ಆ್ಯಪ್ನಗರ

ವಿಶ್ವಕಪ್ ಸೋಲಿನ ಕರಾಳ ನೆನಪುಗಳನ್ನು ಬಿಚ್ಚಿಟ್ಟ ಕೊಹ್ಲಿ

ಏಕದಿನ ವಿಶ್ವಕಪ್ ಸೋಲಿನ ಆರಂಭದ ಕೆಲವು ದಿನಗಳನ್ನು ಅರಗಿಸಿಕೊಳ್ಳುವುದೇ ಕಠಿಣವೆನಿಸಿತ್ತು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ವಿಂಡೀಸ್ ಸರಣಿಯತ್ತ ಮುಖ ಮಾಡಿದೆ.

Vijaya Karnataka Web 3 Aug 2019, 6:06 pm
ಫ್ಲೋರಿಡಾ: ಐಸಿಸಿ 2019 ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಆಘಾತ ಎದುರಿಸಿದ ಭಾರತ ತಂಡದ ಟ್ರೋಫಿ ಕನಸು ಭಗ್ನಗೊಂಡಿತ್ತು.
Vijaya Karnataka Web virat-kohli-12


ಈ ಸೋಲನ್ನು ಕೋಟ್ಯಂತರ ಅಭಿಮಾನಿಗಳ ಜತೆಗೆ ಆಟಗಾರರಿಗೂ ಅರಗಿಸಿಕೊಳ್ಳುವುದು ಕಠಿಣವೆನಿಸಿತ್ತು. ಅಲ್ಲದೆ ವಿಶ್ವಕಪ್ ಸೋಲಿನ ಬಳಿಕದ ಕರಾಳ ನೆನಪುಗಳನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್‌ನಿಂದ ಹೊರನಡೆದ ಬಳಿಕ ಕೆಲವು ದಿನಗಳನ್ನು ಕಳೆಯುವುದು ಅತ್ಯಂತ ಕಠಿಣವೆನಿಸಿತ್ತು ಎಂದು ಬೇಸರು ತೋಡಿಕೊಂಡಿದ್ದಾರೆ.

ವಿಶ್ವಕಪ್ ಮುಗಿಯುವ ವರೆಗೂ ಬೆಳಗ್ಗೆ ಎದ್ದ ತಕ್ಷಣ ಅತ್ಯಂತ ಕೆಟ್ಟ ಅನುಭವ ಎದುರಾಗಿತ್ತು ಎಂದು ಸೇರಿಸಿದರು.

ಆದರೆ ಓರ್ವ ವೃತ್ತಿ ಪರ ಕ್ರಿಕೆಟಿಗನಾಗಿ ಇಲ್ಲಿಂದ ಎಚ್ಚೆತ್ತುಕೊಂಡು ಮುಂದಿನ ಸರಣಿಯತ್ತ ಗಮನ ಕೇಂದ್ರಿಕರಿಸಬೇಕಿದೆ. ಪ್ರಸ್ತುತ ತಂಡವನ್ನು ಮತ್ತೆ ಕಟ್ಟುವ ನಂಬಿಕೆಯಲ್ಲಿದ್ದೇವೆ ಎಂದು ನುಡಿದರು.

ಎಲ್ಲ ಆಟಗಾರರು ಮೈದಾನಕ್ಕಿಳಿದು ತಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಕಾತರದಲ್ಲಿದ್ದಾರೆ. ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಶ್ರೇಷ್ಠ ಸಂಯೋಜನೆಯ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌