ಆ್ಯಪ್ನಗರ

ಯುವಿಗೆ ಸಚಿನ್ ಭಾವನಾತ್ಮಕ ಸಂದೇಶ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಯುವರಾಜ್ ಸಿಂಗ್ ಅವರಿಗೆ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.

Vijaya Karnataka Web 11 Jun 2019, 6:10 pm
ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರಿಗೆ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
Vijaya Karnataka Web yuvraj-singh-09


ಯುವಿ ಅದ್ಭುತ ಕೆರಿಯರ್ ಹೊಂದಿದ್ದರು ಎಂಬುದನ್ನು ಉಲ್ಲೇಖಿಸಿರುವ ಸಚಿನ್, ಪ್ರತಿ ಬಾರಿಯೂ ತಂಡ ಬಯಸಿದಾಗ ನೈಜ ಚಾಂಪಿಯನ್ ಆಗಿ ಹೊರಹೊಮ್ಮಿರುವುದಾಗಿ ತಿಳಿಸಿದರು.

2007ರ ಚೊಚ್ಚಲ ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ಗೆಲುವುಗಳಲ್ಲಿ ಯುವಿ ನೈಜ ಹೀರೊ ಎನಿಸಿಕೊಂಡಿದ್ದರು. ಇದನ್ನೇ ಸಚಿನ್ ಬೊಟ್ಟು ಮಾಡಿದರು.

ಮೈದಾನ ಹಾಗೂ ಜೀವನದಲ್ಲಿ ಹಲವು ಏರಿಳಿತಗಳ ಮಧ್ಯೆಯೂ ನೀವು ಮಾಡಿರುವ ಹೋರಾಟವು ಅತ್ಯದ್ಭುತವಾಗಿದೆ ಎಂದು ಹೇಳಿರುವ ಸಚಿನ್ ತೆಂಡೂಲ್ಕರ್ ಯುವಿ ಎರಡನೇ ಇನ್ನಿಂಗ್ಸ್‌ಗೆ ಶುಭಾಶಯಗಳನ್ನು ಕೋರಿದರು.

ನಿಮ್ಮ ಮಾಹಿತಿಗಾಗಿ, 2011ರಲ್ಲಿ ಸಚಿನ್ ತೆಂಡೂಲ್ಕರ್‌ಗಾಗಿ ವಿಶ್ವಕಪ್ ಗೆಲ್ಲಲಿದ್ದೇವೆ ಎಂದು ಯುವಿ ಹೇಳಿದ್ದರು. ಬಳಿಕ ಕೊಟ್ಟ ಸಚಿನ್‌ಗಾಗಿ ವಿಶ್ವಕಪ್ ಗೆದ್ದಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌