ಆ್ಯಪ್ನಗರ

ಪಂದ್ಯವಷ್ಟೇ ಅಲ್ಲ, ಟೂರ್ನಿ ಗೆಲ್ಲಬೇಕು: ಹರ್ಷ ಭೋಗ್ಲೆ

​​ಜೇಸನ್‌ ಹೋಲ್ಡರ್‌ ಬಳಗ ಆರಂಭಿಕ ಪಂದ್ಯ ಜಯಿಸಿದೆ ನಿಜ; ಆದರೆ, ಅದು ಸಾಲದು... ಇಡೀ ಟೂರ್ನಿಯನ್ನು ಗೆಲ್ಲಬೇಕು. ತಂಡದ ಸದಸ್ಯರ ಪ್ರದರ್ಶನ ಆಶಾದಾಯಕವಾಗಿದ್ದರೂ, ಸ್ಥಿರತೆ ಕಾಪಾಡಿಕೊಳ್ಳುವುದು ಅವರಿಗೆ ಅನಿವಾರ್ಯ.

Agencies 6 Jun 2019, 10:37 am
ಮುಂಬಯಿ: ವೆಸ್ಟ್ ಇಂಡೀಸ್ ತಂಡ ಕೆಲವು ಪಂದ್ಯ ಗೆಲ್ಲುವುದರಿಂದ ಪ್ರಯೋಜನವಿಲ್ಲ, ಅವರು ಟೂರ್ನಿಯನ್ನೇ ಗೆಲ್ಲಬೇಕಿದೆ ಎಂದು ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ.
Vijaya Karnataka Web WS


ಸಲ್ಲದ ಕಾರಣಗಳಿಗಾಗಿ ಸುದ್ದಿಯಾಗುತ್ತಿರುವ ವೆಸ್ಟ್‌ ಇಂಡೀಸ್‌ ತಂಡ ಪಾಕಿಸ್ತಾನ ತಂಡಕ್ಕೆ ಸಿಡಿಲಾಘಾತ ನೀಡುವ ಮೂಲಕ ಲಯಕ್ಕೆ ಮರಳಿದೆ. ಆದರೆ, ಇದೇ ತಂಡ ವಿಶ್ವಕಪ್‌ ಅಂಗಣಕ್ಕೆ ಕಾಲಿಡುವುದಕ್ಕೂ ಮೊದಲು ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು.

ಜೇಸನ್‌ ಹೋಲ್ಡರ್‌ ಬಳಗ ಆರಂಭಿಕ ಪಂದ್ಯ ಜಯಿಸಿದೆ ನಿಜ; ಆದರೆ, ಅದು ಸಾಲದು... ಇಡೀ ಟೂರ್ನಿಯನ್ನು ಗೆಲ್ಲಬೇಕು. ತಂಡದ ಸದಸ್ಯರ ಪ್ರದರ್ಶನ ಆಶಾದಾಯಕವಾಗಿದ್ದರೂ, ಸ್ಥಿರತೆ ಕಾಪಾಡಿಕೊಳ್ಳುವುದು ಅವರಿಗೆ ಅನಿವಾರ್ಯ.

ಆಸ್ಪ್ರೇಲಿಯಾ ಪರ ವಾರ್ನರ್‌ ಅತ್ಯುತ್ತಮ ಲಯದಲ್ಲಿದ್ದಾರೆ. ಆದರೆ, ನಾಯಕ ಸ್ಟೀವ್‌ ಸ್ಮಿತ್‌ ತುಕ್ಕು ಹಿಡಿದಿರುವ ತಮ್ಮ ಆಟಕ್ಕೆ ಸಾಣೆ ಹಿಡಿಸಬೇಕಿದೆ. ಮ್ಯಾಕ್ಸ್‌ವೆಲ್‌ ಖಂಡಿತವಾಗಿಯೂ ಮ್ಯಾಚ್‌ ವಿನ್ನರ್‌.

ಆದರೆ, ಅವರಿಗೆ ಸಮರ್ಪಕ ವೇದಿಕೆ ದೊರೆಯಬೇಕಿದೆ. ಜತೆಗೆ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಲಯಕ್ಕೆ ಮರಳುವ ಅಗತ್ಯವಿದೆ ಎಂದು ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌