ಆ್ಯಪ್ನಗರ

ಐಸಿಸಿ ಆದೇಶಕ್ಕೆ ತಲೆಬಾಗಿದ ಬಿಸಿಸಿಐ

ಏಕದಿನ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನದ ಗ್ಲೌಸ್ ವಿವಾದದಲ್ಲಿ ಐಸಿಸಿ ಸೂಚನೆಯನ್ನು ಪಾಲಿಸುವುದಾಗಿ ಬಿಸಿಸಿಐ ತಿಳಿಸಿದೆ. ಇದರೊಂದಿಗೆ ವಿವಾದ ಇತ್ಯರ್ಥಗೊಂಡಿದೆ.

Vijaya Karnataka Web 8 Jun 2019, 5:45 pm
ಹೊಸದಿಲ್ಲಿ: ಯೋಧರ ಬಲಿದಾನದ ಲಾಂಛನವನ್ನು ಮಹೇಂದ್ರ ಸಿಂಗ್ ಧೋನಿ ತಮ್ಮ ಗ್ಲೌವ್‌ನಲ್ಲಿ ಹಾಕಿಸಿಕೊಳ್ಳಬಾರದು ಎಂಬ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆದೇಶಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಲೆಬಾಗಿದೆ.
Vijaya Karnataka Web ms-dhoni-glove-01


ಧೋನಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪಿಂಗ್‌ ಮಾಡುತ್ತಿದ್ದ ವೇಳೆ ಕೈಗವಸಿನಲ್ಲಿ ಭಾರತೀಯ ಅರೆಸೇನಾ ಪಡೆಗಳ 'ಬಲಿದಾನ್‌ ಬ್ಯಾಡ್ಜ್‌' ಅಂಟಿಸಿಕೊಂಡಿದ್ದರು. ಪ್ರಕರಣವು ವಿವಾದ ಸ್ವರೂಪವನ್ನು ತಾಳಿದಂತೆ ಆರ್ಮಿ ಗ್ಲೌವ್ ಧರಿಸಿದಂತೆ ಧೋನಿಗೆ ಸೂಚಿಸುವಂತೆ ಬಿಸಿಸಿಐ ಐಸಿಸಿ ವಿನಂತಿಸಿತ್ತು.

ಆದರೆ ಧೋನಿ ಬೆನ್ನಿಗೆ ನಿಂತಿದ್ದ ಬಿಸಿಸಿಐ ಐಸಿಸಿಗೆ ಅನುಮತಿ ಕೋರಿ ಮನವಿ ಮಾಡಿಕೊಂಡಿತ್ತು. ಆದರೆ ಸೂಕ್ಷ್ಮ ಪರಿಶೀಲನೆಯ ಬಳಿಕ ಭಾವನೆಗಳಿಗೆ ಧಕ್ಕೆ ತರುವಂಥ ಆ 'ವಿಶಿಷ್ಟ ಚಿಹ್ನೆ'ಯನ್ನು ತೆಗೆಸಿ ಎಂದು ಬಿಸಿಸಿಐ ಮೇಲೆ ಐಸಿಸಿ ಒತ್ತಡ ಹೇರಿದೆ. ಈ ಆದೇಶಕ್ಕೆ ಬಿಸಿಸಿಐ ತಲೆ ಬಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಡಳಿತಾತ್ಮಕ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್, ಐಸಿಸಿ ಆಡಳಿತ ಮಂಡಳಿಯ ನಿರ್ಧಾರವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ.

ನಾವು ಐಸಿಸಿ ನಿಯಮಗಳನ್ನು ಪಾಲಿಸುತ್ತೇವೆ. ಭಾರತ ಸ್ಫೋರ್ಟಿಂಗ್ ದೇಶವಾಗಿದ್ದು, ಧೋನಿ ಗ್ಲೌವ್ ಲಾಂಛನವು ಧಾರ್ಮಿಕ ಅಥವಾ ವಾಣಿಜ್ಯ ಸಂದೇಶವನ್ನು ಸಾರುತ್ತಿಲ್ಲ. ಆದರೂ ಯಾವ ಆಟಗಾರರಿಗೂ ಐಸಿಸಿ ಅನುಮತಿ ನೀಡಿಲ್ಲ. ಹಾಗಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಬಯಸುತ್ತೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌