ಆ್ಯಪ್ನಗರ

ಐಪಿಎಲ್‌ನಲ್ಲಿ ಆರ್‌ಸಿಬಿ ಕೆಟ್ಟ ಪ್ರದರ್ಶನಕ್ಕೆ ಕ್ಷಮೆ ಕೋರಿದ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತಿ ಕೆಟ್ಟ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಕ್ಷಮೆಯಾಚನೆ ನಡೆಸಿದ್ದಾರೆ.

TOI.in 24 May 2018, 3:51 pm
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತಿ ಕೆಟ್ಟ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಕ್ಷಮೆಯಾಚನೆ ನಡೆಸಿದ್ದಾರೆ.
Vijaya Karnataka Web virat-kohli-sad-02


'ಈ ಸಲ ಕಪ್ ನಮ್ದೆ' ಎಂಬ ಧ್ಯೇಯಯೊಂದಿಗೆ ಆರ್‌ಸಿಬಿ ಐಪಿಎಲ್ 11ರಲ್ಲಿ ಕಣಕ್ಕಿಳಿದಿತ್ತು. ಆದರೆ ಕನಿಷ್ಠ ಪ್ಲೇ-ಆಫ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಚೊಚ್ಚಲ ಐಪಿಎಲ್ ಟ್ರೋಫಿ ಕನಸು ಕನಸಾಗಿಯೇ ಉಳಿದಿದೆ.

"ಗೆಲ್ಲಬಹುದು ಅಥವಾ ಪಾಠ ಕಲಿಯಬಹುದು" ಎಂಬ ಪರಿಕಲ್ಪನೆಯಲ್ಲಿ ನಾನು ನಂಬಿಕೆಯಿಡುತ್ತೇನೆ. "ನಾವು ಕಠಿಣ ಹೋರಾಟ ನೀಡಿದ್ದು, ನಮ್ಮ ಸರ್ವಸ್ವವನ್ನು ಅರ್ಪಿಸಿದ್ದೇವೆ. ಒಂದಂತೂ ಖಚಿತ, ಈ ಆವೃತ್ತಿಯಿಂದ ತಪ್ಪನ್ನು ಕಲಿತುಕೊಂಡು ಮುಂದಿನ ವರ್ಷ ಮತ್ತಷ್ಟು ಬಲಶಾಲಿಯಾಗಿ ನಾವು ತಿರುಗಿಬೀಳಲಿದ್ದೇವೆ" ಎಂದು ಕೊಹ್ಲಿ ಭರವಸೆ ನೀಡಿದರು.

"ನಾವು ಅವಕಾಶಗಳನ್ನು ಬಾಚಿಕೊಳ್ಳಬಹುದಿತ್ತು. ಈ ಆವೃತ್ತಿಯ ಪ್ರದರ್ಶನದ ಬಗ್ಗೆ ಹೆಮ್ಮೆಯಿಲ್ಲ. ನಮ್ಮ ಪ್ರದರ್ಶನದ ಬಗ್ಗೆ ತೀವ್ರ ನೊಂದಿದ್ದೇನೆ. ಅಭಿಮಾನಿಗಳ ನಿರೀಕ್ಷೆ ಮುಟ್ಟಲು ಸಾಧ್ಯವಾಗದಿರುವುದಕ್ಕೆ ಆಳವಾಗಿ ಕ್ಷಮೆ ಕೋರುತ್ತೇನೆ" ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಇವೆಲ್ಲವೂ ಬದುಕಿನ ಭಾಗವಾಗಿದ್ದು, ನಾವು ಬಯಸಿದ್ದೆಲ್ಲ ಸಿಗುವುದಿಲ್ಲ. ಮುಂದಿನ ವರ್ಷ ಏನು ಮಾಡಬಹುದೆಂಬುದನ್ನು ಆಟಗಾರರು ಅರಿತುಕೊಳ್ಳಬೇಕು. ಮುಂದಿನ ವರ್ಷ ಇನ್ನು ಉತ್ತಮ ಪ್ರದರ್ಶನ ನೀಡುವ ನಂಬಿಕೆಯಿದೆ" ಎಂದು ನುಡಿದರು.

ವೈಯಕ್ತಿಕವಾಗಿ ಉತ್ತಮವಾಗಿ ಆಡಿರುವ ವಿರಾಟ್ 14 ಪಂದ್ಯಗಳಲ್ಲಿ 54.80ರ ಸರಾಸರಿಯಲ್ಲಿ 548 ರನ್ ಗಳಿಸಿದ್ದರು. ಆದರೂ ಆರ್‌ಸಿಬಿ ನಿರ್ವಹಣೆ ಉತ್ತಮವಾಗಿರಲಿಲ್ಲ. ಆಡಿರುವ 14 ಪಂದ್ಯಗಳಲ್ಲಿ ಆರರಲ್ಲಿ ಮಾತ್ರ ಗೆಲುವು ದಾಖಲಿಸಿರುವ ಆರ್‌ಸಿಬಿ ಒಟ್ಟು 12 ಅಂಕಗಳೊಂದಿಗೆ ಆರನೇ ಸ್ಥಾನ್ಕಕೆ ತೃಪ್ತಿಪಟ್ಟುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌