ಆ್ಯಪ್ನಗರ

ಕ್ಯಾಲ್ಕುಲೇಟರ್ ಧೋನಿಯ ಕ್ಯಾಲ್ಕುಲೇಟಡ್ ರಿಸ್ಕ್

ತಮ್ಮ ಕ್ರಿಕೆಟ್ ಜೀವನದಲ್ಲೇ ಅತ್ಯುತ್ತಮ ಫಾರ್ಮ್ ಕಾಪಾಡಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ಇದೇ ಫಾರ್ಮ್ ಕಾಪಾಡಿಕೊಂಡರೆ ಭಾರತಕ್ಕೆ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಾಗಲಿದೆ.

Vijaya Karnataka Web 23 Apr 2019, 6:57 pm
ಚೆನ್ನೈ: ತಮ್ಮ ಕ್ರಿಕೆಟ್ ಜೀವನದಲ್ಲೇ ಉತ್ತುಂಗದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್‌ಗೂ ಮೊದಲು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Vijaya Karnataka Web ms-dhoni-07


ಮುಂಬರುವ ಏಕದಿನ ವಿಶ್ವಕಪ್ 37ರ ಹರೆಯದ ಧೋನಿ ಪಾಲಿಗೆ ಕೊನೆಯ ವಿಶ್ವಕಪ್ ಎಂದೇ ಪರಿಗಣಿಸಲಾಗುತ್ತಿದೆ. ತದಾ ಬಳಿಕ ಮುಂದಿನ ವರ್ಷ ಐಪಿಎಲ್‌ನಲ್ಲೂ ಮುಂದುವರಿಯಲಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.

ಕ್ಯಾಲ್ಕುಲೇಟಡ್ ರಿಸ್ಕ್ ತೆಗೆದುಕೊಳ್ಳುವ ಧೋನಿ ಹಿಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಕಳೆದ ವರ್ಷದ ಐಪಿಎಲ್‌ಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸರಾಸರಿ ಕಾಪಾಡಿಕೊಂಡಿದ್ದಾರೆ.

ಕಳೆದ ಸಾಲಿನಲ್ಲಿ ಆಡಿರುವ 16 ಪಂದ್ಯಗಳಲ್ಲಿ 75.83ರ ಸರಾಸರಿಯಲ್ಲಿ 455 ರನ್ ಗಳಿಸಿರುವ ಧೋನಿ ಪ್ರಸಕ್ತ ಸಾಲಿನಲ್ಲಿ ಈಗಾಗಲೇ 104.66ರ ಸರಾಸರಿಯಲ್ಲಿ 314 ರನ್ ಪೇರಿಸಿದ್ದಾರೆ.

ಭಾನುವಾರ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ 84 ರನ್ ಚಚ್ಚಿದ್ದರು. ಈ ಪೈಕಿ ಕೊನೆಯ ಓವರ್‌ನಲ್ಲಿ 26 ರನ್ ಬೇಕಾಗಿದ್ದರೂ ಎಂದೆಗುಂದದ ಧೋನಿ ಗೆಲುವಿನ ಸನಿಹ ತಲುಪಲು ಯಶಸ್ವಿಯಾಗಿದ್ದರು. ಆದರೆ ಕೊನೆಯ ಎಸೆತದಲ್ಲಿ ಒಂಟಿ ರನ್ ಕಬಳಿಸುವಲ್ಲಿ ವಿಫಲವಾಗಿದ್ದರಿಂದ ನಿರಾಸೆ ಅನುಭವಿಸಬೇಕಾಯಿತು.

ಈ ನಡುವೆ ಸಿಂಗಲ್ಸ್ ಓಡಲು ನಿರಾಕರಿಸಿವುದು ಟೀಕೆಗೆ ಕಾರಣವಾಯಿತು. ಆದರೂ ಧೋನಿ ತಮ್ಮ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಟ್ಟುಕೊಂಡಿದ್ದರು. ಈ ಬಗ್ಗೆ ಕೇಳಿದಾಗ ''ಅದಕ್ಕೂ ಮೊದಲು ನಾನು ಸಾಕಷ್ಟು ಎಸೆತಗಳನ್ನು ಆಡಿದ್ದೆ. ತುಂಬ ರನ್‌ ಗಳಿಸಬೇಕಿದ್ದರಿಂದ ನಾನೇ ರಿಸ್ಕ್‌ ತೆಗೆದುಕೊಳ್ಳಲು ತೀರ್ಮಾನಿಸಿದೆ. ಹತ್ತೋ ಹನ್ನೆರಡೋ ಎಸೆತಗಳಲ್ಲಿ ಮೂವತ್ತಾರೊ, ನಲವತ್ತೋ ಅಥವಾ ಇನ್ನೂ ಒಂದಷ್ಟು ಹೆಚ್ಚು ರನ್‌ ಬೇಕಿವೆ ಎಂಬುದು ನನಗೆ ಗೊತ್ತಿತ್ತು. ಅದರರ್ಥ ಎಷ್ಟು ಸಾಧ್ಯವೋ ಅಷ್ಟು ಬೌಂಡರಿ ಅಥವಾ ಸಿಕ್ಸರ್‌ ಗಳಿಸುವ ಅನಿವಾರ್ಯತೆ ಇತ್ತು. ಒಂದೋ ಎರಡೋ ರನ್‌ ಗಳಿಸುವುದಕ್ಕಿಂತ ಸಾಧ್ಯವಾದಷು ಬೌಂಡರಿ ಗಳಿಸುವುದೇ ಸೂಕ್ತ ಎನಿಸಿದ್ದರಿಂದ ಹಾಗೆ ಮಾಡಿದೆ. ಕೊನೆಗೂ ಒಂದೆರಡು ಹೆಚ್ಚುವರಿ ಬೌಂಡರಿ ಬಾರಿಸಿದೆನಲ್ಲವೇ?,'' ಎಂದು ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಧೋನಿ ಫಾರ್ಮ್ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ನೆರವಾಗುವ ಭರವಸೆಯಿದೆ. ಧೋನಿ ಇದೇ ಫಾರ್ಮ್ ಮುಂದುವರಿಸಿದರೆ ಭಾರತದ ವಿಶ್ವಕಪ್ ಗೆಲ್ಲುವ ಸಾಧ್ಯತೆಯು ಹೆಚ್ಚಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌