ಆ್ಯಪ್ನಗರ

ರನೌಟ್ ಅಥವಾ ನಾಟೌಟ್? ಏನಿದು ಘಟನೆ!

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಡೆಲ್ಲ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ದೀಪಕ್ ಹೂಡಾ ರನೌಟ್ ಪ್ರಕರಣವು ಗೊಂದಲವನ್ನುಂಟು ಮಾಡಿತ್ತು.

Vijaya Karnataka Web 8 May 2019, 9:52 pm
ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪ್ಲೇ-ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿತ್ತು.
Vijaya Karnataka Web hooda-paul-01


ಹೈದರಾಬಾದ್ ಬ್ಯಾಟಿಂಗ್ ವೇಳೆಯಲ್ಲಿ ಡೆಲ್ಲಿ ವೇಗಿ ಕೀಮೊ ಪಾಲ್ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಕುತೂಹಲಕಾರಿ ಘಟನೆ ನಡೆದಿತ್ತು.

ಕ್ರೀಸಿನಲ್ಲಿದ್ದ ದೀಪಕ್ ಹೂಡಾ ಮಿಸ್ ಮಾಡಿದ ಚೆಂಡು ವಿಕೆಟ್ ಕೀಪರ್ ರಿಷಬ್ ಪಂತ್ ಕೈ ಸೇರಿತ್ತು. ಈ ಸಂದರ್ಭದಲ್ಲಿ ನಾನ್-ಸ್ಟ್ರೇಕರ್‌ನಲ್ಲಿದ್ದ ಸಹ ಬ್ಯಾಟ್ಸ್‌ಮನ್ ರಶೀದ್ ಖಾನ್ ರನ್ ಕಬಳಿಸುವಲ್ಲಿ ಯತ್ನಿಸಿದರು.

ಇದನ್ನು ತಡವಾಗಿ ಅರಿತ ದೀಪಕ್ ಹೂಡಾ ಓಡುವ ರಭಸದಲ್ಲಿದ್ದರು. ಈ ಸಂದರ್ಭದಲ್ಲಿ ಪಂತ್ ನೇರವಾಗಿ ನಾನ್-ಸ್ಟ್ರೈಕರ್ ಗುರಿಯಾಗಿರಿಸಿಕೊಂಡು ಚೆಂಡನ್ನು ಥ್ರೋ ಮಾಡಿದರು.

ಬೌಲಿಂಗ್ ಮಾಡಿ ಅಲ್ಲೇ ಪಿಚ್ ಸಮೀಪವಿದ್ದ ಕೀಮೊ ಪಾಲ್, ಚೆಂಡು ತಮ್ಮತ್ತ ಬರುವುದನ್ನು ಗಮನಿಸಿ ಚೆಂಡನ್ನು ಹಿಡಿಯುವುದಕ್ಕಾಗಿ ಪಿಚ್ ಮೇಲೆ ಡೈವ್ ಹೊಡೆದರು. ಈ ಸಂದರ್ಭದಲ್ಲಿ ತಮ್ಮತ್ತ ಓಡಿ ಬರುತ್ತಿದ್ದ ಹೂಡಾ ಜತೆಗೆ ಢಿಕ್ಕಿ ಹೊಡೆದರು.


ಅತ್ತ ಇವರಿಬ್ಬರನ್ನು ಓವರ್‌ಟೇಕ್ ಮಾಡಿದ ಚೆಂಡು ನೇರವಾಗಿ ಮತ್ತೊಂದು ತುದಿಯಲ್ಲಿ ವಿಕೆಟ್‌ಗೆ ಬಡಿದಿತ್ತು. ಈ ಸಂದರ್ಭದಲ್ಲಿ ಅಂಪೈರ್ ಮಧ್ಯೆ ಪ್ರವೇಶದಿಂದ ಗೊಂದಲವುಂಟಾಯಿತು.

ಏಕ ನೋಟದಲ್ಲಿ ರನೌಟ್ ಎಂಬುದು ತಿಳಿದು ಬಂದರೂ ನಾಯಕ ಶ್ರೇಯಸ್ ಅಯ್ಯರ್ ಬಳಿ ತೆರಳಿದ ಅಂಪೈರ್ ರವಿ, ಘಟನೆ ವಿವರಿಸಿ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮುಂದುವರಿಸಲು ಅನುವು ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದರು.

ಈ ಘಟನೆಯ ಬಗ್ಗೆ ಸ್ಪಷ್ಟ ಅರಿವಿಲ್ಲದ ಅಯ್ಯರ್ ಕ್ರೀಡಾಸ್ಫೂರ್ತಿ ಮೆರೆದು ಮೊದಲು ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟರು. ಇದನ್ನು ಗಮನಿಸಿದ ಪಂತ್, ತಕ್ಷಣ ನಾಯಕ ಅಯ್ಯರ್ ಬಳಿ ತೆರಳಿ ತಮ್ಮ ನಿರ್ಧಾರವನ್ನು ಬದಲಾಯಿಸುವಂತೆ ವಿನಂತಿಸಿದರು. ಬಳಿಕ ಪಂತ್ ಸಲಹೆಯಂತೆ ಅಯ್ಯರ್ ತಮ್ಮ ನಿರ್ಣಯವನ್ನು ಹಿಂಪಡೆದರು. ಪರಿಣಾಮ ಹೂಡಾಗೆ ಕ್ರೀಸ್ ತೊರೆಯಬೇಕಾಗಿ ಬಂದಿತ್ತು. ಪ್ರಸ್ತುತ ಘಟನೆಯು ಕೆಲಹೊತ್ತು ಗೊಂದಲವನ್ನು ಸೃಷ್ಟಿ ಮಾಡಿತು. ಆದರೆ ಯಾವುದೇ ವಾಗ್ವಾದಕ್ಕೆ ಮುಂದಾಗದ ಹೂಡಾ ನೇರವಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌