ಆ್ಯಪ್ನಗರ

ಗಾಯಾಳು ಜಾಧವ್ ಸ್ಥಾನಕ್ಕೆ ಪಂತ್ ಆಯ್ಕೆ?

ಐಪಿಎಲ್ 2019ರ ವೇಳೆಯಲ್ಲಿ ಗಾಯಗೊಂಡಿರುವ ಕೇದರ್ ಜಾಧವ್ ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡಕ್ಕೆ ಲಭ್ಯವಾಗುವರೇ ಎಂಬುದು ಬಹಳಷ್ಟು ಕುತೂಹಲಕೀಡು ಮಾಡಿದೆ. ಸದ್ಯ ಬಿಸಿಸಿಐ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ.

Vijaya Karnataka Web 9 May 2019, 11:17 am
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ವೇಳೆಯಲ್ಲಿ ಗಾಯ ಮಾಡಿಕೊಂಡಿರುವ ಭಾರತದ ವಿಶ್ವಕಪ್ ತಂಡದ ಸದಸ್ಯ ಕೇದರ್ ಜಾಧವ್ ನಿಗದಿತ ಅವಧಿಯೊಳಗೆ ಚೇತರಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
Vijaya Karnataka Web jadhav-dhoni


ಈಗಾಗಲೇ 15 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆಯಾದರೂ ಐಸಿಸಿ ನಿರ್ದೇಶನದ ಪ್ರಕಾರ ಮೇ 23ರೊಳಗೆ ತಂಡ ಬದಲಾಯಿಸಲು ಕೊನೆಯ ಗಡುವು ದಿನಾಂಕವಾಗಿದೆ.

ಹಾಗಾಗಿ ಜಾಧವ್ ಗಾಯದ ಸಮಸ್ಯೆ ಗಂಭೀರವಾಗಿ ಕಂಡುಬಂದರೆ ಬದಲಿ ಆಟಗಾರನನ್ನು ಘೋಷಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಜಾಧವ್ ಅಲಭ್ಯವಾದರೆ ಆ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಯಂಗ್ ರಿಷಬ್ ಪಂತ್ ಹಾಗೂ ಅಂಬಡಿ ರಾಯುಡು ನಡುವೆ ಪೈಪೋಟಿ ಕಂಡುಬಂದರೂ ಸುರೇಶ್ ರೈನಾ ಅಥವಾ ಯುವರಾಜ್ ಸಿಂಗ್ ಆಯ್ಕೆ ಮಾಡುವಂತೆಯೂ ಅಭಿಮಾನಿಗಳು ಕರೆ ನೀಡಿದ್ದಾರೆ.

ಜಾಧವ್ ಆಲ್‌ರೌಂಡರ್ ಆಟಗಾರನಾಗಿರುವುದರಿಂದ ಅಕ್ಷರ್ ಪಟೇಲ್ ಹೆಸರು ಸಹ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಕಾದು ನೋಡುವ ತಂತ್ರವನ್ನು ಬಿಸಿಸಿಐ ಅನುಸರಿಸುತ್ತಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಐಪಿಎಲ್ 2019ರಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ಆಟಗಾರನಾಗಿರುವ ಜಾಧವ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಬೌಂಡರಿ ಗೆರೆಯ ಬಳಿಕ ಫೀಲ್ಡಿಂಗ್ ಮಾಡುತ್ತಿರುವ ವೇಳೆ ಡೈವ್ ಹೊಡೆದು ಭುಜ ನೋವಿಗೊಳಗಾಗಿದ್ದರು. ತಕ್ಷಣವೇ ಮೈದಾನ ತೊರೆದು ವೈದ್ಯಕೀಯ ಪರೀಕ್ಷೆಗೊಳಗಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌