ಆ್ಯಪ್ನಗರ

ಈ ಬಾರಿ ಜವಾಬ್ದಾರಿ ವಹಿಸುವ ಅವಕಾಶ ನನ್ನದಾಗಿತ್ತು: ಕೊಹ್ಲಿ

ತಂಡ ಬಯಸಿದಾಗ ಶತಕ ಬಾರಿಸಲು ಸಾಧ್ಯವಾಗಿರುವುದು ಅತೀವ ಸಂತಸ ತಂದಿದೆ ಎಂದು ವೆಸ್ಟ್‌ಇಂಡೀಸ್ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 12 Aug 2019, 10:32 am
ಪೊರ್ಟ್ ಆಫ್ ಸ್ಪೇನ್: ನಾಯಕ ವಿರಾಟ್ ಕೊಹ್ಲಿ ಬಾರಿಸಿದ 42ನೇ ಶತಕದ ನೆರವಿನಿಂದ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 59 ರನ್‌ಗಳ ಅಂತರದ ಅರ್ಹ ಗೆಲುವನ್ನು ದಾಖಲಿಸಿದೆ.
Vijaya Karnataka Web virat-kohli-century-05


ಇದರೊಂದಿಗೆ ಅರ್ಹವಾಗಿಯೇ ಕ್ಯಾಪ್ಟನ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗಿದ್ದರು. ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ಈ ಬಾರಿ ಜವಾಬ್ದಾರಿ ವಹಿಸುವ ಅವಕಾಶ ನನ್ನದಾಗಿತ್ತು ಎಂದಿದ್ದಾರೆ.

ಶಿಖರ್ ಹಾಗೂ ರೋಹಿತ್ ದೊಡ್ಡ ಮೊತ್ತ ಗಳಿಸಲಿಲ್ಲ. ಯಾವತ್ತೂ ಅಗ್ರ ಮೂವರು ಆಟಗಾರರಲ್ಲಿ ಓರ್ವ ದೊಡ್ಡ ಮೊತ್ತ ಗಳಿಸಬೇಕು. ಓರ್ವ ಹಿರಿಯ ಆಟಗಾರ ಮುಂದೆ ಬರಬೇಕಿತ್ತು. ಇಂದು ಜವಾಬ್ದಾರಿ ವಹಿಸುವ ಅವಕಾಶ ನನಗೆ ದೊರಕಿತ್ತು ಎಂದು ಹೇಳಿದರು.

270ಕ್ಕಿಂತಲೂ ಹೆಚ್ಚು ರನ್ ಗಳಿಸಿದರೆ ಸವಾಲಾಗಿರಲಿದೆ ಎಂಬುದನ್ನು ತಿಳಿದುಕೊಂಡಿದ್ದೆ. ತಂಡ ಬಯಸಿದಾಗ ಶತಕ ಬಾರಿಸಲು ಸಾಧ್ಯವಾಗಿರುವುದು ಅತೀವ ಸಂತಸ ತಂದಿದೆ ಎಂದಿದ್ದಾರೆ.

ಟಾಸ್ ಗೆದ್ದಿರುವುದು ಉತ್ತಮವಾಗಿತ್ತು. ನಾವು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ದ್ವಿತಿಯಾರ್ಧದಲ್ಲಿ ವಿಂಡೀಸ್ ಬ್ಯಾಟಿಂಗ್ ನೋಡಿದರೆ ಈ ಪಿಚ್‌ನಲ್ಲಿ ಕೊನೆಗೆ ಬ್ಯಾಟಿಂಗ್ ಮಾಡುವುದ ಕಷ್ಟಕರ ಎಂಬುದು ತಿಳಿದು ಬರುತ್ತದೆ. ನನಗನಿಸುತ್ತದೆ ಮಳೆಯು ಅವರಿಗೆ ಅಲ್ಪ ನೆರವಾಯಿತು. ಇಳ್ಲವಾದ್ದಲ್ಲಿ ಮತ್ತಷ್ಟು ಕಠಿಣವೆನಿಸುತ್ತಿತ್ತು ಎಂದರು.

ವಿಂಡೀಸ್ ತಂಡದಲ್ಲಿ ಹೆಚ್ಚು ಎಡಗೈ ಬ್ಯಾಟ್ಸ್‌ಮನ್‌ಗಳಿದ್ದು, ಎಡಗೈ ದಾಂಡಿಗರ ವಿರುದ್ಧ ಕುಲ್‌ದೀಪ್ ಯಾದವ್ ಹೆಚ್ಚು ಪರಿಣಾಮಕಾರಿ ಎನಿಸಿಕೊಳ್ಳುತ್ತಿರುವುದರಿಂದ ಯುಜ್ವೇಂದ್ರ ಚಹಲ್ ಬದಲು ಚೈನಾಮನ್ ಬೌಲರ್ ಅನ್ನು ಆರಿಸಲಾಯಿತು ಎಂಬುದನ್ನು ವಿರಾಟ್ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌