ಆ್ಯಪ್ನಗರ

ಬಲಿದಾನದ ಲಾಂಛನ ಗ್ಲೌವ್ ಧರಿಸಿ ಆಡದಿದ್ದರೆ ಧೋನಿ ದೇಶಪ್ರೇಮಕ್ಕೆ ಧಕ್ಕೆಯಾದಿತೇ?

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನ ಲಾಂಛನ ಹೊಂದಿರುವ ಗ್ಲೌವ್‌ನೊಂದಿಗೆ ಆಡಲಿದ್ದಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Vijaya Karnataka Web 8 Jun 2019, 10:28 pm
ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನದ ಲಾಂಛನ ಹೊಂದಿರುವ ಗ್ಲೌವ್ ಧರಿಸಿ ಆಡಿದ್ದರು.
Vijaya Karnataka Web ms-dhoni-03


ಇದು ತೀವ್ರ ವಿವಾದ ಸ್ವರೂಪಕ್ಕೆ ತಲುಪಿರುವ ಹಿನ್ನಲೆಯಲ್ಲಿ ಧೋನಿ ಆರ್ಮಿ ಲಾಂಛನ ತೆಗೆಯುವಂತೆ ಬಿಸಿಸಿಐಗೆ ಐಸಿಸಿ ಆದೇಶ ಹೊರಡಿಸಿದೆ. ಐಸಿಸಿ ನಿಯಮವನ್ನು ಪಾಲಿಸುವುದಾಗಿಯೂ ಬಿಸಿಸಿಐ ಸ್ಪಷ್ಟಪಡಿದೆ.

ಹಾಗಾಗಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಧೋನಿ ಯೋಧರ ಬಲಿದಾನದ ಗ್ಲೌವ್ ಧರಿಸಿ ಆಡುವುದು ಅನುಮಾನವೆನಿಸಿದೆ. ಇದರಿಂದ ಧೋನಿ ದೇಶಪ್ರೇಮಕ್ಕೆ ಧಕ್ಕೆಯಾಗುವುದೇ ಎಂಬುದು ತೀವ್ರ ಚರ್ಚೆಯ ವಿಷಯವಾಗಿದೆ.

ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸುತ್ತಿರುವ ಧೋನಿ, ತಾವು ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಅರೆಸೇನಾ ಪಡೆಯ ಯೋಧರ ಬಲಿದಾನದ ಲಾಂಛನದ ಗ್ಲೌವ್ ಧರಿಸಿದ್ದರು. ಈ ಮೂಲಕ ಇಡೀ ಕ್ರಿಕೆಟ್ ಜಗತ್ತಿಗೆ ತಮ್ಮ ದೇಶಪ್ರೇಮವನ್ನು ಸಾರಿದ್ದರು.

ಯಾವುದೇ ಕಾರಣಕ್ಕೂ ಧೋನಿ ತಮ್ಮ ಆರ್ಮಿ ಲಾಂಛನ ತೆರವು ಮಾಡಬಾರದು ಎಂಬುದು ಕಟ್ಟಾ ದೇಶಾಭಿಮಾನಿಗಳ ಆಶಯವಾಗಿದೆ. ಇನ್ನೊಂದೆಡೆ ಧೋನಿ ಓರ್ವ ಕ್ರಿಕೆಟಿಗನಾಗಿದ್ದು, ವಿಶ್ವಕಪ್ ಅಭಿಯಾನದಲ್ಲಿ ಟೀಮ್ ಇಂಡಿಯಾದ ನಿರ್ಣಾಯಕ ಆಟಗಾರನಾಗಿದ್ದಾರೆ. ಅವರ ಮುಂದೆ ವಿಶ್ವಕಪ್ ಗೆಲ್ಲುವ ದೊಡ್ಡ ಗುರಿಯಿದೆ. ಹಾಗಾಗಿ ಬಲಿದಾನದ ಬ್ಯಾಡ್ಜ್ ಇಲ್ಲದಿದ್ದರೂ ಅವರ ದೇಶಾಭಿಮಾನ ಕುಗ್ಗುವುದಿಲ್ಲ. ಹಾಗಾಗಿ ಭಾರತಕ್ಕಾಗಿ ಆಡಲು ಮೈದಾನಕ್ಕಿಳಿಯಬೇಕು ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನ ನಡೆಯು ಅತಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌