ಆ್ಯಪ್ನಗರ

ಯೌವನ-ಅನುಭವದ ನಡುವಣ ಕದನ: ಎಬಿ ಡಿ

ಬಿಸಿರಕ್ತದ ತರುಣರ ದಂಡು ಎನಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಹಿಮದಷ್ಟೇ ತಣ್ಣಗಿನ ಸ್ವಭಾವದ ಹಿರಿಯ ಆಟಗಾರರ ಗಡಣ ಎನಿಸಿಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಈ ಕದನ ಯೌವನ ಹಾಗೂ ಅನುಭವದ ನಡುವಣ ಅತ್ಯುತ್ಕೃಷ್ಟ ಕದನವಾಗಲಿದೆ.

Agencies 10 May 2019, 3:48 pm
ಮುಂಬಯಿ: ಶುಕ್ರವಾರದ ಪಂದ್ಯ ಒಂದು ರೀತಿ ಯುವಕರು ಮತ್ತು ಅನುಭವಸ್ಥರ ನಡುವಣ ಕದನವಿದ್ದಂತೆ. ಡೆಲ್ಲಿ ಬಾಯ್ಸ್ ಯುವಕರಾಗಿದ್ದರೆ, ಚೆನ್ನೈ ಅನುಭವಸ್ಥರನ್ನೊಳಗೊಂಡ ತಂಡ ಎಂದು ಆರ್‌ಸಿಬಿ ತಂಡದ ಎಬಿ ಡಿ ವಿಲಿಯರ್ಸ್‌ ಹೇಳಿದ್ದಾರೆ.
Vijaya Karnataka Web cskdc


ಬಿಸಿರಕ್ತದ ತರುಣರ ದಂಡು ಎನಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಹಿಮದಷ್ಟೇ ತಣ್ಣಗಿನ ಸ್ವಭಾವದ ಹಿರಿಯ ಆಟಗಾರರ ಗಡಣ ಎನಿಸಿಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಈ ಕದನ ಯೌವನ ಹಾಗೂ ಅನುಭವದ ನಡುವಣ ಅತ್ಯುತ್ಕೃಷ್ಟ ಕದನವಾಗಲಿದೆ.

ಡಿಸಿ ಅತ್ಯುತ್ತಮ ಲಹರಿಯಲ್ಲಿದೆ. 24 ಸದಸ್ಯರ ಈ ಬಳಗದಲ್ಲಿ ಹೆಚ್ಚೂಕಡಿಮೆ 14 ಆಟಗಾರರು 26 ವರ್ಷದೊಳಗಿನವರು. ಇವರಿಗೆ ಪಾಂಟಿಂಗ್‌ ಮತ್ತು ಗಂಗೂಲಿಯಂಥ ಗುರುಗಳಿಂದ ತರಬೇತಿ ಸಿಗುತ್ತಿದೆ. ಪೃಥ್ವಿ ಶಾ, ರಿಷಭ್‌ ಪಂತ್‌ರಂಥ ಜವ್ವನಿಗ ಬ್ಯಾಟ್ಸ್‌ಮನ್‌ಗಳ ಮೇಲೆ ಹೂಡಿದ ಬಂಡವಾಳ ಇದೀಗ ಫಲ ನೀಡುತ್ತಿದೆ. ಅಂತೆಯೇ ಬೌಲಿಂಗ್‌ ಪಡೆಯೂ ಸಮತೋಲನವಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದೆ.

ಆದರೆ... ಈ ಯುವ ಪಡೆಯ 'ಸುಂಟರ ಗಾಳಿಗೆ' ಇದೀಗ ಅಡ್ಡಲಾಗಿ ನಿಂತಿರುವುದು ಸಾಧಕರ ದಂಡು. ಇವರೆಲ್ಲ ಹೆಚ್ಚೂಕಡಿಮೆ 30ರ ಆಸುಪಾಸಿನವರು. ಇವರು ಸಾಧಿಸಿ ತೋರಿಸುವುದಕ್ಕೆ ಬಾಕಿಯೇನೂ ಉಳಿದಿಲ್ಲ. ಧೋನಿ, ರೈನಾ, ಶೇನ್‌ ವ್ಯಾಟ್ಸನ್‌ ಮುಂತಾದ ಬ್ಯಾಟಿಂಗ್‌ ದಿಗ್ಗಜರು ಹಾಗೂ ಇಮ್ರಾನ್‌ ತಾಹಿರ್‌, ಹರ್ಭಜನ್‌ರಂಥ ಸ್ಪಿನ್‌ ಗಾರುಡಿಗರನ್ನೊಳಗೊಂಡ ಚೆನ್ನೈ ತಂಡ ಅತ್ಯಂತ ಬಲಿಷ್ಠ ತಂಡವೆನಿಸಿಕೊಂಡಿದ್ದು ಡೆಲ್ಲಿ ತಂಡಕ್ಕೆ ಕಠಿಣ ಸವಾಲಾಗಿ ಪರಿಣಿಸಬಹುದು ಎಂದು ಎಬಿ ಡಿ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌