ಆ್ಯಪ್ನಗರ

ಫೈನಲ್‌ನಲ್ಲಿ ಸೋತ ಚೆನ್ನೈ; ಇನ್ನೂ ನಿಲ್ಲದ ಅಭಿಮಾನಿಗಳ ರೋದನ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ವಿರುದ್ಧ ಫೈನಲ್‌ನಲ್ಲಿ ಸೋತ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಪುಟ್ಟ ಅಭಿಮಾನಿಯ ರೋದನವು ಎಂಥಹ ಕಲ್ಲು ಹೃದಯಿಗಳನ್ನು ಮನ ಕಲಕುವಂತೆ ಮಾಡಿದೆ.

Vijaya Karnataka Web 14 May 2019, 12:44 pm
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ 12ನೇ ಆವೃತ್ತಿಯ ಫೈನಲ್‌ನಲ್ಲಿ ಎದುರಾದ ಒಂದು ರನ್ನಿನ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗಿನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹಲವು ನಾಟಕೀಯ ಸನ್ನಿವೇಶಗಳನ್ನು ಕಂಡ ಫೈನಲ್ ಪಂದ್ಯದಲ್ಲಿ ಅಂತಿಮ ಬಾಲ್‌ನಲ್ಲಿ ಚೆನ್ನೈ ಗೆಲುವಿಗೆ ಒಂದು ರನ್ನಿನ ಅಗತ್ಯವಿತ್ತು. ಇನ್ನೇನು ಪಂದ್ಯ ಗೆದ್ದೇ ಬಿಡ್ತು ಅನ್ನುವಷ್ಟರಲ್ಲಿ ಲಸಿತ್ ಮಾಲಿಂಗ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ್ದರು.

ಇದರೊಂದಿಗೆ ಚೆನ್ನೈ ಕನಸು ನೂಚ್ಚುನೂರಾಗಿತ್ತು. ಈ ಸೋಲನ್ನು ಚೆನ್ನೈ ಅಭಿಮಾನಿಗಳಿಗಂತೂ ಅರಗಿಸಿಕೊಳ್ಳಲೇ ಆಗುತ್ತಿಲ್ಲ.

ಚಿಕ್ಕ ಮಕ್ಕಳು ಇದರಿಂದ ಹೊರತಾಗಿರಲಿಲ್ಲ. ಗಂಟೆಗಳೆ ಕಾಲ ಕಣ್ಣೀರಿಡುತ್ತಲೇ ಕಳೆದಿದ್ದಾರೆ. ಅತ್ತ ಮುಂಬೈ ಅಭಿಮಾನಿಗಳು ಗೆಲುವಿನ ಅಲೆಯಲ್ಲಿ ತೇಲಾಡುತ್ತಿದ್ದರು.

ಅದರಲ್ಲೂ ಪುಟ್ಟ ಮಗು ಕಣ್ಣೀರಿಡುವ ವೀಡಿಯೋ ಎಂಥಹ ಕಲ್ಲು ಹೃದಯಗಳನ್ನು ಮನ ಕಲುಕುವಂತೆ ಮಾಡಿದೆ.

ದಾಖಲೆ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ಮೂರು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಇನ್ನು ಮುಂಬೈ ವಿರುದ್ಧ ಫೈನಲ್‌ನಲ್ಲಿ ಮೂರು ಬಾರಿ ಮುಗ್ಗರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌