ವಿಶಾಖಪಟ್ಟಣ: ಮಕ್ಕಳು ಜತೆಗಿದ್ದರೆ ಯಾವುದೇ ಟೆನ್ಷನ್ ಮರೆಯಬಹುದು ಎಂಬ ಮಾತಿದೆ. ಇದರಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆದಿದ್ದಾರೆ.
ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಲ್ಲಿ ಗೆದ್ದರೆ ಮಾತ್ರ ಫೈನಲ್ ಪ್ರವೇಶ ಸಾಧ್ಯವಾಗಲಿದೆ.
ನಾಲ್ಕನೇ ಬಾರಿಗೆ ಕಿರೀಟ ಎದುರು ನೋಡುತ್ತಿರುವ ಚೆನ್ನೈ, ಐಪಿಎಲ್ 12ನೇ ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದೆ. ಇದರಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ.
ಇವೆಲ್ಲ ಒತ್ತಡಗಳ ನಡುವೆ ನಾಯಕ ಧೋನಿ ಮಗಳು ಸಾಕ್ಷಿ ಸಿಂಗ್ ಝಿವಾ ಜತೆ ಸಮಯ ಕಳೆದಿದ್ದಾರೆ. ಈ ಮೂಲಕ ರಿಲಾಕ್ಸ್ ಮೂಡ್ಗೆ ಜಾರಿದ್ದಾರೆ.
ಕೂಲ್ ಕಪ್ತಾನ ಎಂದೇ ಹೆಸರು ಮಾಡಿರುವ ಧೋನಿ ಮೈದಾನದ ಹೊರಗೆ ಹಾಗೂ ಒಳಗೆ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಮೈದಾನದ ಒಳಗೆ ಲಗ್ಗೆಯಿಟ್ಟು ಅಂಪೈರ್ ಜತೆ ವಾಗ್ವಾದ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಲ್ಲಿ ಗೆದ್ದರೆ ಮಾತ್ರ ಫೈನಲ್ ಪ್ರವೇಶ ಸಾಧ್ಯವಾಗಲಿದೆ.
ನಾಲ್ಕನೇ ಬಾರಿಗೆ ಕಿರೀಟ ಎದುರು ನೋಡುತ್ತಿರುವ ಚೆನ್ನೈ, ಐಪಿಎಲ್ 12ನೇ ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದೆ. ಇದರಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ.
ಇವೆಲ್ಲ ಒತ್ತಡಗಳ ನಡುವೆ ನಾಯಕ ಧೋನಿ ಮಗಳು ಸಾಕ್ಷಿ ಸಿಂಗ್ ಝಿವಾ ಜತೆ ಸಮಯ ಕಳೆದಿದ್ದಾರೆ. ಈ ಮೂಲಕ ರಿಲಾಕ್ಸ್ ಮೂಡ್ಗೆ ಜಾರಿದ್ದಾರೆ.
ಕೂಲ್ ಕಪ್ತಾನ ಎಂದೇ ಹೆಸರು ಮಾಡಿರುವ ಧೋನಿ ಮೈದಾನದ ಹೊರಗೆ ಹಾಗೂ ಒಳಗೆ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಮೈದಾನದ ಒಳಗೆ ಲಗ್ಗೆಯಿಟ್ಟು ಅಂಪೈರ್ ಜತೆ ವಾಗ್ವಾದ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು.