ಆ್ಯಪ್ನಗರ

ಭಾರತ-ವಿಂಡೀಸ್ ದ್ವಿತೀಯ ಏಕದಿನಕ್ಕೂ ಮಳೆ ಕಾಡಬಹುದೇ?

ಭಾರತ ಹಾಗೂ ಆತಿಥೇಯ ವೆಸ್ಟ್‌ಇಂಡೀಸ್ ನಡುವಣ ದ್ವಿತೀಯ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಈ ಮೂಲಕ ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂಬುದು ತಿಳಿದು ಬಂದಿದೆ.

Vijaya Karnataka Web 10 Aug 2019, 4:31 pm
ಟ್ರಿನಿಡಾಡ್: ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್‌ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇದರಿಂದಾಗಿ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ಸಿಲುಕಿದೆ.
Vijaya Karnataka Web rain


ಈ ಮೊದಲು ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಜಯ ದಾಖಲಿಸಿತ್ತು. ಆದರೆ ಗಯಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಡಿತ್ತು.

34 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ವಿಂಡೀಸ್ 13 ಓವರ್‌ಗಳ ಬ್ಯಾಟಿಂಗ್ ಮಾತ್ರ ನಡೆಸಿತ್ತು. ಅಂತಿಮವಾಗಿ ವರುಣನ ಅವಕೃಪೆಯಿಂದಾಗಿ ಪಂದ್ಯವನ್ನು ಕೈಬಿಡಲಾಗಿತ್ತು.

ಇದೀಗ ದ್ವಿತೀಯ ಏಕದಿನ ಪಂದ್ಯವು ಟ್ರಿನಿಡಾಡ್ ಹಾಗೂ ಟೊಬಗೊದಲ್ಲಿ ಭಾನುವಾರಂದು ನಡೆಯಲಿದೆ. ಆದರೆ ಶುಭದಾಯಕ ಸಂದೇಶವೆಂಬಂತೆ ಭಾರತ ಹಾಗೂ ವಿಂಡೀಸ್‌ನ ದ್ವಿತೀಯ ಪಂದ್ಯ ನಡೆಯಲಿದ್ದು, ಮಳೆ ಕಾಡುವ ಸಂಭವ ಕಡಿಮೆಯಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಬೆಳಗ್ಗಿನ ಹೊತ್ತಿನಲ್ಲಿ ಶೇಕಡಾ 20ರಷ್ಟು ಹಾಗೂ ಅಪರಾಹ್ನದ ಮೇಲೆ ಶೇ.10ರಷ್ಟು ಮಾತ್ರ ಮಳೆ ಸಾಧ್ಯತೆಯಿದೆ. ಹಾಗಾಗಿ ಬಹುತೇಕ ಸಂಪೂರ್ಣ ಪಂದ್ಯ ನಡೆಯುವುದು ಖಚಿತವೆನಿಸಿದೆ.

ತೃತೀಯ ಏಕದಿನ ಪಂದ್ಯವು ಇದೇ ಮೈದಾನಲ್ಲಿ ಬುಧವಾರದಂದು ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌