ಆ್ಯಪ್ನಗರ

ವಿಂಡೀಸ್ ವಿರುದ್ಧ ರಣತಂತ್ರ ಬದಲಾಯಿಸುವರೇ ಧೋನಿ?

ಅಫಘಾನಸ್ತಾನ ವಿರುದ್ಧ ತೀರಾ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ತೀವ್ರ ಟೀಕೆಗೊಳಗಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೆಸ್ಟ್‌ಇಂಡೀಸ್ ವಿರುದ್ಧ ತಮ್ಮ ನಿಲುವನ್ನು ಬದಲಾಯಿಸಲಿದ್ದಾರೆಯೇ ಎಂಬುದು ಬಹಳಷ್ಟು ಕುತೂಹಲಕ್ಕೆಡೆ ಮಾಡಿದೆ.

Vijaya Karnataka Web 26 Jun 2019, 2:38 pm
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ವಿರುದ್ಧ ನಿಧಾನಗತಿಯ ಆಟವಾಡುವ ಮೂಲಕ ಭಾರತದ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತೀವ್ರ ಟೀಕೆಗೊಳಗಾಗಿದ್ದಾರೆ.
Vijaya Karnataka Web ms-dhoni-05


ಇದೀಗ ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮಹಿ ತಮ್ಮ ರಣತಂತ್ರವನ್ನು ಬದಲಾಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಫ್ಘಾನ್ ಬೌಲರ್‌ಗಳಿಗೆ ಅತಿಯಾದ ಗೌರವ ನೀಡಿದ್ದ ಧೋನಿ ತೀರಾ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದರು. ಪರಿಣಾಮ ಕೊನೆಯ ಹಂತದಲ್ಲಿ ರನ್ ಗತಿ ಏರಿಸುವಲ್ಲಿ ವಿಫಲವಾಗಿದ್ದರು. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸಹ ಧೋನಿ ಬಗ್ಗೆ ಬೇಸರ ತೋಡಿಕೊಂಡಿದ್ದರು.

ದೊಡ್ಡ ಹೊಡೆತವನ್ನು ಹೊಡೆಯುವ ಸಾಮರ್ಥ್ಯ ಇದ್ದರೂ ಕನಿಷ್ಠ ಸಿಂಗಲ್ಸ್, ಡಬಲ್ಸ್‌ಗಳನ್ನು ಕದಿಯದೆ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಆಡಿರುವುದು ಧೋನಿ ಹಿನ್ನಡೆಗೆ ಕಾರಣವಾಗಿತ್ತು. ಇದರಿಂದಾಗಿ ಸಹ ಆಟಗಾರ ಕೇದಾರ್ ಜಾಧವ್ ಮೇಲೂ ಒತ್ತಡವುಂಟಾಗಿತ್ತು.

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿರುವ ಧೋನಿ 28 ರನ್‌ಗಳನ್ನಷ್ಟೇ ಗಳಿಸಿದ್ದರು. ಒಟ್ಟಿನಲ್ಲಿ ವಿಂಡೀಸ್ ವಿರುದ್ಧ ಧೋನಿ ರಣತಂತ್ರವು ಹೆಚ್ಚಿನ ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌