್ಲಿ ಬಂದು ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನದೆ. ನೀವಿದನ್ನು ನಮ್ಮೆಲ್ಲರಿಗೂ ಸ್ಮರಣೀಯ ಸರಣಿಯನ್ನಾಗಿ ಮಾಡಿದ್ದೀರಿ ಮತ್ತು ಖಂಡಿತವಾಗಿಯೂ ತಂಡದ ಮೇಲೆ ಬೀರಿದ ಪ್ರೀತಿಯನ್ನು ಅನುಭವಿಸಿದ್ದೇವೆ. ನಾವೆಲ್ಲರೂ ನಿರಾಸೆಗೊಂಡಿದ್ದು, ನಿಮ್ಮಂತೆಯೇ ಅದೇ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದ್ದೇವೆ. ಜೈ ಹಿಂದ್!" ಎಂದು ಕ್ಯಾಪ್ಟನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವತ: ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವುದು ಭಾರತದ ಹಿನ್ನಡೆಗೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌