ಆ್ಯಪ್ನಗರ

ಕೂಲ್ ಕಳೆದುಕೊಂಡ ಕೂಲ್ ಕ್ಯಾಪ್ಟನ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಸಹ ಆಟಗಾರ ದೀಪಕ್ ಚಹರ್ ವಿರುದ್ಧವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗರಂ ಆಗಿರುವ ಘಟನೆ ನಡೆದಿದೆ.

Vijaya Karnataka Web 11 May 2019, 5:51 pm
ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಮುನ್ನಡೆದಿದೆ.
Vijaya Karnataka Web ms-dhoni-13


ಈ ನಡುವೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸಹ ಆಟಗಾರ ದೀಪಕ್ ಚಹರ್ ವಿರುದ್ಧ ಸಿಟ್ಟಾಗಿರುವುದು ಹೆಚ್ಚಿನ ಸುದ್ದಿ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೇಳೆಯಲ್ಲಿ ಇಮ್ರಾನ್ ತಾಹೀರ್ ದಾಳಿಯ ವೇಳೆ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಚಹರ್, ಎಡಗೈ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕ್ಯಾಚ್‌ನ್ನು ಮಿಸ್ ಮಾಡಿರುವುದೇ ಧೋನಿ ಕೋಪಕ್ಕೆ ಕಾರಣವಾಗಿದೆ.

ಸಿಕ್ಸರ್ ಲೈನ್‌ನಲ್ಲಿ ಕ್ಯಾಚ್ ಹಿಡಿದ ಚಹರ್ ತಾವು ಅರಿಯದೇ ಬೌಂಡರಿ ಗೆರೆಯನ್ನು ದಾಟಿಯೇ ಬಿಟ್ಟರು. ಇದರಿಂದಾಗಿ ಅಮೂಲ್ಯ ವಿಕೆಟ್ ಕೈಚೆಲ್ಲುವಂತಾಗಿತ್ತು.

ರಿಷಬ್ ಪಂತ್ ವಿಕೆಟ್ ಅತ್ಯಂತ ಅಮೂಲ್ಯವಾದುದು ಎಂಬುದು ಧೋನಿಗೆ ತಿಳಿದಿತ್ತು. ಇದೇ ಕಾರಣಕ್ಕಾಗಿ ಚಹರ್ ಮೇಲೆ ಕೋಪಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌