ಬೆಂಗಳೂರು: ನಾಲ್ಕು ತಂಡಗಳ ಆಟಗಾರರಲ್ಲಿ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದೆ. ಇದರ ಬೆನ್ನಲ್ಲೇ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಹಾಗೂ ಆಸೀಸ್ನ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ಗೆ ಮನೆಯಿಂದ ವಿಶೇಷ ಪತ್ರವೊಂದು ಬಂದಿದೆ. ಭಾವನಾತ್ಮ ಸಂದೇಶ ಹೊಂದಿದ್ದ ಈ ಪತ್ರವನ್ನು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಮಂಗಳವಾರ ಸಂಜೆ ಹಂಚಿಕೊಂಡಿದ್ದಾರೆ.
ಕಳಪೆ ಲಯ ಕಾರಣ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ಅಚ್ಚರಿ ಎಂಬಂತೆ ಆಡುವ ಹನ್ನೊಂದರ ಬಳಗದಿಂದಲೂ ಹೊರಬಿದ್ದಿರುವ 33 ವರ್ಷದ ಅನುಭವಿ ಎಡಗೈ ಬ್ಯಾಟ್ಸ್ಮನ್ ಸದ್ಯ ಎಸ್ಆರ್ಎಚ್ ತಂಡದೊಂದಿಗೆ ದಿಲ್ಲಿಯ ಖಾಸಗಿ ಹೋಟೆಲ್ ಒಂದರಲ್ಲೇ ಉಳಿದಿದ್ದಾರೆ.
ಐಪಿಎಲ್ 2021 ಟೂರ್ನಿಯ ಅಂಕಪಟ್ಟಿ
ಈ ಸಂದರ್ಭದಲ್ಲಿ ತಮ್ಮ ಕುಟುಂಬದಿಂದ ತಾವು ಸ್ವೀಕರಿಸಿದ ವಿಶೇಷ ಪತ್ರದ ಫೋಟೊವನ್ನು ವಾರ್ನರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರಿ ಸದ್ದು ಮಾಡಿದೆ. ವಾರ್ನರ್ ಪುತ್ರಿ "ಪ್ಲೀಸ್ ಡ್ಯಾಡಿ, ನೇರವಾಗಿ ಮನೆಗೆ ಬನ್ನಿ," ಎಂದು ಆತಂಕದಿಂದ ಬರೆದಿರುವ ಪತ್ರ ಅಭಿಮಾನಿಗಳ ಹೃದಯ ಕರಗುವಂತೆ ಮಾಡಿದೆ.
ಫೋಟೊಲ್ಲಿ ವಾರ್ನರ್ ಕುಟುಂಬವನ್ನು ಚಿತ್ರಿಸಲಾಗಿದ್ದು, ಕೆಳಗೆ "ಪ್ಲೀಸ್ ಡ್ಯಾಡಿ, ಕಮ್ ಹೋಮ್ ಸ್ಟ್ರೇಟ್ ಅವೇ. ವೀ ಮಿಸ್ಟ್ ಯೂ ಅಂಡ್ ಲವ್ ಯೂ ಅ ಲಾಟ್. ಲವ್ ಫ್ರಂ ಐವಿ, ಇಂಡಿ ಅಂಡ್ ಇಸ್ಲಾ," ಎಂಬ ಭಾವನಾತ್ಮಕ ಸಂದೇಶವಿದೆ.
ವಾರ್ನರ್ ಪ್ರತಿಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ತಮ್ಮ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ಕಾರಣ ಕುಟುಂಬದವರನ್ನು ತಾಯ್ನಾಡಿನಲ್ಲೇ ಬಿಟ್ಟು ಏಕಾಂಗಿಯಾಗಿ ಸನ್ರೈಸರ್ಸ್ ತಂಡದ ಸೇವೆಗೆ ಹಾಜರಾಗಿದ್ದರು.
ಐಪಿಎಲ್ ಮುಂದೂಡಿ ಬಿಸಿಸಿಐ ಅನುಭವಿಸಿದ ನಷ್ಟ ಬರೋಬ್ಬರಿ 2500 ಕೋಟಿ ರೂ.!
ಕಳೆದ ಎರಡು ದಿನಗಳಲ್ಲಿ ವಿವಿಧ ಫ್ರಾಂಚೈಸಿ ತಂಡದ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಅವರಲ್ಲೂ ಕೊರೊನಾ ಪಾಸಿಟೀವ್ ಬಂದಿದ್ದು, ಇದರ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ಮುಂದುಡೂವ ನಿರ್ಧಾರ ಪ್ರಕಟಿಸಿತು.
ಇನ್ನು ವಾರ್ನರ್ ಸೇರಿದಂತೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ಆಟಗಾರರು ಮೇ 15ರವರೆಗೆ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ಸರಕಾರ ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಿರುವ ಕಾರಣ ಮೇ 15ರ ಬಳಿಕವಷ್ಟೇ ಆಸೀಸ್ ಆಟಗಾರರು ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗಲಿದೆ. ಇನ್ನು ಬಿಸಿಸಿಐ ಕೂಡ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲ ಆಟಗಾರರನ್ನು ಸುರಕ್ಷಿತವಾಗಿ ಅವರ ಮನೆ ಸೇರಿಸುವ ಜವಾಬ್ದಾರಿ ಹೊತ್ತು ಭರವಸೆ ಕೂಡ ನೀಡಿದೆ.
ಐಪಿಎಲ್ ಪುನರಾರಂಭದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಬ್ರಿಜೇಶ್ ಪಟೇಲ್!
"ಕ್ರಿಸ್ ಆಸ್ಟ್ರೇಲಿಯಾ ಈ ಬಗ್ಗೆ ಬಿಸಿಸಿಐ ಜೊತೆಗೆ ನೇರ ಸಂಪರ್ಕದಲ್ಲಿದೆ. ಆಸ್ಟ್ರೇಲಿಯಾದ ಆಟಗಾರರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಕೋಚ್ಗಳು, ಅಧಿಕಾರಿಗಳು, ಕಾಮೆಂಟೇಟರ್ಸ್ ಎಲ್ಲರನ್ನು ಸುರಕ್ಷಿತವಾಗಿ ಮನೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಇನ್ನು ಐಪಿಎಲ್ 2021 ಟೂರ್ನಿಯಲ್ಲಿ ಈವರೆಗೆ 29 ಪಂದ್ಯಗಳು ಅಂತ್ಯಗೊಂಡಿದ್ದು, ಉಳಿದ 31 ಪಂದ್ಯಗಳನ್ನು ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಅಥವಾ ನಂತರ ಆಯೋಜಿಸಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಕಳಪೆ ಲಯ ಕಾರಣ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ಅಚ್ಚರಿ ಎಂಬಂತೆ ಆಡುವ ಹನ್ನೊಂದರ ಬಳಗದಿಂದಲೂ ಹೊರಬಿದ್ದಿರುವ 33 ವರ್ಷದ ಅನುಭವಿ ಎಡಗೈ ಬ್ಯಾಟ್ಸ್ಮನ್ ಸದ್ಯ ಎಸ್ಆರ್ಎಚ್ ತಂಡದೊಂದಿಗೆ ದಿಲ್ಲಿಯ ಖಾಸಗಿ ಹೋಟೆಲ್ ಒಂದರಲ್ಲೇ ಉಳಿದಿದ್ದಾರೆ.
ಐಪಿಎಲ್ 2021 ಟೂರ್ನಿಯ ಅಂಕಪಟ್ಟಿ
ಈ ಸಂದರ್ಭದಲ್ಲಿ ತಮ್ಮ ಕುಟುಂಬದಿಂದ ತಾವು ಸ್ವೀಕರಿಸಿದ ವಿಶೇಷ ಪತ್ರದ ಫೋಟೊವನ್ನು ವಾರ್ನರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರಿ ಸದ್ದು ಮಾಡಿದೆ. ವಾರ್ನರ್ ಪುತ್ರಿ "ಪ್ಲೀಸ್ ಡ್ಯಾಡಿ, ನೇರವಾಗಿ ಮನೆಗೆ ಬನ್ನಿ," ಎಂದು ಆತಂಕದಿಂದ ಬರೆದಿರುವ ಪತ್ರ ಅಭಿಮಾನಿಗಳ ಹೃದಯ ಕರಗುವಂತೆ ಮಾಡಿದೆ.
ಫೋಟೊಲ್ಲಿ ವಾರ್ನರ್ ಕುಟುಂಬವನ್ನು ಚಿತ್ರಿಸಲಾಗಿದ್ದು, ಕೆಳಗೆ "ಪ್ಲೀಸ್ ಡ್ಯಾಡಿ, ಕಮ್ ಹೋಮ್ ಸ್ಟ್ರೇಟ್ ಅವೇ. ವೀ ಮಿಸ್ಟ್ ಯೂ ಅಂಡ್ ಲವ್ ಯೂ ಅ ಲಾಟ್. ಲವ್ ಫ್ರಂ ಐವಿ, ಇಂಡಿ ಅಂಡ್ ಇಸ್ಲಾ," ಎಂಬ ಭಾವನಾತ್ಮಕ ಸಂದೇಶವಿದೆ.
ವಾರ್ನರ್ ಪ್ರತಿಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ತಮ್ಮ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ಕಾರಣ ಕುಟುಂಬದವರನ್ನು ತಾಯ್ನಾಡಿನಲ್ಲೇ ಬಿಟ್ಟು ಏಕಾಂಗಿಯಾಗಿ ಸನ್ರೈಸರ್ಸ್ ತಂಡದ ಸೇವೆಗೆ ಹಾಜರಾಗಿದ್ದರು.
ಐಪಿಎಲ್ ಮುಂದೂಡಿ ಬಿಸಿಸಿಐ ಅನುಭವಿಸಿದ ನಷ್ಟ ಬರೋಬ್ಬರಿ 2500 ಕೋಟಿ ರೂ.!
ಕಳೆದ ಎರಡು ದಿನಗಳಲ್ಲಿ ವಿವಿಧ ಫ್ರಾಂಚೈಸಿ ತಂಡದ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಅವರಲ್ಲೂ ಕೊರೊನಾ ಪಾಸಿಟೀವ್ ಬಂದಿದ್ದು, ಇದರ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ಮುಂದುಡೂವ ನಿರ್ಧಾರ ಪ್ರಕಟಿಸಿತು.
ಇನ್ನು ವಾರ್ನರ್ ಸೇರಿದಂತೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ಆಟಗಾರರು ಮೇ 15ರವರೆಗೆ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ಸರಕಾರ ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಿರುವ ಕಾರಣ ಮೇ 15ರ ಬಳಿಕವಷ್ಟೇ ಆಸೀಸ್ ಆಟಗಾರರು ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗಲಿದೆ. ಇನ್ನು ಬಿಸಿಸಿಐ ಕೂಡ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲ ಆಟಗಾರರನ್ನು ಸುರಕ್ಷಿತವಾಗಿ ಅವರ ಮನೆ ಸೇರಿಸುವ ಜವಾಬ್ದಾರಿ ಹೊತ್ತು ಭರವಸೆ ಕೂಡ ನೀಡಿದೆ.
ಐಪಿಎಲ್ ಪುನರಾರಂಭದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಬ್ರಿಜೇಶ್ ಪಟೇಲ್!
"ಕ್ರಿಸ್ ಆಸ್ಟ್ರೇಲಿಯಾ ಈ ಬಗ್ಗೆ ಬಿಸಿಸಿಐ ಜೊತೆಗೆ ನೇರ ಸಂಪರ್ಕದಲ್ಲಿದೆ. ಆಸ್ಟ್ರೇಲಿಯಾದ ಆಟಗಾರರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಕೋಚ್ಗಳು, ಅಧಿಕಾರಿಗಳು, ಕಾಮೆಂಟೇಟರ್ಸ್ ಎಲ್ಲರನ್ನು ಸುರಕ್ಷಿತವಾಗಿ ಮನೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಇನ್ನು ಐಪಿಎಲ್ 2021 ಟೂರ್ನಿಯಲ್ಲಿ ಈವರೆಗೆ 29 ಪಂದ್ಯಗಳು ಅಂತ್ಯಗೊಂಡಿದ್ದು, ಉಳಿದ 31 ಪಂದ್ಯಗಳನ್ನು ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಅಥವಾ ನಂತರ ಆಯೋಜಿಸಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.