ಆ್ಯಪ್ನಗರ

ಚೆನ್ನೈ ರೆಡಿ ಆಗಿ, ಬರುತ್ತಿದೆ ಆರ್‌ಸಿಬಿ..!

ಇಂಡಿಯನ್ ಪ್ರೀಮಿಯರ್ ಲೀಗ್‌ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪಂದ್ಯವನ್ನು ಆಡುವ ಸಲುವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಚೆನ್ನೈಗೆ ಪ್ರಯಾಣವನ್ನು ಬೆಳೆಸಿದ್ದಾರೆ. ಮಾರ್ಚ್ 23 ಶನಿವಾರದಂದು ನಡೆಯಲಿರುವ ಮೊದಲ ಕದನದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.

Vijaya Karnataka Web 21 Mar 2019, 12:29 pm
ಬೆಂಗಳೂರು: ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪಾಲಿಗೆ ಕೇವಲ ಒಂದು ಪಂದ್ಯ ಮಾತ್ರವಲ್ಲ. ಅದಕ್ಕಿಂತಲೂ ಮಿಗಿಲಾಗಿದ್ದು!
Vijaya Karnataka Web ab-de-kohli


ಪ್ರಸಕ್ತ 2019ನೇ ಸಾಲಿನ ಐಪಿಎಲ್ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಸಿಎಸ್‌ಕೆ ಸವಾಲನ್ನು ಬೆಂಗಳೂರು ಎದುರಿಸುತ್ತಿದೆ. ಇದರಂತೆ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತಿದ್ದಾರೆ.

ಇತ್ತಂಡಗಳ ನಾಯಕರುಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಕದನಕ್ಕಿಂತಲೂ ಮಿಗಿಲಾಗಿ ಪ್ರತಿಷ್ಠೆಯ ಕದನವಾಗಿ ಇದನ್ನು ವಿಶ್ಲೇಷಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಸದರ್ನ್ ಡೆರ್ಬಿ ಎಂದೇ ಕರೆಯಲಾಗುತ್ತಿದೆ.

ಹೇಗೆ ಪಾಕಿಸ್ತಾನ ವಿರುದ್ಧ ಭಾರತ ಸೋಲಬಾರದೋ ಅದೇ ರೀತಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಸೋಲುವುದನ್ನು ಯಾವ ಅಭಿಮಾನಿಗೂ ಅರಗಿಸಿಕೊಳ್ಳಲಾಗದು.

ಆರ್‌ಸಿಬಿ ಪ್ರಶಸ್ತಿ ಗೆದ್ದಿರಲಾರದು. ಆದರೆ ಚೆನ್ನೈ ವಿರುದ್ಧ ಉತ್ತಮ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಇದೀಗ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಸಿಂಹದ ಗುಹೆಗೆ ನುಗ್ಗಿ ಬೇಟೆಯಾಡುವ ತವಕದಲ್ಲಿದೆ.

ಚೆನ್ನೈನಲ್ಲಿ ಮೊದಲ ಪಂದ್ಯ ಆಡುವುದರ ಸಲುವಾಗಿ ಆರ್‌ಸಿಬಿ ಆಟಗಾರರು ಚೆನ್ನೈ ಪ್ರಯಾಣವನ್ನು ಬೆಳೆಸಿದ್ದಾರೆ. ಇದರಂತೆ ಟ್ವಿಟರ್‌ನಲ್ಲಿ ಚೆನ್ನೈಗೆ ಕರೆಯನ್ನು ನೀಡಲಾಗಿದೆ.

ಮೈದಾನದಲ್ಲಿ ಬದ್ಧ ವೈರಿ ಚೆನ್ನೈ ವಿರುದ್ಧ ಪಂದ್ಯ ಗೆದ್ದು ಆರ್‌ಸಿಬಿ 2019ರ ಸಾಲಿನ ಪ್ರಯಾಣದಲ್ಲಿ ಶುಭಾರಂಭ ಮಾಡಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌