ಆ್ಯಪ್ನಗರ

ಭಾರತದಲ್ಲಿನ ಐಪಿಎಲ್‌ ಬೆಟ್ಟಿಂಗ್ ಸಂಬಂಧ ಪಾಕಿಸ್ತಾನದಿಂದ ಮಾಹಿತಿ: ಸಿಬಿಐ!

ಪಾಕಿಸ್ತಾನ ನೀಡಿದ ಮಾಹಿತಿ ಆಧರಿಸಿ 2019ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯಗಳಲ್ಲಿ ಬೆಟ್ಟಿಂಗ್‌ ನಡೆಸಿದ್ದ ಜಾಲವೊಂದನ್ನು ಬೇಧಿಸಿರುವ ಸಿಬಿಐ, ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದೆ ಹಾಗೂ ಹಲವರನ್ನು ಬಂಧಿಸಿದೆ. ತಮ್ಮ ಎಫ್‌ಐಆರ್‌ ಪ್ರತಿಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿದ ಸಿಬಿಐ, ಈ ಪ್ರಕರಣ ಸಂಬಂಧ ದಿಲ್ಲಿ, ರಾಜಸ್ಥಾನ್‌ ಹಾಗೂ ಹೈದರಾಬಾದ್‌ ನಗರಗಳಲ್ಲಿ ಇನ್ನಷ್ಟು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ.

Authored byರಮೇಶ ಕೋಟೆ | Vijaya Karnataka Web 14 May 2022, 11:04 pm

ಹೈಲೈಟ್ಸ್‌:

  • 2019ರ ಐಪಿಎಲ್‌ ಬೆಟ್ಟಿಂಗ್‌ ಸಂಬಂಧ ಹಲವರನ್ನು ಬಂಧಿಸಿರುವ ಸಿಬಿಐ.
  • ದಿಲ್ಲಿ, ರಾಜಸ್ಥಾನ್‌ ಹಾಗೂ ಹೈದರಾಬಾದ್‌ನಲ್ಲಿ ಸಿಬಿಐ ಶೋಧ ಕಾರ್ಯ ನಡೆಸುತ್ತಿದೆ.
  • ಪಾಕಿಸ್ತಾನ ನೀಡಿದ ಮಾಹಿತಿ ಅಧರಿಸಿ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CBI
ಸಿಬಿಐ (ಚಿತ್ರ: ಟಿಒಐ)
ಹೊಸದಿಲ್ಲಿ: ಕಳೆದ 2019ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಬೆಟ್ಟಿಂಗ್‌ ಜಾಲವೊಂದನ್ನು ಬೇದಿಸಿರುವ ಕೇಂದ್ರೀಯ ತನಿಖಾ ದಳ(ಸಿಬಿಐ) ಎರಡು ಎಫ್‌ಐಆರ್‌ ದಾಖಲಿಸಿದೆ ಹಾಗೂ ದಿಲ್ಲಿ, ರಾಜಸ್ಥಾನ್‌ ಮತ್ತು ಹೈದರಾಬಾದ್‌ ನಗರಗಳಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದೆ.
"ಪಾಕಿಸ್ತಾನ ನೀಡಿರುವ ಮಾಹಿತಿ ಆಧರಿಸಿ ಐಪಿಎಲ್‌ ಟೂರ್ನಿಯ ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳಿಗೆ ಬಲೆ ಬೀಸಿದ್ದು, ಇದಕ್ಕಾಗಿ ದಿಲ್ಲಿ, ರಾಜಸ್ಥಾನ್‌ ಹಾಗೂ ಹೈದರಾಬಾದ್‌ ಕಡೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ," ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಾಹಿತಿ ನೀಡಿದೆ.

"ಕಳೆದ 2010ರಿಂದಲೂ ತಂಡವೊಂದು ಐಪಿಎಲ್‌ ಪಂದ್ಯಗಳಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದು, ಇದಕ್ಕಾಗಿ ಸಾರ್ವಜನಿಕರನ್ನು ಸೆಳೆಯುತ್ತಿದೆ. ಆ ಮೂಲಕ ಸಾರ್ವಜನಿಕರ ಬಳಿ ಸಾಕಷ್ಟು ಹಣವನ್ನು ವಂಚಿಸಿದೆ ಎಂದು ಪಾಕಿಸ್ತಾನ ಮಾಹಿತಿ ನೀಡಿದೆ," ಎಂದು ಸಿಬಿಐ ತನ್ನ ಪ್ರತಿಯಲ್ಲಿ ವಿವರಿಸಿದೆ.

'ಐಪಿಎಲ್‌ಗೆ ವಿದಾಯ ಹೇಳಿ ಯೂಟರ್ನ್‌ ಹೊಡೆದ ಅಂಬಾಟಿ ರಾಯುಡು': ಸಿಎಸ್‌ಕೆ ಸಿಇಓ ಸ್ಪಷ್ಟನೆ!

ಆರೋಪಿಗಳು ಬೆಟ್ಟಿಂಗ್‌ ವ್ಯವಹಾರದಲ್ಲಿ ಹಣವನ್ನು ಪಡೆಯಲು ಹಾಗೂ ವರ್ಗಾಯಿಸಲು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ನಕಲಿ ದಾಖಲೆಗಳೊಂದಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಫೆಡರಲ್ ತನಿಖಾ ಸಂಸ್ಥೆ ಆರೋಪಿಸಿದೆ. ಈ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ವಿಭಿನ್ನ ಜನ್ಮ ದಿನಾಂಕಗಳು ಸೇರಿದಂತೆ ನಕಲಿ ವಿವರಗಳು ಕಂಡು ಬಂದಿದೆ ಎಂದು ಆರೋಪಿಸಿದೆ.

"ಬೆಟ್ಟಿಂಗ್‌ ಚುಟುವಟಿಕೆಗಳು 2010ರಿಂದಲೂ ನಡೆಯುತ್ತಿದೆ. ಭಾರತದಲ್ಲಿ ಸಾರ್ವಜನಿಕರಿಂದ ಪಡೆಯುವ ಹಣದ ಒಂದು ಭಾಗವನ್ನು ಹವಾಲ ವಹಿವಾಟುಗಳ ಮೂಲಕ ವಿದೇಶದಲ್ಲಿ ನೆಲೆಸಿರುವ ಸಹವರ್ತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ," ಎಂದು ಎಫ್‌ಐಆರ್‌ ಪ್ರತಿಯಲ್ಲಿ ಸಿಬಿಐ ತಿಳಿಸಿದೆ.

ನಿಯಮಿತವಾಗಿ ಚಾನ್ಸ್‌ ಕೊಟ್ಟಿರಲಿಲ್ಲ': ಆರ್‌ಸಿಬಿ, ಆರ್‌ಆರ್‌ ವಿರುದ್ಧ ತಬ್ರೈಝ್‌ ಶಾಂಸಿ ಬೇಸರ!

ಆರೋಪಿಗಳಾದ ದಿಲ್ಲಿ ನಿವಾಸಿ ದಿಲೀಪ್ ಕುಮಾರ್ ಮತ್ತು ಹೈದರಾಬಾದ್ ಮೂಲದ ಗುರ್ರಂ ಸತೀಶ್ ಅವರು ಬೆಟ್ಟಿಂಗ್‌ ಮೂಲಕ ಕಾನೂನು ಬಾಹಿರ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಫೆಡರಲ್‌ ತನಿಖಾ ಸಂಸ್ಥೆ ಪತ್ತೆ ಮಾಡಿದೆ. ಈ ಇಬ್ಬರು ತಮ್ಮ ಸಹಚರರೊಂದಿಗೆ ಪಾಕಿಸ್ತಾನ ಮೂಲದ ಶಂಕಿತ ಆರೋಪಿ ವಕಾಸ್ ಮಲಿಕ್ ಜೊತೆ ಪಾಕಿಸ್ತಾನಿ ಫೋನ್ ನಂಬರ್ ಮೂಲಕ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.

ಇದೇ ಮಾದರಿಯ ಮತ್ತೊಂದು ಪ್ರಕರಣ ಸಂಬಂಧ ರಾಜಸ್ಥಾನ್‌ದ ನಿವಾಸಿಗಳಾದ ಸಜ್ಜನ್‌ ಸಿಂಗ್‌, ಪ್ರಭು ಲಾಲ್‌ ಮೀನಾ, ರಾಮ್ ಅವತಾರ್‌, ಅಮಿತ್‌ ಕುಮಾರ್‌ ಶರ್ಮಾ ಸೇರಿದಂತೆ ಅಪರಿಚಿತ ಬ್ಯಾಂಕ್ ಅಧಿಕಾರಿಗಳು ಮತ್ತು ಇತರ ಅಪರಿಚಿತ ಖಾಸಗಿ ವ್ಯಕ್ತಿಗಳನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿ ಎಫ್‌ಐಆರ್‌ ದಾಖಲಿಸಿದೆ ಎಂದು ತಿಳಿದುಬಂದಿದೆ.

ಟಿ20 ವಿಶ್ವಕಪ್‌: ಭಾರತ ತಂಡದಲ್ಲಿ ದಿನೇಶ್‌ ಕಾರ್ತಿಕ್‌ಗೆ ಚಾನ್ಸ್‌ ನೀಡಿ ಎಂದ ಸುನೀಲ್ ಗವಾಸ್ಕರ್‌!
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌