Please enable javascript.IPL 2023: ಫೈನಲ್ ಪಂದ್ಯಕ್ಕೆ ನಿಷೇಧದ ಭೀತಿಯಲ್ಲಿ ಎಂಎಸ್‌ ಧೋನಿ! ಕಾರಣ ಏನು ಗೊತ್ತೆ? - chennai super kings captain ms dhoni may get banned from playing ipl 2023 final due to this reason: report - Vijay Karnataka

IPL 2023: ಫೈನಲ್ ಪಂದ್ಯಕ್ಕೆ ನಿಷೇಧದ ಭೀತಿಯಲ್ಲಿ ಎಂಎಸ್‌ ಧೋನಿ! ಕಾರಣ ಏನು ಗೊತ್ತೆ?

Authored byರಮೇಶ ಕೋಟೆ | Vijaya Karnataka Web 25 May 2023, 2:13 pm
Subscribe

MS Dhoni May Get Banned From Final: 2023ರ ಇಂಡಿಯನ್‌ ಪ್ರಿಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಎಂಎಸ್‌ ಧೋನಿ ಸೇವೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಟೂರ್ನಿಯಲ್ಲಿ ಸ್ಲೋ ಓವರ್‌ ರೇಟ್‌ ಹಾಗೂ ಮೊದಲನೇ ಕ್ವಾಲಿಫೈಯರ್‌ ಪಂದ್ಯದ ವೇಳೆ ಅಂಪೈರ್‌ಗಳ ಜೊತೆ ವಾಗ್ವಾದಕ್ಕಿಳಿದು ಸಮಯ ವ್ಯರ್ಥ ಮಾಡಿದ ಕಾರಣ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯಕ್ಕೆ ಎಂಎಸ್‌ ಧೋನಿ ನಿಷೇಧ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹೈಲೈಟ್ಸ್‌:

  • ಗುಜರಾತ್‌ ಟೈಟನ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್.
  • 2023ರ ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಎಂಎಸ್‌ ಧೋನಿಗೆ ನಿಷೇಧದ ಭೀತಿ ಎದುರಾಗಿದೆ.
  • ಸ್ಲೋಓವರ್‌ ರೇಟಿಂಗ್‌ನಿಂದಾಗಿ ಎಂಎಸ್‌ ಧೋನಿಗೆ ಫೈನಲ್‌ ಪಂದ್ಯದ ನಿಮಿತ್ತ ಸಂಕಷ್ಟ ಎದುರಾಗಿದೆ.
MS Dhoni
ಎಂಎಸ್‌ ಧೋನಿ (ಚಿತ್ರ: ಐಪಿಎಲ್‌)
ಚೆನ್ನೈ: ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಫೈನಲ್‌ ಪಂದ್ಯದ ನಿಮಿತ್ತ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಎಂಎಸ್‌ ಧೋನಿ ನಿಷೇಧದ ಭೀತಿಗೆ ಒಳಗಾಗಿದ್ದಾರೆ. ಗುಜರಾತ್‌ ಟೈಟನ್ಸ್‌ ವಿರುದ್ದ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡಿದ ಕಾರಣ ಎಂಎಸ್‌ ಧೋನಿಗೆ ಈ ಸಂಕಷ್ಟ ಎದುರಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಮೊದಲನೇ ಕ್ವಾಲಿಫೈಯರ್ ಪಂದ್ಯ 9 ನಿಮಿಷ ತಡವಾಗಿ ಕೊನೆಗೊಂಡಿತ್ತು. ತಮ್ಮ ಎರಡನೇ ಓವರ್ ಬೌಲ್ ಮಾಡಲು ಮತೀಶ ಪತಿರಣ ಅವರಿಗೆ ಅಂಪೈರ್‌ಗಳು ಅವಕಾಶ ನೀಡದೇ ಇದ್ದಾಗ ಎಂಎಸ್‌ ಧೋನಿ ವಾಗ್ವಾದಕ್ಕಿಳಿದಿದ್ದರು. ಇದರಿಂದಾಗಿ ಪಂದ್ಯದಲ್ಲಿ ನಾಲ್ಕು ನಿಮಿಷಗಳು ವ್ಯರ್ಥವಾಗಿತ್ತು.

ಮೊದಲ ಓವರ್ ಬೌಲ್ ಮಾಡಿದ ನಂತರ ಪತಿರಣ ಅವರು 9 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡಿದ್ದರು. ಅವರು ಹಿಂತಿರುಗಿದಾಗ ಮೈದಾನದಲ್ಲಿ ಹೆಚ್ಚಿನ ಸಮಯವನ್ನು ಕಳೆದಿರಲಿಲ್ಲ. ಹಾಗಾಗಿ ಅಂಪೈರ್‌ಗಳು ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ಎಂಎಸ್‌ ಧೋನಿ ನಾಲ್ಕು ನಿಮಿಷಗಳ ಕಾಲ ಚರ್ಚೆ ನಡೆಸಿದ ಬಳಿಕ ಮತೀಶ ಪತಿರಣ ಅವರಿಗೆ ಬೌಲ್‌ ಮಾಡಲು ಅವಕಾಶ ಲಭಿಸಿತು.
CSK vs GT: 'ಈಗ ಏಕೆ ತಲೆ ಕೆಡಿಸಿಕೊಳ್ಳಬೇಕು?'-ನಿವೃತ್ತಿ ಬಗ್ಗೆ ಎಂಎಸ್‌ ಧೋನಿ ಹೇಳಿದ್ದಿದು!
ಮತೀಶ ಪತಿರಣ ಬೌಲ್‌ ಮಾಡಿದ್ದರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಲಾಭವಾಗಿದ್ದು ನಿಜ. ಆದರೆ, ಈ ಟೂರ್ನಿಯಲ್ಲಿ ಈಗಾಗಲೇ ಎಂ.ಎಸ್‌ ಧೋನಿ ಸ್ಲೋ ಓವರ್‌ ರೇಟಿಂಗ್‌ನಿಂದ ದಂಡ ಕಟ್ಟಿದ್ದಾರೆ. ಇದೀಗ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮತ್ತೊಮ್ಮೆ ಇನಿಂಗ್ಸ್ ಮುಗಿಸಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದುಬಾರಿ ದಂಡವನ್ನು ಕಟ್ಟುತ್ತಾರಾ? ಅಥವಾ ಐಪಿಎಲ್ ನಿಮಿಯ ಉಲ್ಲಂಘಿಸಿದಕ್ಕಾಗಿ ಪಂದ್ಯ ನಿಷೇಧದ ಶಿಕ್ಷಗೆ ಒಳಗಾಗುತ್ತಾರಾ? ಕಾದು ನೋಡಬೇಕಾಗಿದೆ.

ಒಂದು ವೇಳೆ ಎಂಎಸ್‌ ಧೋನಿ ಮೇಲೆ ಒಂದು ಪಂದ್ಯ ನಿಷೇಧ ಹೇರಿದರೆ, ಮೇ 28 ರಂದು ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಿಂದ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಹೊರಗುಳಿಯಬೇಕಾಗುತ್ತದೆ. ಆದರೆ, ಪಂದ್ಯವನ್ನು ಅನಗತ್ಯವಾಗಿ ವಿಳಂಬ ಮಾಡಿದ ಧೋನಿ ವಿರುದ್ಧ ಅಂಪೈರ್‌ಗಳು ಕ್ರಮ ಕೈಗೊಳ್ಳುತ್ತಾರೆಯೇ? ಇಲ್ಲವೇ? ಎಂಬುದು ಸ್ಪಷ್ಟವಾಗಿಲ್ಲ.
CSK vs GT - ಸಿಎಸ್‌ಕೆ ವಿರುದ್ಧ ಮುಗ್ಗರಿಸಿದ ಟೈಟನ್ಸ್‌ಗೆ ಫೈನಲ್‌ ತಲುಪಲು ಮತ್ತೊಂದು ಅವಕಾಶ!
ಆದರೆ, ಎಂಎಸ್‌ ಧೋನಿ 2023ರ ಐಪಿಎಲ್‌ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಫೈನಲ್‌ ಪಂದ್ಯದಿಂದ ಹೊರಗಿಡಲು ಸಾಧ್ಯವಿಲ್ಲ. ಹಾಗಾಗಿ, ಐಪಿಎಲ್‌ ಅಧಿಕಾರಿಗಳು ಬ್ಯಾನ್‌ ಮಾಡುವ ಬದಲು ಸಿಎಸ್‌ಕೆ ನಾಯಕನಿಂದ ದಂಡ ವಸೂಲಿ ಮಾಡುವ ಸಾಧ್ಯತೆ ಇದೆ.
CSK vs GT: 'ಕೆಲ ತಪ್ಪುಗಳನ್ನು ಮಾಡಿದ್ದೇವೆ'-ಸೋಲಿಗೆ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎದುರಾಳಿ ಯಾವ ತಂಡ?


ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್‌ ಟೈಟನ್ಸ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿದೆ.
ರಮೇಶ ಕೋಟೆ
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ